AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್ ಸ್ಕೆಚ್; ಇಬ್ಬರು ಆರೋಪಿಗಳ ಬಂಧನ

ರೌಡಿಶೀಟರ್ ಒಬ್ಬ ಜೈಲಿನಲ್ಲೇ ಕುಳಿತು ಎದುರಾಳಿ ಕತೆಯನ್ನು ಮುಗಿಸುವುದಕ್ಕೆ ಸ್ಕೆಚ್ ಹಾಕಿರುವುದು ಬಹಿರಂಗವಾಗಿದೆ. ಸಾಕ್ಷ್ಯ ಹೇಳುತ್ತಾನೆ ಎಂದು ನಾರಾಯಣಸ್ವಾಮಿ ಎಂಬುವವರ ಹತ್ಯೆಗೆ ರೌಡಿಶೀಟರ್ ಸುಂದರೇಶ್ ಜೈಲಿಂದಲೇ ಸ್ಕೆಚ್ ಹಾಕಿ, ಅದನ್ನು ಕಾರ್ಯಗತಗೊಳಿಸುವುದಕ್ಕೂ ಯತ್ನ ನಡೆಸಿದ್ದ. ಆದರೆ ಅದು ವಿಫಲವಾಗಿತ್ತು.

ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್ ಸ್ಕೆಚ್; ಇಬ್ಬರು ಆರೋಪಿಗಳ ಬಂಧನ
ಸಾಕ್ಷ್ಯ ಹೇಳ್ತಾನೆ ಅನ್ನೋ ಕಾರಣಕ್ಕೆ ಜೈಲಿನಲ್ಲೇ ಕುಳಿತು ಮರ್ಡರ್​ಗೆ (ಹಸಿರು ಟೀ ಶರ್ಟ್ ಹಾಕಿರುವ ಹಿಂಬದಿ ವ್ಯಕ್ತಿ ನಾರಾಯಣಸ್ವಾಮಿ​​ ಹತ್ಯೆಗೆ) ಸ್ಕೆಚ್
TV9 Web
| Edited By: |

Updated on:Aug 24, 2021 | 10:28 AM

Share

ಬೆಂಗಳೂರು: ರೌಡಿಶೀಟರ್ ಒಬ್ಬ ಜೈಲಿನಲ್ಲೇ ಕುಳಿತು ಎದುರಾಳಿ ಕತೆಯನ್ನು ಮುಗಿಸುವುದಕ್ಕೆ ಸ್ಕೆಚ್ ಹಾಕಿರುವುದು ಬಹಿರಂಗವಾಗಿದೆ. ಸಾಕ್ಷ್ಯ ಹೇಳುತ್ತಾನೆ ಎಂದು ನಾರಾಯಣಸ್ವಾಮಿ ಎಂಬುವವರ ಹತ್ಯೆಗೆ ರೌಡಿಶೀಟರ್ ಸುಂದರೇಶ್ ಜೈಲಿಂದಲೇ ಸ್ಕೆಚ್ ಹಾಕಿ, ಅದನ್ನು ಕಾರ್ಯಗತಗೊಳಿಸುವುದಕ್ಕೂ ಯತ್ನ ನಡೆಸಿದ್ದ. ಆದರೆ ಅದು ವಿಫಲವಾಗಿತ್ತು. ನಾರಾಯಣಸ್ವಾಮಿಯ ಹತ್ಯೆ ಮಾಡುವುದಕ್ಕೆ ಸುಂದರೇಶನ ಸಹಚರರಾದ ಮುನಿರಾಜು ಮತ್ತು ವೆಂಕಟೇಶ ಅಲಿಯಾಸ್ ಚಿಕ್ಕ ಹೊಸಕೋಟೆ ಟೀಂ ಡೀಲ್ ಒಪ್ಪಿಕೊಂಡು, ವಿಫಲ ಯತ್ನ ನಡೆಸಿದ್ದರು ಎಂಬುದು ಗಮನಾರ್ಹ.

ಜುಲೈ 31 ರಂದು ಬೈಯಪ್ಪನಹಳ್ಳಿಯಲ್ಲಿ ಏನಾಗಿತ್ತು?

ಜುಲೈ 31 ರಂದು ಬೈಯಪ್ಪನಹಳ್ಳಿಯ ಸುರಂಜನಾದಾಸ್ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದ ನಾರಾಯಣಸ್ವಾಮಿ ಎಂಬುವವರ ಮೇಲೆ ಅಟ್ಯಾಕ್ ನಡೆದಿತ್ತು. ಈ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಯತ್ನ ನಡೆಸಿದ್ದರು. ಯಾರೋ ತನ್ನನ್ನ ಮುಗಿಸೋಕೆ ಬರುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಾರಾಯಣಸ್ವಾಮಿ ಓಡೋಕೆ ಶುರು ಮಾಡಿದ್ದರು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಲಾಂಗ್​ನಿಂದ ಅಟ್ಯಾಕ್ ಮಾಡೋಕೆ ಮುಂದಾಗಿದ್ದರು. ಆಗ ರಸ್ತೆ ವಿಭಜಕ ದಾಟಿ, ಮುಂದೆ ಹೋದ ನಾರಾಯಣಸ್ವಾಮಿ ಜೀವ ಉಳಿಸಿಕೊಂಡಿದ್ದರು.

ಕೊಲೆಗಡುಕರು ನಾರಾಯಣಸ್ವಾಮಿಯನ್ನ ಚೇಸ್ ಮಾಡೋ ಎಕ್ಸ್​​ಕ್ಲೂಸಿವ್ ಸಿಸಿಟಿವಿ ದೃಶ್ಯ ಟಿವಿ9 ಗೆ ದೊರೆತಿದೆ. ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮುನಿರಾಜು ಮತ್ತು ವೆಂಕಟೇಶ್ ಅಂದರ್ ಆಗಿದ್ದಾರೆ.

ಪ್ರಕರಣದ ಬೆನ್ನುಹತ್ತಿದ ಬೈಯಪ್ಪನಹಳ್ಳಿ ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಇನ್ನೊಂದು ಮಹತ್ವದ ಒಳಸುಳಿ ಪತ್ತೆಯಾಗಿದೆ. ಆಕ್ಚುಯಲಿ, ಜೈಲಿನಲ್ಲಿದ್ದುಕೊಂಡೇ ರೌಡಿ ಸುಂದರೇಶ, ನಾರಾಯಣಸ್ವಾಮಿ ಹತ್ಯೆಗೆ ಸುಪಾರಿ‌ ನೀಡಿದ್ದ ಎಂದು ತಿಳಿದುಬಂದಿದೆ. ಹಾಗಾಗಿ ಸುಂದರೇಶನನ್ನ ಬಾಡಿವಾರೆಂಟ್ ಮೂಲಕ ಬೈಯಪ್ಪನಹಳ್ಳಿ ಪೊಲೀಸರು ಕರೆತಂದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ನಾರಾಯಣಸ್ವಾಮಿ ಕೊಲೆ ಯತ್ನದ ಬಗ್ಗೆ ಸುಂದರೇಶ್ ಬಾಯ್ಬಿಟ್ಟಿದ್ದಾನೆ. ಕೊಲೆಯತ್ನದ ಇನ್ನರ್ ಡಿಟೇಲ್ಸ್​​ ರಿವೀಲ್ ಮಾಡಿದ್ದಾನೆ. 2017 ರಲ್ಲಿ ನಾಗಾವಾರಪಾಳ್ಯದ ಬಳಿ ಶಿವಕುಮಾರ್ ಎಂಬಾತನನ್ನ ಸುಂದರೇಶ್ ಟೀಂ ಕೊಲೆಗೈದಿತ್ತು. ಕೊಲೆಯಾದ ಶಿವಕುಮಾರ್, ನಾರಾಯಣಸ್ವಾಮಿಯ ಭಾವಮೈದನಾಗಿದ್ದ. ಇದೇ ಕಾರಣಕ್ಕೆ ಕೊಲೆ ಸಂಬಂಧ ಸಾಕ್ಷಿಯಾಗಿ ನಾರಾಯಣಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಾರಾಯಣಸ್ವಾಮಿ ಸಾಕ್ಷ್ಯ ಹೇಳ್ತಾರೆ ಅನ್ನೋ ಕಾರಣಕ್ಕೆ ಅವರ ಮರ್ಡರ್​​ಗೆ ಸ್ಕೆಚ್ ಹಾಕಿದ್ರಂತೆ. ಈ ಕೊಲೆಯತ್ನ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

(rowdy sheeter sundaresh murder sketch to kill witness of a murder case in bayyappanahalli)

Published On - 10:20 am, Tue, 24 August 21

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ