AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!

Crime News Today: 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ಈ ಕತೆ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ!

Shocking News: 1 ಕೋಟಿ ರೂ. ಕೊಡದಿದ್ದರೆ ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ; 11 ವರ್ಷದ ಮಗಳಿಂದಲೇ ಅಪ್ಪನಿಗೆ ಬ್ಲಾಕ್​ಮೇಲ್!
ಸೈಬರ್ ಕ್ರೈಂ
TV9 Web
| Edited By: |

Updated on:Jul 31, 2021 | 7:34 PM

Share

ಘಜಿಯಾಬಾದ್: ಇದು ನೀವು ಊಹಿಸಲೂ ಸಾಧ್ಯವಾಗದಂತಹ ಕತೆ. ನಾವು ನೀವೆಲ್ಲ 5ನೇ ಕ್ಲಾಸ್​ನಲ್ಲಿದ್ದಾಗ ಹೇಗಿದ್ದೆವು ಎಂದು ನೆನಪಿಸಿಕೊಳ್ಳಿ. ಶಾಲೆ ಬಿಟ್ಟರೆ ಮನೆ, ಮನೆ ಬಿಟ್ಟರೆ ಶಾಲೆ ಇಷ್ಟೇ ನಮ್ಮ ಪ್ರಪಂಚವಾಗಿತ್ತು. ಆಗೆಲ್ಲ ಮೊಬೈಲ್, ಫೋನ್, ಇಂಟರ್ನೆಟ್​ ಇದ್ಯಾವುದೂ ಮಕ್ಕಳಿಗೆ ಸಿಗುತ್ತಿರಲಿಲ್ಲ. ಊಟ ಬೇಡವೆಂದೋ, ಹೊಸ ಬಟ್ಟೆ ಬೇಕೆಂದೋ, ಬ್ಯಾಗ್​ ಬೇರೆ ಬೇಕೆಂದೋ, ಯಾರೋ ಕ್ಲಾಸ್​ನಲ್ಲಿ ಹೊಡೆದರೆಂದೋ ಅತ್ತೂ ಕರೆದು ರಂಪಾಟವಾಡಿದರೆ ಅದಕ್ಕೂ ನಾವೇ ಹೊಡೆತ ತಿನ್ನಬೇಕಾಗಿತ್ತು. ಆದರೆ, ಇಲ್ಲೊಬ್ಬಳು 11 ವರ್ಷದ ಬಾಲಕಿ ತನಗೆ 1 ಕೋಟಿ ರೂ ಹಣ. ಕೊಡದೇ ಇದ್ದರೆ ನಿಮ್ಮ ಮಗ ಮತ್ತು ಮಗಳನ್ನು ಸಾಯಿಸುತ್ತೇನೆ ಎಂದು ಸ್ವಂತ ಅಪ್ಪನಿಗೇ ಬೆದರಿಕೆ ಸಂದೇಶ ಕಳುಹಿಸಿದ್ದಾಳೆ. ನನ್ನ ಮಕ್ಕಳಿಗೆ ಕಳ್ಳರು ಏನು ಮಾಡಿ ಬಿಡುತ್ತಾರೋ ಎಂಬ ಭಯದಲ್ಲಿ ಆ ಅಪ್ಪ ಎದ್ನೋಬಿದ್ನೋ ಎಂದು ಪೊಲೀಸ್ ಸ್ಟೇಷನ್​ಗೆ ಓಡಿದ್ದಾರೆ.

ಈ ವಿಚಿತ್ರ ಘಟನೆ ನಡೆದಿರುವುದು ಉತ್ತರ ಪ್ರದೇಶದ ಘಜಿಯಾಬಾದ್​ನಲ್ಲಿ. 5ನೇ ಕ್ಲಾಸ್ ಓದುತ್ತಿರುವ ಬಾಲಕಿಯ ತಂದೆ ಇಂಜಿನಿಯರ್ ಆಗಿದ್ದು, ಮನೆಯಲ್ಲಿದ್ದ ಲ್ಯಾಪ್​ಟಾಪ್ ಓಪನ್ ಮಾಡಿದ ಆಕೆ ತನ್ನ ತಂದೆಯ ಮೊಬೈಲನ್ನು ವಾಟ್ಸಾಪ್​ ವೆಬ್​ಗೆ ಕನೆಕ್ಟ್ ಮಾಡಿ ಅವರದೇ ನಂಬರ್​ನಿಂದ ತನ್ನ ತಾಯಿ, ಪಕ್ಕದ ಮನೆಯವರು, ಕೆಲವು ಸಂಬಂಧಿಕರಿಗೂ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಳು. 1 ಕೋಟಿ ರೂ. ಹಣ ನೀಡದಿದ್ದರೆ ನಿಮ್ಮ ಮಗ ಹಾಗೂ ಮಗಳನ್ನು ಕೊಲೆ ಮಾಡುತ್ತೇವೆ ಎಂದು ಬ್ಲಾಕ್​ಮೇಲ್ ಮಾಡಿದ್ದಳು.

ಆ ವಾಟ್ಸಾಪ್ ಮೆಸೇಜ್ ನೋಡಿ ಬಾಲಕಿಯ ತಂದೆ-ತಾಯಿ ಕಂಗಾಲಾಗಿದ್ದರು. ತಮ್ಮದೇ ನಂಬರ್​ನಿಂದ ಈ ರೀತಿ ಮಾಡಿದ್ದಾರೆಂದರೆ ಯಾರೋ ದೊಡ್ಡ ಹ್ಯಾಕರ್ ಇರಬಹುದು. ನಮ್ಮ ಮನೆಯಲ್ಲಿ ನಡೆಯುತ್ತಿರುವ ಘಟನೆಯನ್ನು ಆತ ನೋಡುತ್ತಿರಬಹುದು ಎಂದು ಇಂಜಿನಿಯರ್​ಗೆ ಆತಂಕ ಶುರುವಾಗಿತ್ತು. ಕೊನೆಗೆ ಸಂಬಂಧಿಕರ ಒತ್ತಾಯದ ಮೇರೆಗೆ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದರು.

ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ಆ ಕಳ್ಳರಿಗಾಗಿ ಹುಡುಕಾಟ ನಡೆಸಿದ್ದರು. ಆ ವೇಳೆ ಆ ಇಂಜಿನಿಯರ್ ಮನೆಯ ಲ್ಯಾಪ್​ಟ್ಯಾಪ್​ನಿಂದಲೇ ಈ ಸಂದೇಶ ಕಳುಹಿಸಲಾಗಿದೆ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ಮನೆಯವರನ್ನೆಲ್ಲ ವಿಚಾರಣೆ ನಡೆಸುವಾಗ ಆ ಬಾಲಕಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ನನ್ನ ಅಪ್ಪ-ಅಮ್ಮ ದಿನವೂ ನನಗೆ ಬೈಯುತ್ತಿದ್ದರು. ನನಗೆ ಆನ್​ಲೈನ್ ಕ್ಲಾಸ್​ ವೇಳೆ ಬಿಟ್ಟರೆ ಬೇರೆ ಹೊತ್ತಿನಲ್ಲಿ ಮೊಬೈಲ್ ಕೊಡುತ್ತಿರಲಿಲ್ಲ. ಇದರಿಂದ ಕೋಪ ಬಂದು ಅವರಿಗೆ ಪಾಠ ಕಲಿಸಬೇಕೆಂದು 1 ಕೋಟಿ ರೂ. ಕೊಡಬೇಕು ಎಂದು ಬ್ಲಾಕ್​ಮೇಲ್ ಮಾಡಿದೆ ಎಂದು ಹೇಳಿದ್ದಾಳೆ.

ತಮ್ಮ ಮಗಳು ಇಷ್ಟೆಲ್ಲ ಕ್ರಿಮಿನಲ್ ಆಗಿ ಯೋಚನೆ ಮಾಡುತ್ತಾಳೆಂಬ ವಿಷಯ ತಿಳಿದ ತಂದೆ-ತಾಯಿಗೆ ಶಾಕ್ ಆಗಿದೆ. ಆ ಬಾಲಕಿಯ ಮಾತು ಕೇಳಿ ಪೊಲೀಸರೂ ಶಾಕ್ ಆಗಿದ್ದಾರೆ. ಆ ಬಾಲಕಿಯನ್ನು ಕೌನ್ಸಿಲಿಂಗ್​ ಮಾಡಿಸುವಂತೆ ಪೋಷಕರಿಗೆ ತಿಳಿಸಲಾಗಿದೆ.

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

Viral News: ಬ್ರೈನ್ ಟ್ಯೂಮರ್ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿದ ಮಹಿಳೆ; ಆಮೇಲೆ ನಡೆದಿದ್ದು ಅಚ್ಚರಿ!

(11 Year Old Daughter asked Father for Extortion of 1 Crore Blackmailed him after he Refused to give Mobile)

Published On - 7:30 pm, Sat, 31 July 21

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ