ಹಿರಿಯೂರು ಪಟ್ಟಣ ಬಳಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ, ಪ್ರೇಯಸಿ ಕಡೆಯವರಿಂದ ಕೃತ್ಯ ಶಂಕೆ

Acid Attack: ಊಟಕ್ಕೆಂದು ಬಸ್​ ನಿಂತಿದ್ದ ವೇಳೆ ದುಷ್ಕರ್ಮಿಗಳು ಇಬ್ಬರು ಬಂದು ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣ ಬಳಿ ಈ ಘಟನೆ ನಡೆದಿದೆ.

ಹಿರಿಯೂರು ಪಟ್ಟಣ ಬಳಿ ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ, ಪ್ರೇಯಸಿ ಕಡೆಯವರಿಂದ ಕೃತ್ಯ ಶಂಕೆ
Edited By:

Updated on: Jan 16, 2024 | 10:13 PM

ಚಿತ್ರದುರ್ಗ, (ಜನವರಿ 16): ವ್ಯಕ್ತಿಯೋರ್ವನ ಮೇಲೆ ಆ್ಯಸಿಡ್ ದಾಳಿ (Acid attack) ನಡೆಸಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ಪಟ್ಟಣ ಬಳಿ ನಡೆದಿದೆ. ಹೊಳಲ್ಕೆಯ ಅರುಣ್ ಕುಮಾರ್(29) ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ಹಿರಿಯೂರು ಬಳಿ ಊಟಕ್ಕೆ ಡಾಬಾ ನಿಂತಿದ್ದ ವೇಳೆ ಬಂದ ಇಬ್ಬರು ದುಷ್ಕರ್ಮಿಗಳು ಅರುಣ್ ಕುಮಾರ್ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಅರುಣ್ ಕೈ ಮತ್ತು ಮುಖಕ್ಕೆ ಗಾಯವಾಗಿದ್ದು, ಅವರನ್ನು ಚಿತ್ರದುರ್ಗಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಖಾಸಗಿ ಬಂಕ್ ನಲ್ಲಿ ಮ್ಯಾನೇಜರ್ ಆಗಿರುವ ಅರುಣ್, ಇಂದು ರಾಜಹಂಸ ಬಸ್ ನಲ್ಲಿ ಚಿತ್ರದುರ್ಗದಿಂದ ಬೆಂಗಳೂರು ತೆರಳುತ್ತಿದ್ದರು. ಆದ್ರೆ, ಹಿರಿಯೂರು ಬಳಿ ಖಾಸಗಿ ಡಾಬಾ ಬಳಿ ಬಸ್ ನಿಂತಾಗ ವಾಶ್ ರೂಮ್ ಗೆ ಹೋಗಿ ಬಸ್ ಏರಲು ಬರುವಾಗ ಆ್ಯಸಿಡ್ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.

ಅರುಣ್ ಕುಮಾರ್ ಓರ್ವ ಯುವತಿಯನ್ನು ಪ್ರೀತಿಸಿಸುತ್ತಿದ್ದರು. ಆದ್ರೆ, ಯುವತಿ ಕಡೆಯವರಿಂದ ಪ್ರೇಮಕ್ಕೆ ವಿರೋಧವಿದ್ದು, ಪ್ರೀತಿಸಿದ ಯುವತಿ ಕಡೆಯವರಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ ಅರುಣ್, ಈ ಮೊದಲು ಕರೆ ಮಾಡಿ ಬೆದರಿಕೆ ಒಡ್ಡಿದ್ದರು, ಅಪಾಯವಿದೆ ಎಂದು ಹೇಳಿದ್ದರು. ಬಳಿಕ 2 ದಿನದಿಂದ ಫಾಲೋ ಮಾಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Tue, 16 January 24