AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Crime News Today: 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ಈ ಕತೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!
ಸೈಬರ್ ಕ್ರೈಂ
TV9 Web
| Edited By: |

Updated on:Jul 31, 2021 | 7:34 PM

Share

ಘಜಿಯಾಬಾದ್: ಇದು ನೀವು ಊಹಿಸಲೂ ಸಾಧ್ಯವಾಗದಂತಹ ಕತೆ. ನಾವು ನೀವೆಲ್ಲ 5ನೇ ಕ್ಲಾಸ್​ನಲ್ಲಿದ್ದಾಗ ಹೇಗಿದ್ದೆವು ಎಂದು ನೆನಪಿಸಿಕೊಳ್ಳಿ. ಶಾಲೆ ಬಿಟ್ಟರೆ ಮನೆ, ಮನೆ ಬಿಟ್ಟರೆ ಶಾಲೆ ಇಷ್ಟೇ ನಮ್ಮ ಪ್ರಪಂಚವಾಗಿತ್ತು. ಆಗೆಲ್ಲ ಮೊಬೈಲ್, ಫೋನ್, ಇಂಟರ್ನೆಟ್​ ಇದ್ಯಾವುದೂ ಮಕ್ಕಳಿಗೆ ಸಿಗುತ್ತಿರಲಿಲ್ಲ. ಊಟ ಬೇಡವೆಂದೋ, ಹೊಸ ಬಟ್ಟೆ ಬೇಕೆಂದೋ, ಬ್ಯಾಗ್​ ಬೇರೆ ಬೇಕೆಂದೋ, ಯಾರೋ ಕ್ಲಾಸ್​ನಲ್ಲಿ ಹೊಡೆದರೆಂದೋ ಅತ್ತೂ ಕರೆದು ರಂಪಾಟವಾಡಿದರೆ ಅದಕ್ಕೂ ನಾವೇ ಹೊಡೆತ ತಿನ್ನಬೇಕಾಗಿತ್ತು. ಆದರೆ, ಇಲ್ಲೊಬ್ಬಳು 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ನನ್ನ ಮಕ್ಕಳಿಗೆ ಕಳ್ಳರು ಏನು ಮಾಡಿ ಬಿಡುತ್ತಾರೋ ಎಂಬ ಭಯದಲ್ಲಿ ಆ ಅಪ್ಪ ಎದ್ನೋಬಿದ್ನೋ ಎಂದು ಪೊಲೀಸ್ ಸ್ಟೇಷನ್​ಗೆ ಓಡಿದ್ದಾರೆ.

ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಘಜಿಯಾಬಾದ್​ನಲ್ಲಿ. 5ನೇ ಕ್ಲಾಸ್ ಓದುತ್ತಿರುವ ಬಾಲಕಿಯ ತಂದೆ ಇಂಜಿನಿಯರ್ ಆಗಿದ್ದು, ಮನೆಯಲ್ಲಿದ್ದ ಲ್ಯಾಪ್​ಟಾಪ್ ಓಪನ್ ಮಾಡಿದ ಆಕೆ ತನ್ನ ತಂದೆಯ ಮೊಬೈಲನ್ನು ವಾಟ್ಸಾಪ್​ ವೆಬ್​ಗೆ ಕನೆಕ್ಟ್ ಮಾಡಿ ಅವರದೇ ನಂಬರ್​ನಿಂದ ತನ್ನ ತಾಯಿ, ಪಕ್ಕದ ಮನೆಯವರು, ಕೆಲವು ಸಂಬಂಧಿಕರಿಗೂ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಳು. 1 ಕೋಟಿ ರೂ. ಹಣ ನೀಡದಿದ್ದರೆ ನಿಮ್ಮ ಮಗ ಹಾಗೂ ಮಗಳನ್ನು ಕೊಲೆ ಮಾಡುತ್ತೇವೆ ಎಂದು ಬ್ಲಾಕ್​ಮೇಲ್ ಮಾಡಿದ್ದಳು.

ಆ ವಾಟ್ಸಾಪ್ ಮೆಸೇಜ್ ನೋಡಿ ಬಾಲಕಿಯ ತಂದೆ-ತಾಯಿ ಕಂಗಾಲಾಗಿದ್ದರು. ತಮ್ಮದೇ ನಂಬರ್​ನಿಂದ ಈ ರೀತಿ ಮಾಡಿದ್ದಾರೆಂದರೆ ಯಾರೋ ದೊಡ್ಡ ಹ್ಯಾಕರ್ ಇರಬಹುದು. ನಮ್ಮ ಮನೆಯಲ್ಲಿ ನಡೆಯುತ್ತಿರುವ ಘಟನೆಯನ್ನು ಆತ ನೋಡುತ್ತಿರಬಹುದು ಎಂದು ಇಂಜಿನಿಯರ್​ಗೆ ಆತಂಕ ಶುರುವಾಗಿತ್ತು. ಕೊನೆಗೆ ಸಂಬಂಧಿಕರ ಒತ್ತಾಯದ ಮೇರೆಗೆ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದರು.

ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಆ ಇಂಜಿನಿಯರ್ ಮನೆಯ ಲ್ಯಾಪ್​ಟ್ಯಾಪ್​ನಿಂದಲೇ ಈ ಸಂದೇಶ ಕಳುಹಿಸಲಾಗಿದೆ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ಮನೆಯವರನ್ನೆಲ್ಲ ವಿಚಾರಣೆ ನಡೆಸುವಾಗ ಆ ಬಾಲಕಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ನನ್ನ ಅಪ್ಪ-ಅಮ್ಮ ದಿನವೂ ನನಗೆ ಬೈಯುತ್ತಿದ್ದರು. ನನಗೆ ಆನ್​ಲೈನ್ ಕ್ಲಾಸ್​ ವೇಳೆ ಬಿಟ್ಟರೆ ಬೇರೆ ಹೊತ್ತಿನಲ್ಲಿ ಮೊಬೈಲ್ ಕೊಡುತ್ತಿರಲಿಲ್ಲ. ಇದರಿಂದ ಕೋಪ ಬಂದು ಅವರಿಗೆ ಪಾಠ ಕಲಿಸಬೇಕೆಂದು 1 ಕೋಟಿ ರೂ. ಕೊಡಬೇಕು ಎಂದು ಬ್ಲಾಕ್​ಮೇಲ್ ಮಾಡಿದೆ ಎಂದು ಹೇಳಿದ್ದಾಳೆ.

ತಮ್ಮ ಮಗಳು ಇಷ್ಟೆಲ್ಲ ಕ್ರಿಮಿನಲ್ ಆಗಿ ಯೋಚನೆ ಮಾಡುತ್ತಾಳೆಂಬ ವಿಷಯ ತಿಳಿದ ತಂದೆ-ತಾಯಿಗೆ ಶಾಕ್ ಆಗಿದೆ. ಆ ಬಾಲಕಿಯ ಮಾತು ಕೇಳಿ ಪೊಲೀಸರೂ ಶಾಕ್ ಆಗಿದ್ದಾರೆ. ಆ ಬಾಲಕಿಯನ್ನು ಕೌನ್ಸಿಲಿಂಗ್​ ಮಾಡಿಸುವಂತೆ ಪೋಷಕರಿಗೆ ತಿಳಿಸಲಾಗಿದೆ.

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

(11 Year Old Daughter asked Father for Extortion of 1 Crore Blackmailed him after he Refused to give Mobile)

Published On - 7:30 pm, Sat, 31 July 21

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!