AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಥಾಣೆಯಲ್ಲಿ ಚಾಕೊಲೇಟ್ ತರಲು ಹೋಗಿದ್ದ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಲೆ

ಮಹಾರಾಷ್ಟ್ರದ ಥಾಣೆ ಬಳಿಯ ಕಲ್ಯಾಣ್‌ನಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯನ್ನು ಅಪಹರಿಸಿದ್ದ ದಂಪತಿಯನ್ನು ಕೋಲ್ಸೆವಾಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಪದ್ಘಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆರೋಪಿಗಳನ್ನು ಕಲ್ಯಾಣ್ ನಿವಾಸಿಗಳಾದ ವಿಶಾಲ್ ಗಾವ್ಲಿ (35) ಮತ್ತು ಅವರ ಪತ್ನಿ ಸಾಕ್ಷಿ ಗಾವ್ಲಿ (25) ಎಂದು ಗುರುತಿಸಲಾಗಿದೆ.

ಥಾಣೆಯಲ್ಲಿ ಚಾಕೊಲೇಟ್ ತರಲು ಹೋಗಿದ್ದ 13 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಲೆ
representational image
ಸುಷ್ಮಾ ಚಕ್ರೆ
|

Updated on: Dec 25, 2024 | 9:33 PM

Share

ಥಾಣೆ: ಮಹಾರಾಷ್ಟ್ರದ ಕಲ್ಯಾಣ್‌ನಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯನ್ನು ಅಪಹರಿಸಿದ್ದ ದಂಪತಿಯನ್ನು ಕೋಲ್ಸೆವಾಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಪದ್ಘಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಸ್ಥಳದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಆರೋಪಿಗಳನ್ನು ಕಲ್ಯಾಣ್ ನಿವಾಸಿಗಳಾದ ವಿಶಾಲ್ ಗಾವ್ಲಿ (35) ಮತ್ತು ಅವರ ಪತ್ನಿ ಸಾಕ್ಷಿ ಗಾವ್ಲಿ (25) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಸಾಕ್ಷಿ ಎಂಬಾಕೆ ವಿಶಾಲ್ ಗಾವ್ಲಿಯ ಮೂರನೇ ಪತ್ನಿಯಾಗಿದ್ದು, ಕಳೆದ 2 ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದಳು. ತನಿಖೆಯ ವೇಳೆ ಆರೋಪಿ ವಿಶಾಲ್ ಕ್ರಿಮಿನಲ್ ಅಪರಾಧಿ ಎಂಬುದು ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ, ಮಹಿಳೆಯರ ಮಾನಹಾನಿ, ದೌರ್ಜನ್ಯ ಸೇರಿದಂತೆ ಆತನ ವಿರುದ್ಧ ಒಟ್ಟು 4 ಪ್ರಕರಣಗಳು ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಆರೋಪಿಯು ಚಾಕೊಲೇಟ್ ಮತ್ತು ತಿಂಡಿಗಳನ್ನು ಖರೀದಿಸಲು ಮನೆಯಿಂದ ಹೋದಾಗ ಆರೋಪಿಯು ಅವಳನ್ನು ಅಪಹರಿಸಿ ತನ್ನ ಕೋಣೆಗೆ ಕರೆದೊಯ್ದು ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ನಂತರ ಅವಳನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಗುಪ್ತಾಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟ ಪಾಪಿ

ಕೊಲೆಯ ನಂತರ ಭಯಭೀತನಾದ ಆತ ತನ್ನ ಪತ್ನಿಗೆ ಘಟನೆಯನ್ನು ಹೇಳಿದ್ದಾನೆ. ಪತ್ನಿ ಸಾಕ್ಷಿಯ ಸಹಾಯದಿಂದ ಬಾಲಕಿಯ ಶವವನ್ನು ಚೀಲದಲ್ಲಿ ತುಂಬಿಸಲಾಯಿತು. ಅವರು ಆಟೋ ರಿಕ್ಷಾವನ್ನು ಕರೆದು ಅದರಲ್ಲಿ ಬ್ಯಾಗ್ ಇಟ್ಟುಕೊಂಡು ಬಾಪಗಾಂವ್ ಪ್ರದೇಶದ ಕಡೆಗೆ ಹೊರಟರು. ಅಲ್ಲಿ ಅವರು ದೇಹವನ್ನು ಬಿಸಾಡಿದ್ದರು.

ನಾವು 6 ತಂಡಗಳನ್ನು ರಚಿಸಿದ್ದೇವೆ. ನಾವು ಮಂಗಳವಾರ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಒಬ್ಬ ಆರೋಪಿಯನ್ನು ಬಂಧಿಸಿದ್ದೇವೆ. ಇನ್ನೊಂದು ತಂಡವು ಪ್ರಮುಖ ಆರೋಪಿ ವಿಶಾಲ್ ಗಾವ್ಲಿಯನ್ನು ಬುಲ್ಧಾನಾದ ಶೇಗಾಂವ್‌ನಿಂದ ಬಂಧಿಸಿದೆ. ಆರೋಪಿಗಳನ್ನು ಕೋರ್ಟ್ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ಆಸ್ಪತ್ರೆಗಳು ನಿರಾಕರಿಸುವಂತಿಲ್ಲ: ಹೈಕೋರ್ಟ್​

ಸೋಮವಾರ ರಾತ್ರಿ ನಾಪತ್ತೆಯಾಗಿದ್ದ ಬಾಲಕಿಯ ಮನೆಯವರು ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಸ್ಥಳೀಯ ಅಂಗಡಿಯೊಂದರಿಂದ ಚಾಕೊಲೇಟ್ ಖರೀದಿಸಲು 20 ರೂಪಾಯಿಯೊಂದಿಗೆ ಮನೆಯಿಂದ ಹೊರಟಿದ್ದ ಬಾಲಕಿ ವಾಪಸ್ ಬಂದಿರಲಿಲ್ಲ. ಆಕೆಯ ಮನೆಯವರು ಎಲ್ಲ ಕಡೆ ಹುಡುಕಿದ ನಂತರ ಪೊಲೀಸರಿಗೆ ದೂರು ನೀಡಿದ್ದರು.

ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಾಲಕಿಯ ಶವವನ್ನು ಬಿಸಾಡಿರುವುದು ಕಂಡು ಬಂದಿದೆ. ನಂತರ, ಮೃತದೇಹವನ್ನು ಪದ್ಘಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಅದಾದ ನಂತರ ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಕಳುಹಿಸಲಾಯಿತು.

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ