AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂವರ ಮದುವೆಯಾಗಿದ್ದ ಈರಪ್ಪ ಸಾಕಷ್ಟು ಶ್ರೀಮಂತ, ಆತನನ್ನು ಯಾರೋ ಮೊನ್ನೆ ಹತ್ಯೆ ಮಾಡಿದ್ದಾರೆ -ಯಾರು ಯಾಕೆ?

ಹತ್ಯೆಗೀಡಾಗಿರುವ ಬೀಳಗಿಯ ಡವಳೇಶ್ವರ ಗ್ರಾಮದ ಈರಪ್ಪನಿಗೆ 12 ಎಕರೆ ಆಸ್ತಿ, ಒಳ್ಳೆಯ ಮನೆಯಿದೆ. ಈರಪ್ಪ ಮೂವರನ್ನು ಮದುವೆಯಾಗಿದ್ದ. ಮೊದಲ ಪತ್ನಿ ಮೃತಪಟ್ಟಿದ್ದಾಳೆ. ನಂತರ ಮೊದಲ‌ ಪತ್ನಿಯ ಸಹೋದರಿಯನ್ನೇ ಮದುವೆಯಾಗಿದ್ದ. ಆದರೆ ಆಕೆ ಪೊಲೀಸ್ ಪರೀಕ್ಷೆ ಬರೆಯಬೇಕು ಅಂತ ಈತನನ್ನು ಬಿಟ್ಟು ಹೋಗಿ, ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ. ಆಕೆಯ ನಂತರ ‌ಮೂರನೇ ಮದುವೆಯಾಗಿದ್ದ ಈರಪ್ಪನಿಗೆ ಒಬ್ಬ ಗಂಡು ಮಗ ಇದ್ದಾನೆ.

ಮೂವರ ಮದುವೆಯಾಗಿದ್ದ ಈರಪ್ಪ ಸಾಕಷ್ಟು ಶ್ರೀಮಂತ, ಆತನನ್ನು ಯಾರೋ ಮೊನ್ನೆ ಹತ್ಯೆ ಮಾಡಿದ್ದಾರೆ -ಯಾರು ಯಾಕೆ?
ಮೂವರ ಮದುವೆಯಾಗಿದ್ದ ಈರಪ್ಪ ಸಾಕಷ್ಟು ಶ್ರೀಮಂತ, ಮೊನ್ನೆ ಹತ್ಯೆಗೀಡಾಗಿದ್ದಾನೆ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Feb 07, 2024 | 10:25 AM

Share

ಆತ ಒಟ್ಟು ಮೂರು ಜನರ ಮದುವೆಯಾಗಿದ್ದ. ಮೊದಲ ಪತ್ನಿ ಮೃತಪಟ್ಟರೆ, ಎರಡನೇ ಪತ್ನಿ ಪೊಲೀಸ್ ಕಾನ್ಸ್ಟೇಬಲ್ ಆತನಿಂದ ದೂರ ಆಗಿದ್ದಳು. ಮೂರನೇ ಪತ್ನಿ ಹಾಗೂ ‌ಮಗನ ಜೊತೆ ವಾಸವಿದ್ದ ಆತ ಕೊಲೆಯಾಗಿ (murder) ಪತ್ತೆಯಾಗಿದ್ದಾನೆ‌. ದುಷ್ಕರ್ಮಿಗಳು ತಂತಿಯಿಂದ ಕತ್ತು ಬಿಗಿದು ಎಸ್ಕೇಪ್ ಆಗಿದ್ದಾರೆ. ಇದರಿಂದ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ವಿದ್ಯಮಾನಗಳು ಕಂಡುಬಂದಿದ್ದು ‌ಬಾಗಲಕೋಟೆ ಜಿಲ್ಲೆ ಬೀಳಗಿ ಸರಕಾರಿ ಆಸ್ಪತ್ರೆ ಹಾಗೂ ಡವಳೇಶ್ವರ ಗ್ರಾಮದಲ್ಲಿ (Dhavaleshwar village in Bilagi in Bagalkot).

ಇಲ್ಲಿ ಕೊಲೆಯಾಗಿರೋದು ಈರಪ್ಪ ಗರಸಂಗಿ (೪೬) ಬೀಳಗಿ ತಾಲ್ಲೂಕಿನ ಡವಳೇಶ್ವರ ಗ್ರಾಮದ ನಿವಾಸಿ. ಮೊನ್ನೆ ಸೋಮವಾರ ರಾತ್ರಿ ಈತನ ಕುತ್ತಿಗೆಗೆ ತಂತಿ ಬಿಗಿದು ಯಾರೋ ದುಷ್ಕರ್ಮಿಗಳು ‌ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾರೆ‌. ಬೀಳಗಿ ಪಟ್ಟಣದಿಂದ ಜಮಖಂಡಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಬೀಳಗಿ ಹೊರವಲಯದಲ್ಲಿ ಕೊಲೆ‌ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಇದರಿಂದ ಈರಪ್ಪ ಗರಸಂಗಿ ಪತ್ನಿ ಮಕ್ಕಳು ಹಾಗೂ ಕುಟುಂಬಸ್ಥರು, ಸಂಬಂಧಿಕರು ಒಂದೇ ಮನೇ ಗೋಳಾಡುತ್ತಿದ್ದಾರೆ. ಮೃತ ಈರಪ್ಪನ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ. ಆದರೆ ಈರಪ್ಪ ಕುಟುಂಬಸ್ಥರಿಗೆ ಆತನ ಕೊಲೆ ಮಾಡಿರುವುದು ಯಾರು, ಹಿನ್ನೆಲೆ ಏನು, ಒಂದೂ ಗೊತ್ತಿಲ್ಲ ಅಂತಿದ್ದು ದಿಕ್ಕು ತೋಚದಂತಾಗಿದ್ದಾರೆ.

ಇಲ್ಲಿ ಈರಪ್ಪ ಗರಸಂಗಿ ಎಲ್ಲ ರೀತಿಯಿಂದ ಅನುಕೂಲಕರ ಸ್ಥಿತಿಯಲ್ಲಿದ್ದ ವ್ಯಕ್ತಿ. ಡವಳೇಶ್ವರ ಗ್ರಾಮದ ಈರಪ್ಪನಿಗೆ 12 ಎಕರೆ ಆಸ್ತಿ, ಒಳ್ಳೆಯ ಮನೆ ಎಲ್ಲವೂ ಇದ್ದು ಯಾವುದಕ್ಕೂ ಕಡಿಮೆಯಿರಲಿಲ್ಲ. ಈರಪ್ಪ ಗರಸಂಗಿ ಮೂರು ಜನರನ್ನು‌ ಮದುವೆಯಾಗಿದ್ದಾನೆ. ಮೊದಲ ಪತ್ನಿ ಮೃತಪಟ್ಟಿದ್ದಾಳೆ. ನಂತರ ಮೊದಲ‌ ಪತ್ನಿಯ ಸಹೋದರಿಯನ್ನೇ ಮದುವೆಯಾಗಿದ್ದ. ಆದರೆ ಆಕೆ ಓದಬೇಕು, ಪೊಲೀಸ್ ಪರೀಕ್ಷೆ ಬರೆಯಬೇಕು ಅಂತ ಈತನನ್ನು ಬಿಟ್ಟು ಹೋಗಿ, ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾರೆ.

ಇದನ್ನೂ ಓದಿ: ರಾಯಚೂರಿನ ಕೃಷ್ಣ ನದಿಯಲ್ಲಿ ವಿಗ್ರಹಗಳು ಪತ್ತೆ: ಅಂತಾರಾಜ್ಯ ವಿವಾದಕ್ಕೆ ಕಾರಣವಾಗುತ್ತಾ ವಿಗ್ರಹಗಳು?

ಆಕೆಯ ನಂತರ ‌ಮೂರನೇ ಮದುವೆಯಾಗಿರುವ ಈರಪ್ಪನಿಗೆ ಒಬ್ಬ ಗಂಡು ಮಗನಿದ್ದಾನೆ. ಹೊಲ ಮನೆ ಆಸ್ತಿಪಾಸ್ತಿ ಎಲ್ಲ ರೀತಿಯಿಂದ ಸಮೃದ್ದವಾಗಿದ್ದ ಈರಪ್ಪನ ಕೊಲೆ ಕುತೂಹಲ‌ ಮೂಡಿಸಿದೆ. ಮೊನ್ನೆ ಸಂಜೆ ೫.೩೦ ರ ಸುಮಾರಿಗೆ ಮನೆಯಿಂದ ಈರಪ್ಪ ಹೋಗಿದ್ದ. ರಾತ್ರಿ ೮ ರ ಸುಮಾರಿಗೆ ಈ ಕೊಲೆ‌ ನಡೆದಿದೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದ ತಕ್ಷಣ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ‌.

ಕುಟುಂಬಸ್ಥರಿಂದ ಎಲ್ಲ ಬಗೆಯ ಮಾಹಿತಿ ಕಲೆ ಹಾಕುತ್ತಿದ್ದಾರೆ‌. ಸ್ಥಳಕ್ಕೆ ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಸದ್ಯಕ್ಕೆ ಕೊಲೆ ಮಾಡಿದ್ದು ಯಾರು ಯಾವ ಕಾರಣಕ್ಕೆ ಎಂಬುದು ನಿಗೂಢವಾಗಿದ್ದು, ತನಿಖೆ ಮುಂದುವರೆದಿದೆ‌. ಒಟ್ಟಿನಲ್ಲಿ ರೈತರ ಕೊಲೆ ನಿಗೂಢವಾಗಿದ್ದು, ಯಾರು ಮಾಡಿರಬಹುದು ಯಾಕೆ ಎಂದೆಲ್ಲ ಕುತೂಹಲ ಶುರುವಾಗಿದೆ. ಪೊಲೀಸ್ ತನಿಖೆ ಮುಂದುವರೆದಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ