Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಬಡವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಕಂಪನಿ

ಅದು ದೇಶದಲ್ಲಿ ಸುಮಾರು 85 ಶಾಖೆ ಹೊಂದಿರುವ ಕೇರಳ ಮೂಲದ ಫೈನಾನ್ಸ್ ಕಂಪನಿ. ಸದ್ಯ ಕೆಲ ದಿನಗಳಿಂದ ಕಂಪನಿ ಬಾಗಿಲು ಮುಚ್ಚಿದ್ದು, ಬಡವರು ಫೈನಾನ್ಸ್​ ಬಾಗಿಲು ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ಆ ಫೈನಾನ್ಸ್​ ನಂಬಿ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆ ಫೈನಾನ್ಸ್​ ಕಂಪನಿ ಯಾವುದು? ಏನಿದು ಸ್ಟೋರಿ? ಇಲ್ಲಿದೆ ಓದಿ...

ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಬಡವರಿಂದ ಲಕ್ಷಾಂತರ ಹಣ ಪಡೆದು ವಂಚಿಸಿದ ಕಂಪನಿ
ರಾಯಲ್ ಟ್ರಾವಂಕೂರ್ ಫೈನಾನ್ಸ್​​ ಕಂಪನಿ
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: ವಿವೇಕ ಬಿರಾದಾರ

Updated on: Dec 09, 2023 | 2:45 PM

ಮಂಗಳೂರು, ಡಿಸೆಂಬರ್​​ 09: ಅದು ದೇಶದಲ್ಲಿ ಸುಮಾರು 85 ಶಾಖೆ ಹೊಂದಿರುವ ಕೇರಳ (Kerala) ಮೂಲದ ಫೈನಾನ್ಸ್ (Finance) ಕಂಪನಿ. ಸದ್ಯ ಕೆಲ ದಿನಗಳಿಂದ ಕಂಪನಿ ಬಾಗಿಲು ಮುಚ್ಚಿದ್ದು, ಬಡವರು ಫೈನಾನ್ಸ್​ ಬಾಗಿಲು ಕಾಯುತ್ತಿದ್ದಾರೆ. ಕೂಲಿ ಮಾಡಿ ಹೊಟ್ಟೆ-ಬಟ್ಟೆ ಕಟ್ಟಿ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ಆ ಫೈನಾನ್ಸ್​ ನಂಬಿ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಆ ಫೈನಾನ್ಸ್​ ಕಂಪನಿ ಯಾವುದು? ಏನಿದು ಸ್ಟೋರಿ? ಇಲ್ಲಿದೆ ಓದಿ…

ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಕೂಲಿ ನಾಲಿ ಮಾಡಿ ಅದೆಷ್ಟೊ ಜನರು ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಕಡಿಮೆ ಸಂಪಾದನೆಯಲ್ಲೂ ಒಂದಷ್ಟು ಹಣ ಉಳಿಸಬೇಕು, ಜೊತೆಗೆ ಹೆಚ್ಚಿನ ಬಡ್ಡಿ ಸಿಗುತ್ತೆ ಅಂತ ರಾಷ್ಟ್ರಿಕೃತ ಬ್ಯಾಂಕ್ ಬಿಟ್ಟು ಫೈನಾನ್ಸ್​ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಆದರೆ ಸದ್ಯ ಇವರಿಗೆ ಬಡ್ಡಿ ಸಿಗುವುದಿರಲಿ ಹೂಡಿರುವ ಅಸಲಿ ಹಣ ಸಿಗುವು ಡೌಟ್​ ಆಗಿದೆ. ಏಕೆಂದರೆ ಇವರು ಹೂಡಿಕೆ ಮಾಡಿರುವ ರಾಯಲ್ ಟ್ರಾವಂಕೂರ್ ಎಂಬುವ ಫೈನಾನ್ಸ್​ ಕಂಪೆನಿ ಸದ್ದಿಲ್ಲದೆ ಮುಚ್ಚಿದೆ.

ಹೌದು ರಾಯಲ್ ಟ್ರಾವಂಕೂರ್​ ಫಾರ್ಮರ್ಸ್​ ಪ್ರೊಡ್ಯೂಸರ್ ಫೈನಾನ್ಸ್​ ಕಂಪನಿ ಸದ್ಯ ಮಂಗಳೂರಿನ ಒಂದು ಬ್ರ್ಯಾಂಚ್​​​ನಲ್ಲೇ ಸರಿ ಸುಮಾರು 65 ಲಕ್ಷ ರೂ. ವಂಚನೆ ಮಾಡಿದೆ. ಕೇರಳ ಮೂಲದ ಈ ಫೈನಾನ್ಸ್​ ಕಂಪನಿ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದು ಜನರಿಗೆ ನಂಬಿಸಿತ್ತು. ಹೀಗಾಗಿ ಕೂಲಿ ಕಾರ್ಮಿಕರು ಹೆಚ್ಚಾಗಿ ಈ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ಈಗ ಕೈ ಸುಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸೈಟ್ ಕೊಡಿಸುವುದಾಗಿ ನಂಬಿಸಿ ವಂಚನೆ: ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಅನಿವಾಸಿ ಭಾರತೀಯ

ರಾಯಲ್​ ಟ್ರವಾಂಕೂರ್ ಫೈನಾನ್ಸ್​ ಕಂಪನಿ ದೇಶದ ಎಲ್ಲೆಡೆ ಸುಮಾರು 85 ಬ್ರ್ಯಾಂಚ್​​ಗಳನ್ನು ಹೊಂದಿದೆ. ಕರ್ನಾಟಕದ ಹಲವೆಡೆ ಈ ಫೈನಾನ್ಸ್​ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದೆ. ಸದ್ಯ ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಈ ಫೈನಾನ್ಸ್​ ಕಂಪನಿ ತನ್ನ ಕಚೇರಿಯನ್ನು ಬಂದ್ ಮಾಡಿದ್ದು ಸಿಬ್ಬಂದಿಗಳೂ ಸದ್ದಿಲ್ಲದೆ ಪರಾರಿಯಾಗಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು ಹಾಗೂ ಒಂದಿಷ್ಟು ಅಂಗಡಿಯವರು ಈ ಫೈನಾನ್ಸ್​ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ.

ಆದರೆ ಇದೀಗ ಕಂಪನಿ ಬಾಗಿಲು ಮುಂಚಿಕೊಂಡು ಹೋಗಿದ್ದು, ಫೈನಾನ್ಸ್​ ಕಂಪೆನಿ ಆರಂಭಿಸಲು ಪರವಾನಿಗೆ ನೀಡಿರುವ ಸರ್ಕಾರವೇ ತಮ್ಮ ಹಣ ವಾಪಾಸು ನೀಡಲಿ ಅಂತ ಬೇಡಿಕೆ ಇಟ್ಟಿದ್ದಾರೆ.

ತಮಗಾದ ವಂಚನೆ ಬಗ್ಗೆ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆರಂಭದಲ್ಲಿ ಹಣ ನೀಡುವುದಾಗಿ ಹೇಳಿದ ಸಿಬ್ಬಂಧಿಗಳು ಇದೀಗ ಏಕಾ ಏಕಿ ಬಾಗಿಲು ಹಾಕಿ ಪರಾರಿಯಾಗಿದ್ದಾರೆ. ಒಟ್ಟಾರೆ ಅಧಿಕ ಬಡ್ಡಿ ನಂಬಿ ಕಷ್ಟದ ಹಣವನ್ನು ಹೂಡಿಕೆ ಮಾಡಿದ ಜನರು ಮಾತ್ರ ಈಗ ನ್ಯಾಯಕ್ಕಾಗಿ ಸರ್ಕಾರದ ಬಾಗಿಲು ತಟ್ಟುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ