ಚಾಮರಾಜನಗರದಲ್ಲಿ ಮಹಿಳೆ, ಮಕ್ಕಳ ಅನುಮಾನಾಸ್ಪದ ಸಾವು; ಕೊಲೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದನೇ ಪತಿ?

| Updated By: Rakesh Nayak Manchi

Updated on: Sep 15, 2023 | 10:58 AM

ಮಹಿಳೆ ಮತ್ತು ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ಮೇಲೆ ಶಂಕೆ ವ್ಯಕ್ತವಾಗಿದ್ದು, ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಆರೋಪ ಕೇಳಿಬಂದಿದೆ. ಪಕ್ಕದ ಜಿಲ್ಲೆ ಮೈಸೂರಿನಲ್ಲಿ ಗರ್ಭಿಣಿಯ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರದಲ್ಲಿ ಮಹಿಳೆ, ಮಕ್ಕಳ ಅನುಮಾನಾಸ್ಪದ ಸಾವು; ಕೊಲೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದನೇ ಪತಿ?
ಪ್ರಾತಿನಿಧಿಕ ಚಿತ್ರ
Follow us on

ಚಾಮರಾಜನಗರ, ಸೆ.15: ಮಹಿಳೆ ಮತ್ತು ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ (Chamarajanagar) ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಪತಿ ಮೇಲೆ ಶಂಕೆ ವ್ಯಕ್ತವಾಗಿದ್ದು, ಕೊಲೆ (Murder) ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಆರೋಪ ಕೇಳಿಬಂದಿದೆ.

ಮೇಘಾ (24), ಪುನ್ವಿತಾ (6) ಹಾಗೂ ಮನ್ವಿತಾ (3) ಅನುಮಾನಸ್ಪದವಾಗಿ ಮೃತ ಪಟ್ಟವರು. ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಹಾಗೂ ಮಕ್ಕಳನ್ನ ಕೊಂದು ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಆರೋಪ ಪತಿ ಅಭಿ ಅಲಿಯಾಸ್ ಧನಂಜಯ್ ವಿರುದ್ಧ ಕೇಳಿಬಂದಿದೆ. ಸ್ಥಳಕ್ಕೆ ತೆರಕಣಾಂಬಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅತ್ತೆಯೊಂದ ಸೊಸೆಗೆ ನಿರಂತರ ಕಿರುಕುಳ

ಕಳೆದ ಐದಾರು ವರ್ಷಗಳಿಂದ ದಿನ ನಿತ್ಯ ಸೊಸೆ ಮೇಘಾಳಿಗೆ ಅತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರಂತೆ. ಇತ್ತ ತಾಯಿಯೊಂದಿಗೆ ಸೇರಿಕೊಂಡು ಮೇಘಾಳ ಪತಿ ಧನಂಜಯ್ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದನಂತೆ. ತನ್ನೊಂದಿಗೆ ಜಗಳವಾಡುತ್ತಿರುವ ಅತ್ತೆಯ ವಿಡಿಯೋವನ್ನು ಕೂಡ ಮೇಘನಾ ಮಾಡಿ ತಂದೆಗೆ ಕಳುಹಿಸಿದ್ದಳು.

ನಿನ್ನೆ ಕೂಡ ಅತ್ತೆ ಸೊಸೆ ನಡುವೆ ಮನಸ್ಥಾಪದಿಂದಾಗಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ತನ್ನ ಮೊಬೈಲ್ ಕ್ಯಾಮರದಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಮೇಘಾ, ತನ್ನ ತಂದೆಗೆ ಕರೆ ಮಾಡಿ ತನಗಾಗುತ್ತಿರುವ ಕಷ್ಟವನ್ನ ಹೇಳಿಕೊಂಡಿದ್ದಳು. ಹೀಗಾಗಿ ತನ್ನ ಮಗಳು ಹಾಗೂ ಆಕೆಯ ಮಕ್ಕಳ ಸಾವಿಗೆ ಪತಿ ಮತ್ತು ಕುಟುಂಬಸ್ಥರೇ ಕಾರಣ ಎಂದು ಮೃತಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೊದಲು ಎರಡು ಮಕ್ಕಳನ್ನ ಕೊಂದು ಬಳಿಕ ಪತ್ನಿಯನ್ನ ಕೊಂದು ನೇಣು ಬಿಗಿಯಲಾಗಿದೆ ಎಂದು ಆರೋಪಿಸಲಾಗಿದೆ.

ಗರ್ಭಿಣಿ ಹೆಂಡತಿ ಕುತ್ತಿಗೆ ಕುಯ್ದು ಕೊಲೆ ಮಾಡಿದ ಪತಿ ಅರೆಸ್ಟ್

ಮೈಸೂರು: ಗರ್ಭಿಣಿ ಹೆಂಡತಿಯ ಕುತ್ತಿಗೆ ಕುಯ್ದು ಕೊಲೆ ಮಾಡಿದ ಪ್ರಕರಣ ಸಂಬಂಧ ಆರೋಪಿ ಪತಿ ಮಂಜುನಾಥ್​​ನನ್ನು ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ಚಾಮಲಾಪುರದಲ್ಲಿ ನಿನ್ನೆ ಶೋಭಾ (21) ಎಂಬಾಕೆಯನ್ನು ನಿನ್ನೆ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ: ಕಲಬುರಗಿ: ಗುಂಡು ಹಾರಿಸಿ ಪತಿಯಿಂದಲೇ ಪತ್ನಿಯ ಕೊಲೆ; ಕಾರಣವೇನು ಗೊತ್ತಾ?

ಮಂಜುನಾಥ್ ಹಾಗೂ ಶೋಭಾ ಪ್ರೀತಿಸಿ ಮದುವೆಯಾಗಿದ್ದರು. ನಿನ್ನೆ ಮನೆಯಲ್ಲಿ ಕುಳಿತು ಮಾತನಾಡುವಾಗ ಜಗಳ ನಡೆದಿದೆ. ಈ ವೇಳೆ ಹರಿತವಾದ ಬ್ಲೇಡ್​ನಿಂದ ಶೋಭಾಳ ಕತ್ತು ಕೊಯ್ದು ಮಂಜುನಾಥ್ ಕೊಲೆ ಮಾಡಿದ್ದ. ಘಟನೆ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 am, Fri, 15 September 23