AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​

ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆ ತೆಗೆಯುತ್ತಿದ್ದೆವೆ. ಅದಕ್ಕೂ ಮುನ್ನ ಮನೆ ಮನೆಗೆ ಚಿಕಿತ್ಸೆ ನೀಡಿ ಪ್ರಚಾರ ಮಾಡಲು ನಾವು ಬಂದಿದ್ದೆವೆ. ಪಾರ್ಶ್ವವಾಯುಗೆ ಪೀಡಿತರನ್ನು ಕೇವಲ 40 ದಿನದಲ್ಲಿ ಸರಿ ಮಾಡುತ್ತೇವೆ. ನಾವು ನೀಡುವ ಚಿಕಿತ್ಸೆಯಿಂದ ಬಹಳಷ್ಟು ಜನರು ವಾಸಿಯಾಗಿದ್ದಾರೆ ಎಂದು ಪಾರ್ಶ್ವವಾಯು ಪೀಡಿತರಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಲಾಗಿದೆ.

ಉತ್ತರ ಕನ್ನಡ: ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ಹಣ ಪಡೆದು ವಂಚಿಸಿದ ಗ್ಯಾಂಗ್​
ಭಟ್ಕಳ ನಗರ ಪೊಲೀಸ್ ಠಾಣೆ
ವಿನಾಯಕ ಬಡಿಗೇರ್​
| Edited By: ವಿವೇಕ ಬಿರಾದಾರ|

Updated on: Feb 09, 2024 | 11:54 AM

Share

ಕಾರವಾರ, ಫೆಬ್ರವರಿ 09: ಪಾರ್ಶ್ವವಾಯು (Paralysis) ಪೀಡಿತರಿಗೆ ಚಿಕಿತ್ಸೆ ನೀಡುತ್ತೇವೆಂದು ನಕಲಿ ವೈದ್ಯರ ಗ್ಯಾಂಗ್​ವೊಂದು ರೋಗಿಗಳಿಂದ ಸಾವಿರಾರು ರೂಪಾಯಿ ಹಣ ಪಡೆದು ವಂಚಿಸಿದೆ. ಆರೋಪಿಗಳು ಉತ್ತರ ಕನ್ನಡ (Uttar Kannada) ಜಿಲ್ಲೆಯ ಭಟ್ಕಳ (Batakal), ಹೊನ್ನಾವರ (Honnavar) ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ. “ಪಾರ್ಶ್ವವಾಯು ಪೀಡಿತರಿಗೆ ಚಿಕಿತ್ಸೆ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಆಸ್ಪತ್ರೆ ತೆಗೆಯುತ್ತಿದ್ದೆವೆ. ಅದಕ್ಕೂ ಮುನ್ನ ಮನೆ ಮನೆಗೆ ಚಿಕಿತ್ಸೆ ನೀಡಿ ಪ್ರಚಾರ ಮಾಡಲು ನಾವು ಬಂದಿದ್ದೆವೆ.

ಪಾರ್ಶ್ವವಾಯುಗೆ ಪೀಡಿತರನ್ನು ಕೇವಲ 40 ದಿನದಲ್ಲಿ ಸರಿ ಮಾಡುತ್ತೇವೆ. ನಾವು ನೀಡುವ ಚಿಕಿತ್ಸೆಯಿಂದ ಬಹಳಷ್ಟು ಜನರು ವಾಸಿಯಾಗಿದ್ದಾರೆ” ಎಂದು ಹೇಳಿಕೊಂಡು ಆರೋಪಿಗಳು ಮನೆ ಮನೆ ಭೇಟಿ ನೀಡಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವವರಿಗೆ “ನಾವೆ ನಿಮಗೆ ಖುದ್ದು ಮಸಾಜ್ ಮಾಡುತ್ತೇವೆ, ನಾವು ಔಷಧಿ ಕೊಡುತ್ತೇವೆ. ಅದನ್ನು ತೆಗೆದುಕೊಂಡು ನಾವು ಹೇಳಿದ ಹಾಗೆ ಆಸನಗಳನ್ನ ಮಾಡಿದರೆ, ಕೆವಲ 40 ದಿನದಲ್ಲಿ ಪಾರ್ಶ್ವ ವಾಯು ಪಿಡಿತರನ್ನ ಸರಿ ಮಾಡುತ್ತೇವೆ. ವೈದ್ಯರು ನೀಡಿದ ಔಷಧಿ ಪಡೆಯಬೇಡಿ” ಎಂದು ಜನರನ್ನ ನಂಬಿಸಿ ಸಾವಿರಾರು ರೂಪಾಯಿ ಪಡೆದು ಆರೋಪಿಗಳು ಪರಾರಿ ಆಗಿದ್ದಾರೆ. ರೋಗಿಗಳು ವೈದ್ಯರು ನೀಡಿದ ಔಷಧಿ ತೆಗೆದುಕೊಳ್ಳದೆ ಆರೋಗ್ಯ ಇನ್ನಷ್ಟು ಹಾಳಾಗುತ್ತಿದೆ. ಆರೋಪಿಗಳು ಚಿಕ್ಸಿತ್ಸೆ ನೀಡಿದೆ ಹಣ ಪಡೆದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಯುವಕರಲ್ಲಿ ಉಂಟಾಗುವ ಪಾರ್ಶ್ವವಾಯುವಿನಲ್ಲಿ ಒತ್ತಡ, ಹೈಪರ್​ಟೆನ್ಷನ್ ಪಾತ್ರವೇನು?

ಭಟ್ಕಳ ನಗರದ ಖಾಸಗಿ ಶಾಲಾ ಶಿಕ್ಷಕ ಪದ್ಮಯ್ಯ ಎಂಬುವವರ ತಾಯಿಗೆ ಪಾರ್ಶ್ವ ವಾಯು ಆಗಿತ್ತು. ಇವರಿಗೆ ತಮ್ಮ ಮೋಡಿಯ ಮಾತುಗಳಿಂದ ನಂಬಿಸಿ ಕೇವಲ ಎರಡೆ ದಿನದಲ್ಲಿ 26 ಸಾವಿರ ಪಡೆದು ಪರಾರಿಯಾಗಿದ್ದಾರೆ. ವಂಚಕರ ಚಲನ-ವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಂಚನೆಗೊಳಗಾದ ಶಿಕ್ಷಕ ಪದ್ಮಯ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಮಗೆ ಆದ ವಂಚನೆ ಬೇರೆ ಯಾರಿಗೂ ಆಗಬಾರದು. ಹಣದ ಜೊತೆಗೆ ರೋಗಿಗಳ ಆರೋಗ್ಯವು ಹಾಳು ಮಾಡುತ್ತಾರೆ. ವಂಚಕರನ್ನು ಆದಷ್ಟು ಬೇಗ ಬಂಧಿಸುವಂತೆ ಪದ್ಮಯ್ಯ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ