AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಕಿ, ರಾಬಿನ್​ಗೆ ವಿದೇಶಿ ಹ್ಯಾಕರ್​ಗಳ ಜೊತೆ ನಂಟಿನ ಶಂಕೆ!

2019ರಲ್ಲಿ ಹ್ಯಾಕರ್ ಸಹೋದರರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಬಿಟ್ ಫಿನಿಕ್ಸ್ ಹ್ಯಾಕಿಂಗ್ ಭಾಗಿದಾರನೆಂದು ತಿಳಿದಿದ್ದ ಶ್ರೀಕಿ, 2,000 ಬಿಟ್ ಕಾಯಿನ್ ದೋಚಿದ್ದಾಗಿ ಹೇಳಿದ್ದ. 2020ರಲ್ಲಿ ಆ ಬಗ್ಗೆ ಹೇಳಿಕೊಂಡಿದ್ದ.

ಶ್ರೀಕಿ, ರಾಬಿನ್​ಗೆ ವಿದೇಶಿ ಹ್ಯಾಕರ್​ಗಳ ಜೊತೆ ನಂಟಿನ ಶಂಕೆ!
ಶ್ರೀಕೃಷ್ಣ ಅಲಿಯಾಸ್​ ಶ್ರೀಕಿ
TV9 Web
| Edited By: sandhya thejappa|

Updated on:Nov 15, 2021 | 9:20 AM

Share

ಬೆಂಗಳೂರು: ಶ್ರೀಕಿ ಮತ್ತು ರಾಬಿನ್​ಗೆ ಇಸ್ರೇಲ್​ನ ಇಬ್ಬರು ಸಹೋದರರ ಜೊತೆ ನಂಟಿರುವ ಅನುಮಾನ ವ್ಯಕ್ತವಾಗಿದೆ. ಎಲಿ ಮತ್ತು ಅಸಾಫ್ ಎಂಬುವವರು 2016ರಲ್ಲಿ ದೊಡ್ಡ ಮೊತ್ತದ ಬಿಟ್ ಕಾಯಿನ್ನ ಕಳವು ಮಾಡಿದ್ದರು. ಇಬ್ಬರು ಸುಮಾರು 1 ಲಕ್ಷ 20 ಸಾವಿರ ಬಿಟ್ ಕಾಯಿನ್ ಕದ್ದಿದ್ದರು. ಕದ್ದ ಬಿಟ್ ಕಾಯಿನ್ ಮೌಲ್ಯ 56 ಸಾವಿರ ಕೋಟಿ ರೂಪಾಯಿ. ಈ ಹ್ಯಾಕರ್ಸ್ ಬ್ರದರ್ಸ್ ಕ್ರಿಪ್ಟೋ ಕರೆನ್ಸಿ ಫೋರಮ್, ರೆಡ್ಡಿಟ್, ಟೆಲಿಗ್ರಾಂ ಲಿಂಕ್​ಗಳನ್ನು ಪೋಸ್ಟ್ ಮಾಡುತ್ತಿದ್ದರು. ಇಂತವರ ಜೊತೆ ಶ್ರೀಕಿ, ರಾಬಿನ್ ನಂಟಿದೆ ಎಂಬ ಶಂಕೆ ಮೂಡಿದೆ.

2019ರಲ್ಲಿ ಹ್ಯಾಕರ್ ಸಹೋದರರನ್ನು ಇಸ್ರೇಲ್ ಪೊಲೀಸರು ಬಂಧಿಸಿದ್ದರು. ಬಿಟ್ ಫಿನಿಕ್ಸ್ ಹ್ಯಾಕಿಂಗ್ ಭಾಗಿದಾರನೆಂದು ತಿಳಿದಿದ್ದ ಶ್ರೀಕಿ, 2,000 ಬಿಟ್ ಕಾಯಿನ್ ದೋಚಿದ್ದಾಗಿ ಹೇಳಿದ್ದ. 2020ರಲ್ಲಿ ಆ ಬಗ್ಗೆ ಹೇಳಿಕೊಂಡಿದ್ದ. ಆದರೆ ಶ್ರೀಕಿ ಹೇಳಿರುವುದಕ್ಕೆ ಯಾವ ಪುರಾವೆ ಸಿಕ್ಕಿರಲಿಲ್ಲ. ಈ ಬಗ್ಗೆ ಇಸ್ರೇಲ್ ಪೊಲೀಸರು ಭಾರತವನ್ನ ಸಂಪರ್ಕಿಸಿಲ್ಲ. 2019ರಲ್ಲೇ ಇಸ್ರೇಲ್ ಪೊಲೀಸರು ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದರು.

ಬಿಟ್ ಕಾಯಿನ್ ನಗದು ರೂಪಕ್ಕೆ ಪರಿವರ್ತಿಸುವುದು ಕಷ್ಟ. ದೊಡ್ಡ ಮಟ್ಟದ ಬಿಟ್ ಕಾಯಿನ್ ಕದ್ದರೆ ಅಕೌಂಟ್ ಫ್ರೀಜ್ ಆಗುತ್ತದೆ. ಶ್ರೀಕಿಯಿಂದ CONIEAL ಈಥೇರಿಯಂ ಕಾಯಿನ್ ಹ್ಯಾಕ್ ಆಗಿದೆ. ರಾಬಿನ್ ಖಾತೆಗೆ 450 ಈಥೇರಿಯಂ ಕಾಯಿನ್ ಮತ್ತು 60 ಸಾವಿರ ಬೆಲೆಯ US ಟಿಡಿ ಟೋಕನ್ ಕಳುಹಿಸಿದ್ದ. ಇದಾದ ಕೆಲವೇ ಕ್ಷಣದಲ್ಲಿ ಅಕೌಂಟ್ ಬ್ಲಾಕ್ ಆಗಿತ್ತು. BINANCE.COM ಕಂಪನಿ ಅಕೌಂಟ್​ನ ಬ್ಲಾಕ್ ಮಾಡಿತ್ತು. ಬಳಿಕ ಕೆವೈಸಿ ನೀಡಿ ಖಾತೆ ರೀ ಓಪನ್ ಮಾಡಿಸಿಕೊಂಡಿದ್ದ.

ಇದಾದ ನಂತರ ಚೀನಾ ಮೂಲದ ವ್ಯಕ್ತಿಯಿಂದ ಇ-ಮೇಲ್ ಒಂದು ಬಂದಿತ್ತು. ತನ್ನ ಖಾತೆಯನ್ನು ಹ್ಯಾಕ್ ಮಾಡಿ ಹಣವನ್ನು ಎಗರಿಸಿದ್ದೀರಿ. ನಿಮ್ಮ ಕುಟುಂಬವನ್ನು ಸುಮ್ಮನೆ ಬಿಡಲ್ಲವೆಂದು ಬೆದರಿಸಿದ್ದ. ಈ ವೇಳೆ ನಾನು ಹ್ಯಾಕ್ ಮಾಡಿಲ್ಲವೆಂದು ರಾಬಿನ್ ಹೇಳಿದ್ದ. ನಂತರ ಚೀನಾ ಮೂಲದ ವ್ಯಕ್ತಿಗೆ ಶೇಕಡಾ 75ರಷ್ಟು ಹಣ, ರಾಬಿನ್​ಗೆ ಶೇ.25ರಷ್ಟು ತೆಗೆದುಕೊಳ್ಳುವ ಡೀಲ್ ಆಗಿತ್ತು. ನಂತರ ರಾಬಿನ್ ಖಾತೆಯಲ್ಲಿ 7 ಬಿಟ್ ಕಾಯಿನ್ ಇರುತ್ತೆ. ತಲಾ 3.5 ಬಿಟ್ ಕಾಯಿನ್ ಶ್ರೀಕಿ, ರಾಬಿನ್ ಹಂಚಿಕೊಂಡಿದ್ದರು. ಆದರೆ ಶ್ರೀಕಿ ಕದ್ದಿರುವ ಬಿಟ್ ಕಾಯಿನ್ ಎಲ್ಲಿ ಹೋಯಿತೆಂಬ ಪ್ರಶ್ನೆ ಕಾಡಿದೆ.

ಇದನ್ನೂ ಓದಿ

ಡ್ರಗ್ಸ್​ ತನಿಖೆ ದಾರಿ ತಪ್ಪಿಸಲೆಂದೇ ಬಿಟ್​ ಕಾಯಿನ್ ಮುನ್ನೆಲೆಗೆ ತಂದ ಕಾಂಗ್ರೆಸ್: ಬಿಜೆಪಿ ನಾಯಕ ಗಂಭೀರ ಆರೋಪ

ಬಿಟ್​ಕಾಯಿನ್​ ಪ್ರಕರಣ 2018ರಿಂದಲೂ ಇದೆ ಅಂತಾರೆ, ಯಾಕೆ ಕ್ರಮ ಕೈಗೊಳ್ಳಲಿಲ್ಲ ಅಂತ ಸುರ್ಜೇವಾಲ ಕೇಳಲಿ; ಸಿಎಂ ಬೊಮ್ಮಾಯಿ

Published On - 9:15 am, Mon, 15 November 21

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್