AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assam Assembly polls: ಕೇವಲ 90 ವೋಟರ್​ಗಳಿರುವ ಮತಗಟ್ಟೆಯಲ್ಲಿ 181 ವೋಟ್​ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್

ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು.

Assam Assembly polls: ಕೇವಲ 90 ವೋಟರ್​ಗಳಿರುವ ಮತಗಟ್ಟೆಯಲ್ಲಿ 181 ವೋಟ್​ಗಳ ಚಲಾವಣೆ! 6 ಅಧಿಕಾರಿಗಳು ಸಸ್ಪೆಂಡ್
ಪ್ರಾತಿನಿಧಿಕ ಚಿತ್ರ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Apr 06, 2021 | 12:01 AM

ಗುವಹಾಟಿ: ಆಸ್ಸಾಮಿನ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಕೇವಲ 90 ನೋಂದಾಯಿತ ಮತರದಾರರಿದ್ದರೂ 181 ವೋಟುಗಳು ಚಲಾವಣೆಯಾಗಿರುವ ಹಿನ್ನೆಲೆಯಲ್ಲಿ 6 ಅಧಿಕಾರಿಗಳನ್ನು ಚುನಾವಣಾ ಆಯೋಗವು ಸಸ್ಪೆಂಡ್ ಮಾಡಿದೆ. ಏಪ್ರಿಲ್ 1 ರಂದು ಅಸ್ಸಾಂ ವಿಧಾನಸಭೆಗೆ ಎರಡನೇ ಹಂತದ ಚುನಾವಣೆ ನಡೆದ ಸದರಿ ಜಿಲ್ಲೆಯ ಹಫ್ಲಾಂಗ್ ಹೆಸರಿನ ಮತಕ್ಷೇತ್ರದಲ್ಲಿ ಈ ಅಕ್ರಮ ಜರುಗಿದೆ. 2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬೀರ್ ಭದ್ರ ಹಗ್ಜೇರ್ ಅವರು ಗೆಲುವು ದಾಖಲಿಸಿದ್ದ ಕ್ಷೇತ್ರದಲ್ಲಿ ಶೇಕಡಾ 74ರಷ್ಟು ಮತದಾನವಾಗಿದೆ. ಮೂಲಗಳ ಪ್ರಕಾರ ಮುಖ್ಯ ಮತಗಟ್ಟೆಯೊಂದಕ್ಕೆ ಪೂರಕ ಮತಗಟ್ಟೆಯಾಗಿದ್ದ ಹಫ್ಲಾಂಗ್​ನಲ್ಲಿ ಆಯೋಗವು ಮರು-ಮತದಾನ ನಡೆಸುವ ಆದೇಶವನ್ನು ಜಾರಿಗೊಳಿಸುವ ನಿರೀಕ್ಷೆಯಿದೆ.

ಆಯೋಗದ ಎದುರು ಹೇಳಿಕೆಗಳನ್ನು ದಾಖಲಿಸಿರುವ ಪ್ರಿಸೈಡಿಂಗ್ ಮತ್ತು ಪ್ರಥಮ ಪೊಲಿಂಗ್ ಆಫೀಸರ್​ಗಳು ಮುಖ್ಯ ಮತಗಟ್ಟೆಯಲ್ಲಿ ನೋಂದಾಯಿತರಾಗಿದ್ದ ಮತದಾರರಿಗೆ ಪೂರಕ ಮತಗಟ್ಟೆಯಲ್ಲಿ ಮತ ಚಲಾಯಿಸುವ ಅವಕಾಶ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ, ಎಂದು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರೆಸ್​ ನೋಟ್​ನಲ್ಲಿ ಹೇಳಲಾಗಿದೆ.

ಪಿಟಿಐ ಮೂಲಗಳ ಪ್ರಕಾರ, ಸಿಖೋಸೀಮ್ ಲಂಘುಮ್ (ಸೆಕ್ಟರ್ ಅಧಿಕಾರಿ), ಪ್ರಹ್ಲಾದ್ ರಾಯ್ (ಪ್ರಿಸೈಡಿಂಗ್ ಆಫೀಸರ್), ಪರಮೇಶ್ವರ ಚರಂಗ್ಸಾ (ಪ್ರಥಮ ಪೋಲಿಂಗ್ ಅಧಿಕಾರಿ), ಸ್ವರಾಜ್ ಕಾಂತ ದಾಸ್ (ದ್ವಿತೀಯ ಪೋಲಿಂಗ್ ಅಧಿಕಾರಿ) ಮತ್ತು ಲಾಲ್ಜಮ್ಲೊ ಥೀಕ್ (ತೃತೀಯ ಪೋಲಿಂಗ್ ಅಧಿಕಾರಿ) ಅವರನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ತತ್​ಕ್ಷಣದಿಂದಲೇ ಸಸ್ಪೆಂಡ್​ ಮಾಡಲಾಗಿದೆ, ಎಂದು ಪ್ರಕಟಣೆ ತಿಳಿಸುತ್ತದೆ.

ಆಯೋಗವು ಅಸ್ಸಾಂನಲ್ಲಿ ಈ ವರ್ಷ ಮರು-ಮತದಾನ ಘೋಷಿಸಿರುವ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ರತಾಬರಿ ಕ್ಷೇತ್ರದಲ್ಲಿ ಹೊಸ ಸುತ್ತಿನ ಮತದಾನ ನಡೆಸುವಂತೆ ಆದೇಶಿಸಲಾಗಿತ್ತು. ಬಿಜೆಪಿ ಪಕ್ಷದ ಅಭ್ಯರ್ಥಿಯೋಬ್ಬರ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರಗಳನ್ನು (ಈವಿಎಮ್) ಸಾಗಿಸಿದ್ದು ವಿವಾದ ಸೃಷ್ಟಿಸಿದ ನಂತರ ಆಯೋಗ ಆದೇಶ ಹೊರಡಿಸಿ ನಾಲ್ವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿತ್ತು.

ಸದರಿ ಘಟನೆಯು ಆ ಮತಕ್ಷೇತ್ರವಿರುವ ಕರೀಮ್​ಗಂಜ್ ಜಿಲ್ಲೆಯಲ್ಲಿ ವಿವಾದ ಜೊತೆಗೆ ಗಲಭೆಯನ್ನೂ ಸೃಷ್ಟಿಸಿತ್ತು. ಆ ಕಾರು ಹತ್ತಿರದ ಪತ್ಥರ್​ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದು ಪಾಲ್ ಅವರ ಪತ್ನಿಗೆ ಸೇರಿದ್ದಾಗಿತ್ತು.

ಘಟನೆ ಬಗ್ಗೆ ವಿವರವನ್ನು ಕೇಳಿದಾಗ ಚುನಾವಣಾ ಆಯೋಗವು, ‘ಬಿಯು, ಸಿಯು ಮತ್ತು ವಿವಿಪ್ಯಾಟ್​ ಮುಂತಾದವುಗಳನ್ನೊಳಗೊಂಡಿದ್ದ ಈವಿಎಮ್​ನ ಸೀಲ್ ಹಾಗೆಯೇ ಇತ್ತು ಮತ್ತು ಯಂತ್ರಕ್ಕೆ ಯಾವುದೇ ರೀತಿಯ ಧಕ್ಕೆಯಾಗಿರಲಿಲ್ಲ,’ ಎಂದು ಹೇಳಿತ್ತು.

ವಿರೋಧ ಪಕ್ಷಗಳು ಇದನ್ನು ಅಸ್ತ್ರವನ್ನಾಗಿ ಬಳಸಿ ಬಿಜೆಪಿಯು ಈವಿಎಮ್​ಗಳನ್ನು ವಶಪಡಿಸಿಕೊಳ್ಳುವ ಕೆಲಸದಲ್ಲಿ ತೊಡಗಿದೆ ಎಂದು ಹೇಳಿದ್ದವು. ಕಾಂಗ್ರೆಸ್ ಪಕ್ಷದ ಗೌರವ್ ಗೊಗೊಯಿ ತಮ್ಮ ಟ್ವೀಟ್​ನಲ್ಲಿ, ‘ಕೇವಲ ಹೀಗೆ ಮಾಡಿ ಮಾತ್ರ ಬಿಜೆಪಿ ಅಸ್ಸಾಂನಲ್ಲಿ ಗೆಲುವು ಸಾಧಿಸಬಲ್ಲದು,’ ಎಂದು ಹೇಳಿದ್ದರು.

ಅಸ್ಸಾಂ ವಿಧಾನಸಭೆಗೆ ಮೂರು ಹಂತದ ಚುನಾವಣೆಗಳು ನಡೆಯುತ್ತಿದ್ದು ಮೊದಲ ಹಂತ ಮಾರ್ಚ್​ 27 ರಂದು ನಡೆದು ಎರಡನೇ ಹಂತ ಏಪ್ರಿಲ್ 1 ರಂದು ನಡೆಯಿತು. ಮೂರನೇ ಹಾಗೂ ಅಂತಿಮ ಹಂತದ ಮತದಾನವು ನಾಳೆ ಅಂದರೆ ಮಂಗಳವಾರ ನಡೆಯಲಿದೆ

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಬೊಡೊಲ್ಯಾಂಡ್​ ಪೀಪಲ್ಸ್ ಫ್ರಂಟನ್ನು ಒಳಗೊಂಡ ಕಾಂಗ್ರೆಸ್​ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟವು (ಮಹಾಜೋಟ್) ಅದನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿವೆ.

ಚುನಾವಣೆಯ ಫಲಿತಾಂಶಗಳು ಮೇ 2ರಂದು ಪ್ರಕಟವಾಗಲಿವೆ.

ಇದನ್ನೂ ಓದಿ: Assam Assembly Elections 2021: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ; ಅಸ್ಸಾಂನ ರತಾಬಾರಿಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ

ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು
ವಿಮಾನ ಅಪಘಾತದ ವೇಳೆ ಹಾಸ್ಟೆಲ್​ನಿಂದ ಹಾರಿದ ವೈದ್ಯಕೀಯ ವಿದ್ಯಾರ್ಥಿಗಳು
ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ
ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ಹುಲಿ: ಅಪರೂಪದ ದೃಶ್ಯ ಇಲ್ಲಿದೆ
ಈಡಿ ಸಮನ್ಸ್ ಮತ್ತು ನೋಟೀಸುಗಳು ನಮಗೆ ಹೊಸದೇನಲ್ಲ: ಶಿವಕುಮಾರ್
ಈಡಿ ಸಮನ್ಸ್ ಮತ್ತು ನೋಟೀಸುಗಳು ನಮಗೆ ಹೊಸದೇನಲ್ಲ: ಶಿವಕುಮಾರ್
ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಬೇರೆ ಘಟನೆ ಉಲ್ಲೇಖಿಸಿ ಸಿಎಂ ಹೊಣೆಗಾರಿಕೆ ತಪ್ಪಿಸಿಕೊಳ್ಳುತ್ತಿದ್ದಾರೆ: ರವಿ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಬೇಡವೆಂದರೂ ಸಿಎಂ ಒತ್ತಾಯಿಸಿದರು: ಅಶೋಕ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ನಿನ್ನೆ ಗುಡ್ಡ ಕುಸಿದರೂ ಸ್ವಲ್ಪದರಲ್ಲೇ ಅಪಾಯದಿಂದ ಪಾರಾದ ಜನ
ಅಪ್ಪನಿಗೇ ಆವಾಜ್ ಹಾಕಿದ ನಯನತಾರಾ ಮಗ; ಇಲ್ಲಿದೆ ಫನ್ನಿ ವಿಡಿಯೋ
ಅಪ್ಪನಿಗೇ ಆವಾಜ್ ಹಾಕಿದ ನಯನತಾರಾ ಮಗ; ಇಲ್ಲಿದೆ ಫನ್ನಿ ವಿಡಿಯೋ
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್
ಮಾಧ್ಯಮಗಳ ಜೊತೆ ಮಾತಾಡುವ ಮೊದಲು ಸೈಕ್ಲಿಂಗ್ ಮಾಡಿದ ಶಿವಕುಮಾರ್