Bombay Ravi: ಕುಖ್ಯಾತ ಡಾನ್ ಬಾಂಬೆ ರವಿ ಮೃತಪಟ್ಟಿಲ್ಲವೆಂಬ ಅನುಮಾನ; ಚುರುಕುಗೊಂಡ ತನಿಖೆ

ಪೊಲೀಸರಿಗೆ ಬಾಂಬೆ ರವಿ ಮೃತಪಟ್ಟಿಲ್ಲವೆಂದು ಅನುಮಾನ ಬಂದಿದ್ದು, ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.

Bombay Ravi: ಕುಖ್ಯಾತ ಡಾನ್ ಬಾಂಬೆ ರವಿ ಮೃತಪಟ್ಟಿಲ್ಲವೆಂಬ ಅನುಮಾನ; ಚುರುಕುಗೊಂಡ ತನಿಖೆ
ಸಾಂಕೇತಿಕ ಚಿತ್ರ
Edited By:

Updated on: Oct 04, 2021 | 3:00 PM

ಡಾನ್ ಬಾಂಬೆ ರವಿ ಸಾವಿನ ಸುತ್ತ ಅನುಮಾನದ ಹುತ್ತ ಎದ್ದಿದೆ. ಪೊಲೀಸರಿಗೆ ಬಾಂಬೆ ರವಿ ಮೃತಪಟ್ಟಿಲ್ಲವೆಂದು ಅನುಮಾನ ಬಂದಿದ್ದು, ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಕೊಲೆಗೆ ಸ್ಕೆಚ್  ಸೇರಿದಂತೆ ಬಾಂಬೆ ರವಿ ವಿರುದ್ಧ ಹಲವು ಅಪರಾಧದ ಆರೋಪಗಳಿವೆ. ಆದ್ದರಿಂದ ಬಾಂಬೆ ರವಿಯನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದು, ಬಾಂಬೆ ರವಿ ಸಹಚರನನ್ನು ಪೊಲೀಸರು ಬಂಧಿಸಿದ್ದರು. ಬಾಂಬೆ ರವಿಯನ್ನು ಬಂಧಿಸಬೇಕೆನ್ನುವಷ್ಟರಲ್ಲಿ ಆತನ ಸಾವಿನ ಬಗ್ಗೆ ಮಾಹಿತಿ ಹರಿದಾಡಿತ್ತು.

ಸೆಪ್ಟೆಂಬರ್‌ನಲ್ಲಿ ಕೊರೊನಾಗೆ ಬಾಂಬೆ ರವಿ ಬಲಿಯಾದ ಬಗ್ಗೆ ಸುದ್ದಿ ಹರಿದಾಡಿತ್ತು. ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ನಂತರ ಆಂಧ್ರಪ್ರದೇಶದಲ್ಲಿ ಮೃತಪಟ್ಟಿದ್ದಾಗಿ ಸುದ್ದಿ ಹರಿದಾಡಿತ್ತು. ಆದರೆ ಬಾಂಬೆ ರವಿ ಸಾವಿನ ಬಗ್ಗೆ ಅಧಿಕೃತ ದಾಖಲೆ ಸಿಕ್ಕಿಲ್ಲ. ಹೀಗಾಗಿ ಬಾಂಬೆ ರವಿ ಮೃತಪಟ್ಟಿಲ್ಲ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಬಾಂಬೆ ರವಿ ಕುಟುಂಬಸ್ಥರು, ಸಹಚರರ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:

ನಿರ್ಮಾಪಕ ಉಮಾಪತಿಗೆ ಕರೆ ಮಾಡಿ ಕ್ಷಮೆ ಕೇಳಿದ್ದ ಕುಖ್ಯಾತ ಡಾನ್ ಬಾಂಬೆ ರವಿ

‘ತೆಲಂಗಾಣ ಸಿಎಂ ಕೆಸಿಆರ್​ ರಾಜ್ಯದ ಗರ್ಭಿಣಿಯರಿಗೆ ಪತಿಯಿದ್ದಂತೆ..’-ಕೆಸಿಆರ್ ಕಿಟ್​ ಸ್ಕೀಮ್​ ಹೊಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಶಾಸಕ

ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ; ಸಚಿವ ಸುನಿಲ್ ಕುಮಾರ್ ಸೂಚನೆ

Published On - 11:50 am, Mon, 4 October 21