Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ

ಡೇಟಿಂಗ್​ ಆ್ಯಪ್​​ ಮೂಲಕ ಯುವತಿಯನ್ನು ಪರಿಚಯಿಸಿಕೊಂಡು, ಬಳಿಕ ಆಕೆಯೊಂದಿಗೆ ಅನ್ಯೋನ್ಯವಾಗಿ ಇದ್ದು, ನಂತರ, ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ದೂರ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ
ಸಂತ್ರಸ್ತೆ, ಆರೋಪಿ ನಿಹಾಲ್​ ಹುಸೇನ್​
Follow us
ರಾಚಪ್ಪಾಜಿ ನಾಯ್ಕ್
| Updated By: ವಿವೇಕ ಬಿರಾದಾರ

Updated on: Nov 17, 2024 | 2:37 PM

ಬೆಂಗಳೂರು, ನವೆಂಬರ್​ 17: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಬೆಂಗಳೂರಿನ (Bengaluru) ಮಡಿವಾಳ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿದೆ. ನಿಹಾಲ್ ಹುಸೇನ್ ಅತ್ಯಾಚಾರ ಎಸಗಿದ ಆರೋಪಿ. ಇದೇ ವರ್ಷ ಮಾರ್ಚ್​ನಲ್ಲಿ ಯುವತಿಗೆ ನಿಹಾಲ್​ ಹುಸೇನ್​ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದಾನೆ.​ ಬಳಿಕ, ನಿಹಾಲ್​ ಹುಸೇನ್​ ಇಬ್ಬರೂ ಅನ್ಯೋನ್ಯವಾಗಿ ಸುತ್ತಾಡಲು ಆರಂಭಿಸಿದ್ದಾರೆ. ಒಂದು ದಿನ, ಆರೋಪಿ ನಿಹಾಲ್​ ಹುಸೇನ್​ ಪಾರ್ಟಿಗೆಂದು ಹೋಟೆಲ್​ವೊಂದಕ್ಕೆ ಯುವತಿಯನ್ನು ಕರೆಸಿಕೊಂಡಿದ್ದಾನೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.

ಬಳಿಕ, ಜ್ಯೂಸ್​ನಲ್ಲಿ ಮದ್ಯ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ನಂತರ, ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಗರ್ಭವತಿಯಾದ ವಿಚಾರ ತಿಳಿಯುತ್ತಿದ್ದಂತೆ ನಿಹಾಲ್​ ಹುಸೇನ್​​ ಗರ್ಭಪಾತ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ನಂತರ, ಯುವತಿ ಮದುವೆ ಆಗುವಂತೆ ನಿಹಾಲ್​ ಹುಸೇನ್​ಗೆ ಹೇಳಿದ್ದಾಳೆ. ಆದರೆ, ಇದಕ್ಕೆ ಒಪ್ಪದ ನಿಹಾಲ್​ ಹುಸೇನ್​ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಮದ್ವೆಯಾಗುವಂತೆ ಮಾವನ ಕಿರುಕುಳಕ್ಕೆ ಬೇಸತ್ತು ದುರಂತ ಅಂತ್ಯಕಂಡ ಅಪ್ರಾಪ್ತೆ

ಯುವತಿ ಹಳೇ ಕೇಸ್​ ಓಪನ್​

ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಾಗ, ಮತ್ತೊಂದು ವಿಚಾರ ಬಹಿರಂಗವಾಗಿದೆ. ಯುವತಿ ಇದೇ ರೀತಿ ಮತ್ತೊಬ್ಬ ಯುವಕ ವಿರುದ್ಧ 2023ರಲ್ಲಿ ದೂರು ನೀಡಿದ್ದಳು ಎಂಬ ಮಾಹಿತಿ ತಿಳಿದಿದೆ.

ಇಲ್ಲಿಯೂ ಕೂಡ ಯುವತಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಚಾರ ಎಸಗಲಾಗಿದೆ ಎಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸದ್ಯ ಪೊಲೀಸರು ಎಲ್ಲ ಆಯಾಮಗಳಲ್ಲೂ ತನೆಖೆ ನಡೆಸುತ್ತಿದ್ದಾರೆ.

ಇತ್ತೀಚಿಗೆ ದಾವಣೆಗೆರೆಯಲ್ಲಿ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಬರೊಬ್ಬರಿ 62 ಲಕ್ಷ ರೂ. ಪಡೆದು ವಂಚಿಸಿದ್ದ ಪ್ರಕರಣ ಬಯಲಾಗಿತ್ತು. ಯುವಕ ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ, ನಂತರ ವಿವಾಹವಾಗುತ್ತೇನೆ” ಎಂದು ಹೇಳುತ್ತಿದ್ದನು. ಅಲ್ಲದೇ, “ಸರ್ಕಾರಿ ಕೆಲಸ ಪಡೆಯಲು ಇಷ್ಟು ಹಣ ನೀಡಿ” ಎಂದು ಹೇಳುತ್ತಿದ್ದನು.

ಈತನ ಮಾತು ನಂಬಿದ ಯುವತಿಯರು ಹಣ ಆತನ ಅಕೌಂಟ್​ಗೆ ಹಾಕುತ್ತಿದ್ದರು. ಬಳಿಕ, ಆರೋಪಿ ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದನು. ಆರೋಪಿ ಈ ರೀತಿ ಅನೇಕ ಯುವತಿಯರಿಗೆ ವಂಚಿಸಿದ್ದಾನೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ