Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ರಾಕ್ಷಸರಾಗುತ್ತಾರೆ ಎಂದು ಪುಟ್ಟ ಮಕ್ಕಳನ್ನೇ ಕೊಂದ ಪಾಪಿ ತಂದೆ..!

Crime News In Kannada: ಈ ವೇಳೆ ಆತ ಹೇಳಿದ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟರು. ಹೌದು, ನನ್ನ ಮಕ್ಕಳಿಬ್ಬರದು ಸರ್ಪ ಡಿಎನ್​ಎ.

Crime News: ರಾಕ್ಷಸರಾಗುತ್ತಾರೆ ಎಂದು ಪುಟ್ಟ ಮಕ್ಕಳನ್ನೇ ಕೊಂದ ಪಾಪಿ ತಂದೆ..!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 18, 2021 | 9:21 PM

ಮಾನವ ಎಷ್ಟೇ ಆಧುನಿಕತೆಯತ್ತ ವಾಲಿದರೂ ಎಲ್ಲೋ ಒಂದು ಕಡೆ ಮೂಢನಂಬಿಕೆ ಎಂಬ ಮೌಢ್ಯದಲ್ಲಿ ಸಿಲುಕಿರುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ನಾವು ಸಾಮಾನ್ಯವಾಗಿ ನಿಧಿಗಾಗಿ ಮಕ್ಕಳನ್ನೇ ಬಲಿಕೊಟ್ಟಿರುವ ಘಟನೆಗಳ ಬಗ್ಗೆ ಓದಿರುತ್ತೀವಿ. ಇಲ್ಲ ದೇವರಿಗೆ ಮಕ್ಕಳನ್ನೇ ಬಲಿ ನೀಡಿರುವ ನೀಚ ಕುಕೃತ್ಯದ ಬಗ್ಗೆ ಕೇಳಿರುತ್ತೀರಿ. ಇದೆಲ್ಲವೂ ಭಾರತದ ಅಜ್ಞಾನಿಗಳ ವಿಷಯ ಎನ್ನಬಹುದು. ಆದರೆ ಆಧುನಿಕತೆಯ ಜನಕರೆಂದೇ ಕರೆಸಿಕೊಳ್ಳುವ ಅಮೆರಿಕದಲ್ಲೂ ಇಂತಹ ಘಟನೆಗಳು ನಡೆಯುತ್ತವೆ ಎಂದರೆ ನಂಬಲೇಬೇಕು. ಅದು ಕೂಡ ಮಕ್ಕಳು ಮುಂದೆ ರಾಕ್ಷಸರಾಗುತ್ತಾರೆ ಎಂಬ ಭಯದಲ್ಲಿ ಕೊಲ್ಲುವುದೆಂದರೆ…!

ಹೌದು, ಅಂತಹದೊಂದು ಘಟನೆ ಅಮೆರಿಕಾದ ಲಾಸ್ ಏಂಜಲೀಸ್​ನ ಮ್ಯಾಥ್ಯೂ ಟೇಲರ್ ಕೋಲ್ಮನ್ ಎಂಬ ವ್ಯಕ್ತಿಯು ಇತ್ತೀಚೆಗೆ ಮನೆಯಿಂದ ತನ್ನ ಕಾರಿನಲ್ಲಿ ಹೊರಟಿದ್ದ. ಇದೇ ವೇಳೆ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದ. ಕೇವಲ 2 ಮತ್ತು 10 ವಯಸ್ಸಿನ ಮಕ್ಕಳನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂಬ ಹೆಂಡ್ತಿಯ ಪ್ರಶ್ನೆಗೂ ಆತ ನಿರುತ್ತರ ನೀಡಿದ್ದ.

ಇತ್ತ ಸಂಜೆಯಾದರೂ ಪತಿ ಮತ್ತು ಮಕ್ಕಳು ಮನೆಗೆ ಬಂದಿರಲಿಲ್ಲ. ಇದರಿಂದ ಏನೋ ಅನಾಹುತ ಸಂಭವಿಸಿದೆ ಎಂದು ಕೋಲ್ಮನ್ ಹೆಂಡ್ತಿ ಅನುಮಾನಗೊಂಡಿದ್ದಾಳೆ. ಅಷ್ಟೇ ಅಲ್ಲದೆ ರಾತ್ರಿಯಾದರೂ ಮನೆಗೆ ಹಿಂತಿರುಗದ ಪತಿ ಹಾಗೂ ಮಕ್ಕಳ ವಿವರಗಳೊಂದಿಗೆ ಮರುದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ದೂರು ದಾಖಲಿಸಿದ ಪೊಲೀಸರು ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಕೋಲ್ಮನ್ ಬಳಿಯಿದ್ದ ಫೋನ್ ಮೆಕ್ಸಿಕೋ ಗಡಿಭಾಗದಲ್ಲಿರುವುದು ತಿಳಿದು ಬಂದಿದೆ.

ಹೀಗಾಗಿ ಪೊಲೀಸರು ಕೂಡ ಆ ಭಾಗದತ್ತ ಮುಖ ಮಾಡಿದ್ದಾರೆ. ಅಷ್ಟರಲ್ಲಾಗಲೇ ಕೋಲ್ಮನ್ ಮೆಕ್ಸಿಕೋ ಭಾಗದಿಂದ ಅಮೆರಿಕಕ್ಕೆ ಹಿಂತಿರುಗುತ್ತಿದ್ದ. ಹೀಗಾಗಿ ಆತನನ್ನು ಗಡಿಯಲ್ಲೇ ಬಂಧಿಸಲಾಯಿತು. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಮಕ್ಕಳಿಬ್ಬರೂ ಇರಲಿಲ್ಲ. ಇದರಿಂದ ಮತ್ತಷ್ಟು ಅನುಮಾನಗೊಂಡ ಪೊಲೀಸರು ಕೋಲ್ಮನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವೇಳೆ ಆತ ಹೇಳಿದ ಮಾತುಗಳನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟರು. ಹೌದು, ನನ್ನ ಮಕ್ಕಳಿಬ್ಬರದು ಸರ್ಪ ಡಿಎನ್​ಎ. ಅವರು ಮುಂದೆ ರಾಕ್ಷಸರಾಗುತ್ತಾರೆ. ಹೀಗಾಗಿ ರಾಕ್ಷಸರಿಂದ ಈ ಜಗತ್ತನ್ನು ರಕ್ಷಿಸಲು ತಾನು ಇಬ್ಬರನ್ನೂ ಕೊಂದಿದ್ದೇನೆ ಎಂದು ಬಾಯ್ಬಿಟ್ಟಿದ್ದಾನೆ. ಈ ವೇಳೆ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ, ಮೆಕ್ಸಿಕೋದ ರೆಸಾರಿಟೊ ಪ್ರದೇಶದಲ್ಲಿ ಮೀನು ಹಿಡಿಯುವ ಬಂದೂಕಿನಿಂದ ಮಕ್ಕಳನ್ನು ಸಾಯಿಸಿದ್ದು, ಅವರ ದೇಹವನ್ನು ಅಲ್ಲೇ ಎಸೆದು ಬಂದಿರುವುದಾಗಿ ತಿಳಿಸಿದ್ದಾನೆ. ಇತ್ತ 40 ವರ್ಷದ ಕೋಲ್ಮನ್​ ಮಾತುಗಳನ್ನು ಕೇಳಿ ಕ್ಯಾಲಿಫೋರ್ನಿಯಾ ಅಧಿಕಾರಿಗಳೇ ದಂಗಾಗಿ ಹೋದರು.

ಇನ್ನು ಮಾಥ್ಯೂ ಕೋಲ್ಮನ್ ಕ್ಯೂನಾನ್ ಮತ್ತು ಇಲ್ಯುಮಿನಾಟಿ ಸಿದ್ಧಾಂತಗಳಿಂದ ಪ್ರೇರಿತನಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ತನ್ನ ಮಕ್ಕಳು ಮುಂದೆ ರಾಕ್ಷಸರಾಗುತ್ತಾರೆ ಎಂಬ ಮೌಢ್ಯವನ್ನು ನಂಬಿ ಇಂತಹ ನೀಚ ಕೃತ್ಯ ಎಸೆಗಿದ್ದಾನೆ ಎಂದು ಫೆಡರಲ್ ಏಜೆಂಟ್ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಮಾನವ ಎಷ್ಟೇ ಆಧುನಿಕತೆಯಲ್ಲಿ ಮುಂದುವರೆದರೂ ಎಲ್ಲೋ ಒಂದು ಕಡೆ ಮೂಢನಂಬಿಕೆ ಎಂಬ ಮೌಢ್ಯದಲ್ಲಿ ಸಿಲುಕಿರುತ್ತಾನೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

(US Man Killed His 2 Children Over Serpent DNA)

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ