Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

Crime News Today: ನಡುರಸ್ತೆಯಲ್ಲಿ ಬಸ್​ ನಿಲ್ಲಿಸಿದ ಪೊಲೀಸರಿಗೆ ತಮ್ಮ ಬಳಿಯಿದ್ದ 1.2 ಕೋಟಿ ಹಣವನ್ನು ನೀಡಿದ ಕೊರಿಯರ್ ಸಿಬ್ಬಂದಿ ಬಳಿಕ ಕಂಗಾಲಾಗಿದ್ದಾರೆ. ಅಸಲಿಗೆ ಆ ಹಣವನ್ನು ತೆಗೆದುಕೊಂಡು ಹೋಗಿದ್ದು ಪೊಲೀಸರೇ ಅಲ್ಲ! ಈ ಕತೆ ಯಾವ ಸಿನಿಮಾ ಕತೆಗೂ ಕಡಿಮೆಯಿಲ್ಲ.

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!
ಸಾಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Aug 05, 2021 | 4:25 PM

ಪುಣೆ: ‘ಕಳ್ಳತನಕ್ಕೆ ನೂರಾರು ಮಾರ್ಗಗಳು’ ಎಂಬಂತೆ ನಾವು ಊಹಿಸಲೂ ಸಾಧ್ಯವಿಲ್ಲದ ರೀತಿ ಇತ್ತೀಚೆಗೆ ದರೋಡೆಯ ಪ್ರಕರಣಗಳು ನಡೆಯುತ್ತಿವೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪತಾಸ್ (Pune District Patas) ಎಂಬಲ್ಲಿ ಪೊಲೀಸರು ನಡುರಸ್ತೆಯಲ್ಲಿ ಸರ್ಕಾರಿ ಬಸ್​ ಅನ್ನು ಅಡ್ಡಹಾಕಿದ್ದರು. ಏನಿರಬಹುದು ಎಂದು ಚಾಲಕ ಬಸ್ ನಿಲ್ಲಿಸುತ್ತಿದ್ದಂತೆ ಬಸ್​ ಏರಿದ ನಾಲ್ಕೈದು ಪೊಲೀಸರು ಆ ಬಸ್​ನಲ್ಲಿದ್ದ ಕೊರಿಯರ್ ಸೇವೆಯ ಸಿಬ್ಬಂದಿಯ ಬಳಿಯಿದ್ದ 1.2 ಕೋಟಿ ರೂ. ಹಣವನ್ನು ಹೊತ್ತೊಯ್ದಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸರೇ ಹೀಗೆ ಲೂಟಿ ಮಾಡಿದರೆ ಏನಪ್ಪಾ ನಮ್ಮ ಕತೆ?! ಎಂದು ಶಾಕ್​ನಲ್ಲಿದ್ದ ಬಸ್​ನವರಿಗೆ ಅವರು ಪೊಲೀಸರಲ್ಲ ದರೋಡೆಕೋರರು (Robbery) ಎಂಬುದು ತಿಳಿಯಲು ನಿಜವಾದ ಪೊಲೀಸರೇ ಬರಬೇಕಾಯಿತು! ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆ ಕೇಳಿದ ಅಸಲಿ ಪೊಲೀಸರು ಕೂಡ ದರೋಡೆಕೋರರ ಬುದ್ಧಿವಂತಿಕೆಗೆ ಶಾಕ್ ಆಗಿದ್ದಾರೆ.

ಪುಣೆಯ ಸರ್ಕಾರಿ ಬಸ್​ನಲ್ಲಿ ಕೊರಿಯರ್ ಸಿಬ್ಬಂದಿ ಕೋಟ್ಯಂತರ ರೂ. ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಆ ಹಣವನ್ನು ಲೂಟಿ ಮಾಡಲು ದರೋಡೆಕೋರರು ಪ್ಲಾನ್ ಮಾಡಿದ್ದರು. ಅದರಂತೆ ಪೊಲೀಸರ ಡ್ರೆಸ್ ಧರಿಸಿ, ಕಾಡಿನ ಬಳಿ ರಸ್ತೆಯಲ್ಲಿ ಬಸ್​ ಅಡ್ಡಗಟ್ಟಿದ ಅವರು ಸೀದಾ ಬಸ್​ ಏರಿ ಆ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಅವರು ದರೋಡೆಕೋರರಿರಬಹುದು ಎಂಬ ಸುಳಿವೂ ಇಲ್ಲದ ಬಸ್ ಚಾಲಕ ಯಾವುದೋ ಕೇಸ್​ಗಾಗಿ ಪೊಲೀಸರು ಬಸ್ ಅಡ್ಡಹಾಕಿರಬಹುದು ಎಂದು ಬಸ್​ ನಿಲ್ಲಿಸಿದ್ದ. ಕೊರಿಯರ್ ಕಂಪನಿಯ ನಾಲ್ವರು ಸಿಬ್ಬಂದಿಗಳು ನಿಲಂಗದಿಂದ ಬಿವಾಂಡಿಗೆ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದರು.

ಬೇರೆ ಊರಿಗೆ  ಕೊರಿಯರ್ ಇದ್ದುದರಿಂದ ಅವರೆಲ್ಲರೂ ಒಟ್ಟಾಗಿ ಬಸ್​ನಲ್ಲೇ ಪ್ರಯಾಣ ಮಾಡುತ್ತಿದ್ದರು. ಮಧ್ಯಾಹ್ನ 1.15ರ ವೇಳೆಗೆ ಪೊಲೀಸ್ ಡ್ರೆಸ್​ನಲ್ಲಿದ್ದ ದರೋಡೆಕೋರರು ಪತಾಸ್ ಬಳಿ ಕಾಡಿನ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿದ್ದರು. ನೋಡನೋಡುತ್ತಿದ್ದಂತೆ ಬಸ್ ಏರಿದ ನಾಲ್ಕೈದು ಜನರು ನಿಮ್ಮಲ್ಲಿ ಕೊರಿಯರ್ ಸರ್ವಿಸ್​ನವರು ಯಾರು? ಎಂದು ಕೇಳಿದ್ದರು. ಪೊಲೀಸರು ಕೇಳುತ್ತಿದ್ದಾರಲ್ಲ ಎಂಬ ಭಯದಿಂದಲೇ ಆ ನಾಲ್ವರು ಸೀಟಿನಿಂದ ಎದ್ದು ನಿಂತಿದ್ದರು. ಯಾವುದೇ ಕೇಸಿನ ಕುರಿತು ನಮ್ಮನ್ನು ವಿಚಾರಣೆ ಮಾಡಬಹುದು ಎಂದು ಆ ನಾಲ್ವರು ಸಿಬ್ಬಂದಿ ಭಯಗೊಂಡಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ. ಯಾರ ಕೈಯಲ್ಲಿ ಹಣವಿದೆ ಎಂಬುದನ್ನು ಸುಲಭವಾಗಿ ಕಂಡುಹಿಡಿದ ದರೋಡೆಕೋರರು ಸಿನಿಮೀಯ ಶೈಲಿಯಲ್ಲಿ ಆ ಹಣವನ್ನು ಕಸಿದುಕೊಂಡು ತಮ್ಮ ವಾಹನದಲ್ಲಿ ಪರಾರಿಯಾಗಿದ್ದಾರೆ.

ಈ ಘಟನೆಯ ಬಗ್ಗೆ ಕೊರಿಯರ್ ಕಂಪನಿಯ ಉದ್ಯೋಗಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಆರೋಪಿಗಳ ರೇಖಾಚಿತ್ರ ಬಿಡಿಸಲಾಗಿದೆ. ಖತರ್ನಾಕ್ ಕಳ್ಳರನ್ನು ಬಂಧಿಸಲು ಪೊಲೀಸರ ತಂಡವೂ ರಚನೆಯಾಗಿದೆ.

ಇದನ್ನೂ ಓದಿ: Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

(Shocking Crime: Robbers Posing as Police stopped bus and Loot Rs 1.2 crore from courier service staff in Pune)

Published On - 4:19 pm, Thu, 5 August 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ