AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕ್ಕಾಗಿ ಅಪ್ರಾಪ್ತ ಮಗಳನ್ನ 32ರ ವ್ಯಕ್ತಿ ಜತೆ ಮದ್ವೆ ಮಾಡಿದ ತಂದೆ, ರೊಕ್ಕ ಕೊಟ್ಟು ಮದ್ವೆಯಾದವ ಕಂಬಿ ಹಿಂದೆ!

ಪಾಪಿ ತಂದೆಯೊಬ್ಬ ಹಣಕ್ಕಾಗಿ ತನ್ನ ಅಪ್ರಾಪ್ತ ಮಗಳನ್ನ 32ರ ವ್ಯಕ್ತಿ ಜತೆ ಮದ್ವೆ ಮಾಡಿಕೊಟ್ಟಿದ್ದಾನೆ. ಇನ್ನು ಕುಡುಕನಿಗೆ ಹಣ ನೀಡಿ ಆತಮ ಮಗಳನ್ನು ಮದ್ವೆಯಾದವನ ಸ್ಥಿತಿ ಏನಾಯ್ತು ಅಂತ ಸ್ಪಲ್ಪ ನೋಡಿ.

ಹಣಕ್ಕಾಗಿ ಅಪ್ರಾಪ್ತ ಮಗಳನ್ನ  32ರ ವ್ಯಕ್ತಿ ಜತೆ ಮದ್ವೆ ಮಾಡಿದ ತಂದೆ, ರೊಕ್ಕ ಕೊಟ್ಟು ಮದ್ವೆಯಾದವ ಕಂಬಿ ಹಿಂದೆ!
ಸಾಂಧರ್ಬಿಕ ಚಿತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Oct 02, 2022 | 8:03 PM

Share

ಚೆನ್ನೈ: ಮಕ್ಕಳು ಮಕ್ಕಳೇ. ಯಾವ ಸಮಯದಲ್ಲಿಯಾದರೂ ತನ್ನ ಮಗಳ ಜೇವನ ಏರುಪೇರಾದರೆ ಅದು ತಂದೆಗೆ ಭರಿಸಲಾದದ ದುಃಖ. ಮಕ್ಕಳು ಜೀವನದಲ್ಲಿ ಎಡವದಿರಲೆಂದು ಅಪ್ಪ-ಅಮ್ಮ ಮುದ್ದು ಮಾಡಿ ಬೆಳೆಸ್ತಾರೆ. ಅರಿವಿದ್ದೋ, ಅರಿವಿಲ್ಲದೆಯೋ ಮಕ್ಕಳು ಎಡವಿ ಬಿದ್ದಾಗ ತಂದೆ-ತಾಯಿಗಳೇ ಆಸರೆಯಾಗ್ತಾರೆ. ಆದ್ರೆ, ಇಲ್ಲೊಬ್ಬ ಅಪ್ಪ ಹಣಕ್ಕಾಗಿ ತನ್ನ ಅಪ್ರಾಪ್ತ ಮಗಳನ್ನ 32ರ ವಯಸ್ಸಿನವನೊಂದಿಗೆ ಮದ್ವೆ ಮಾಡಿಕೊಟ್ಟಿದ್ದಾನೆ.

ಹೌದು….ತಂದೆಯೊಬ್ಬ ಹಣಕ್ಕಾಗಿ 13 ವರ್ಷದ ಮಗಳಿಗೆ 32 ವರ್ಷದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿದ ಘಟನೆ ತಮಿಳುನಾಡಿನ ಪೆರಂಲೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ಯವ್ಯಸನಿ ವ್ಯಕ್ತಿಗೆ ಹಣ ನೀಡಿ ಆತನ ಅಪ್ರಾಪ್ತ ಮಗಳನ್ನ ಮದುವೆಯಾಗಿದ್ದವ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಎಷ್ಟು ಮದ್ವೆಯಾಗಿದ್ದೀರಿ, ಯಾರೊಂದಿಗೆ ಸಂಸಾರ ಮಾಡ್ತಿದ್ದೀರಾ? RTI ಅಡಿಯಲ್ಲಿ ಲೇಡಿ ಅಧಿಕಾರಿಯ ಮಾಹಿತಿ ಕೇಳಿದ ಭೂಪ

ಬಾಲಕಿಯ ತಂದೆ ಮದ್ಯವಸನಿಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಹಣ ಬೇಕಿತ್ತು. ಅದೇ ಸಮಯಕ್ಕೆ ವರತರಾಜ್‍(32) ಹಣ ನೀಡುತ್ತೇನೆ. ಆದ್ರೆ, ಅದರ ಬದಲು ಮಗಳನ್ನು ಮದುವೆ ಮಾಡಿಕೊಡಲು ಹೇಳಿದ್ದ. ಈ ಹಿನ್ನೆಲೆಯಲ್ಲಿ ಮಗಳನ್ನು ವರತರಾಜ್‍ಗೆ ಮದುವೆ ಮಾಡಿಕೊಡಲು ಬಾಲಕಿಯ ತಂದೆ ಹಾಗೂ ಆತನ ಸಹೋದರಿ ಮುತ್ತುಲಕ್ಷ್ಮಿ ಸೇರಿ ಪ್ಲ್ಯಾನ್ ಮಾಡಿಕೊಂಡಿದ್ದರು. ಅದರಂತೆ ಮೂರು ತಿಂಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದಾರೆ.

ಈ ವಿಚಾರ ಪೊಲೀಸರಿಗೆ ತಿಳಿದಿದ್ದು, ಹಣ ನೀಡಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿದ್ದ ವರತರಾಜ್‍ ಎನ್ನುವಾತನನ್ನು ಇಂದು(ಸೆಪ್ಟೆಂಬರ್ 02) ಪೊಲೀಸರು ಬಂಧಿಸಿದ್ದಾರೆ. ವರತರಾಜ್ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಬಾಲಕಿಯ ತಂದೆ ಮತ್ತು ಆತನ ಸಹೋದರಿ ಮುತ್ತುಲಕ್ಷ್ಮಿ ತಲೆಮರಿಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Sun, 2 October 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್