ಬೆಂಗಳೂರು: ವ್ಯಕ್ತಿಯ ಹತ್ಯೆಗೆ ಹೊಂಚು ಹಾಕಿ ಕಾಯ್ತಿದ್ದ ಸುಪಾರಿ‌ ಕಿಲ್ಲರ್ಸ್​ ಅಂದರ್​

ನಿನ್ನೆ(ಏ.15) ರಾತ್ರಿ ಹಂತಕರು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿರುವ ಗಂಟಿಗಾನಹಳ್ಳಿಯಲ್ಲಿ ಮಂಕಿ ಕ್ಯಾಪ್ ಧರಿಸಿ, ಬೇಲಿ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಸುಪಾರಿ ಹಂತಕರನ್ನು ಚಿಕ್ಕಜಾಲ ಪೊಲೀಸರು(Chikkajala Police) ಬಂಧಿಸಿದ್ದಾರೆ. ವಿಚಾರಣೆ ಬಳಿಕ ಇವರು ಮೂರು ಲಕ್ಷ ರೂ. ಗೆ ಸುಫಾರಿ ಪಡೆದಿದ್ದು ಬಯಲಾಗಿದೆ.

ಬೆಂಗಳೂರು: ವ್ಯಕ್ತಿಯ ಹತ್ಯೆಗೆ ಹೊಂಚು ಹಾಕಿ ಕಾಯ್ತಿದ್ದ ಸುಪಾರಿ‌ ಕಿಲ್ಲರ್ಸ್​ ಅಂದರ್​
ಹುಬ್ಬಳ್ಳಿ: ಹಿಂದೂ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿ ಕೊಲೆ ಬೆದರಿಕೆ, ಮುಸ್ಲಿಂ ಯುವಕ ಅರೆಸ್ಟ್
Updated By: ಕಿರಣ್ ಹನುಮಂತ್​ ಮಾದಾರ್

Updated on: Apr 16, 2024 | 6:24 PM

ಬೆಂಗಳೂರು, ಏ.16: ವ್ಯಕ್ತಿಯೋರ್ವನ ಹತ್ಯೆಗೆ ಹೊಂಚು ಹಾಕಿ ಕಾಯುತ್ತಿದ್ದ ಮೂವರು ಸುಪಾರಿ ಹಂತಕರನ್ನು ಚಿಕ್ಕಜಾಲ ಪೊಲೀಸರು(Chikkajala Police) ಬಂಧಿಸಿದ್ದಾರೆ. ನಿನ್ನೆ(ಏ.15) ರಾತ್ರಿ ಹಂತಕರು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿರುವ ಗಂಟಿಗಾನಹಳ್ಳಿಯಲ್ಲಿ ಮಂಕಿ ಕ್ಯಾಪ್ ಧರಿಸಿ, ಬೇಲಿ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದರು. ರಾತ್ರಿ ಗಸ್ತಿನಲ್ಲಿದ್ದ ಪಿಎಸ್ಐ ಶಿವಣ್ಣ ಎಂಬುವವರು ಅನುಮಾನಾಸ್ಪದವಾಗಿ ಅವಿತುಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂರು ಲಕ್ಷ ರೂ. ಗೆ ಸುಫಾರಿ ನೀಡಿದ್ದ ಹೇಮಂತ್ ರೆಡ್ಡಿ

ವಿಚಾರಣೆ ಬಳಿಕ ಹೇಮಂತ್ ರೆಡ್ಡಿ ಎಂಬುವವರು ಮೂರು ಲಕ್ಷ ರೂ. ಗೆ ಸುಫಾರಿ ನೀಡಿದ್ದು ಬಯಲಾಗಿದೆ. ಹೇಮಂತ್ ರೆಡ್ಡಿ ಸಂಬಂಧಿಯೊಂದಿಗೆ ಶಶಾಂಕ್ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನಲೆ ವ್ಯಕ್ತಿಯನ್ನ ಕೊಲೆ ಮಾಡಲು ಸುಫಾರಿ ನೀಡಿದ್ದರು. ಇದೀಗ ಹೇಮಂತ್ ರೆಡ್ಡಿ ಸೇರಿ ಮೂವರು ಸುಫಾರಿ ಹಂತಕರ ಬಂಧಿಸಲಾಗಿದೆ.

ಇದನ್ನೂ ಓದಿ:ವಿಜಯಪುರ: ರಂಜಾನ್ ಹಬ್ಬದಂದೇ ಯುವಕನ ಹತ್ಯೆ ಪ್ರಕರಣ; ಆರೋಪಿಗಳ ಬಂಧನ

ಮನೆಗೆ ತೆರಳುವಾಗ ಹತ್ಯೆಗೆ ಸ್ಕೆಚ್

ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಶಶಾಂಕ್, ನಂತರ ಬೈಕ್​ನಲ್ಲಿ ಎಂಟಿಗಾನಹಳ್ಳಿಯಲ್ಲಿರುವ ಮನೆಗೆ ತೆರಳುತ್ತಿದ್ದ. ಈ ವೇಳೆ ಆತನ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು. ಅದರಂತೆ ಲಾಂಗು- ಮಚ್ಚುಗಳನ್ನು ಟಾಟಾ ಸುಮೋದಲ್ಲಿ ಅಡಗಿಸಿಟ್ಟು ಕಿಲ್ಲರ್ಸ್ ಗ್ಯಾಂಗ್ ಕಾಯುತ್ತಿದ್ದರು. ತಡರಾತ್ರಿ 1:30 ರ ಸುಮಾರಿಗೆ ಪೊಲೀಸರು ದಾಳಿ ನಡೆಸಿ ಆರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಮೂವರನ್ನು ಬಂಧಿಸಲಾಗಿದೆ. ಉಳಿದ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರಾಗಿದ್ದಾರೆ. ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ