AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತದಾನ ಮಾಡುವವರಿಗೆ ಕೆಲವು ಸಲಹೆಗಳು

Lok Sabha Election 2024: ಕರ್ನಾಟಕ ಲೋಕಸಭಾ ಚುನಾವಣೆ ಏಪ್ರಿಲ್​ 26ರಂದು ನಡೆಯಲಿದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿರುವವರಿಗೆ ಇರುವ ಆತಂಕವನ್ನು ದೂರ ಮಾಡಲು ಸಣ್ಣ ಪ್ರಯತ್ನ. ಅಂಜಿಕೆ ಇಲ್ಲದೆ ನೀವು ಮತದಾನ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಕರ್ನಾಟಕ ಲೋಕಸಭಾ ಚುನಾವಣೆ: ಮೊದಲ ಬಾರಿಗೆ ಮತದಾನ ಮಾಡುವವರಿಗೆ ಕೆಲವು ಸಲಹೆಗಳು
ಮತದಾರರು
ನಯನಾ ರಾಜೀವ್
|

Updated on: Apr 25, 2024 | 10:00 AM

Share

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು, ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಪ್ರಿಲ್​ 26ರಂದು ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಮೊದಲ ಬಾರಿಗೆ ಮತದಾನ ಮಾಡುವವರು ತಮ್ಮ ಮತಗಟ್ಟೆ ಯಾವುದು ಎಂದು ತಿಳಿಯವುದು ಹೇಗೆ ಹಾಗೂ ಎಪಿಕ್ ನಂಬರ್​ ಮೂಲಕ ವೋಟರ್​ ಐಡಿ ಹುಡುಕುವುದು ಹೇಗೆ ಎಂಬುದರ ಕುರಿತು ನಾವು ಮಾಹಿತಿ ನೀಡಲಿದ್ದೇವೆ. ಮೊದಲನೆಯದಾಗಿ ತಿಳಿದುಕೊಳ್ಳಬೇಕಾದ ವಿಷೆಯವೇನೆಂದರೆ ಮತದಾರರಾಗಲು ಏನು ಅರ್ಹತೆ ಇರಬೇಕು. -ಭಾರತೀಯ ಪ್ರಜೆಯಾಗಿರಬೇಕು -ಜನವರಿ 1ಕ್ಕೆ 18 ವರ್ಷಗಳನ್ನು ಪೂರೈಸಿರಬೇಕು -ಮತಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು -ಅನೂರ್ಜಿತಗೊಂಡಿರಬಾರದು

ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಯಾರಿಗೆ ಅರ್ಹತೆ ಇಲ್ಲ -ಭಾರತೀಯ ಪ್ರಜೆಯಲ್ಲದವರು -ಮಾನಸಿಕ ಸ್ಥಿಮಿತ ಇಲ್ಲದವರು -ಚುನಾವಣೆ ಸಂಬಂಧಿತ ನಿಗಧಿತ ಭ್ರಷ್ಟಾಚಾರದಲ್ಲಿ ತೊಡಗಿ ಮತದಾನ ಪ್ರಕ್ರಿಯೆಯಿಂದ ನಿಷೇಧಕ್ಕೆ ಒಳಗಾದವರು.

ಮುಂದೆ ಬರುವಂಥದ್ದೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮತಕ್ಷೇತ್ರದ ನೋಂದಣಿ ಅಧಿಕಾರಿ ಅಥವಾ ಮತಗಟ್ಟೆ ಅಧಿಕಾರಿಯಿಂದ ನಮೂನೆ 6ನ್ನು ಪಡೆಯಿರಿ. ನಮೂನೆ ಭರ್ತಿ ಮಾಡಿ ಇಂಟರ್ನೆಟ್​ನಿಂದ ನಮೂನೆ 6ನ್ನು ಡೌನ್​ಲೋಡ್ ಮಾಡಿ ಭರ್ತಿ ಮಾಡಿ ಮತಗಟ್ಟೆ ಅಧಿಕಾರಿಗಳು ಅಥವಾ www.nsvp.in /www.ceokarnataka.nic.inನಲ್ಲಿ ದಾಖಲೆಗಳ ಪ್ರತಿಯನ್ನು ಅಪ್​ಲೋಡ್​ ಮಾಡಿ. ಅಥವಾ ಅಂಚೆ ಮೂಲಕ ಕಳುಹಿಸಿ. ನಮೂನೆ 6ಕ್ಕೆ ಅಗತ್ಯವಿರುವ ದಾಖಲೆಗಳು ಪಾಸ್​ಪೋರ್ಟ್​ ಸೈಜ್ ಕಲರ್​ ಫೋಟೊ ವಯಸ್ಸು ಮತ್ತು ವಿಳಾಸದ ದೃಢೀಕರಣ 18-21 ವಯೋಮಾನದವರಿಗೆ ವಯಸ್ಸು ದೃಢೀಕರಣ ಪ್ರತಿ

ಮತ್ತಷ್ಟು ಓದಿ: Lok Sabha Elections 2024: ಮತದಾನ ಕೇಂದ್ರ ತಿಳಿಯಲು ಮೊಬೈಲ್​ ಆ್ಯಪ್​ ಸಿದ್ಧಪಡಿಸಿದ ಬಿಬಿಎಂಪಿ

ಎಪಿಕ್ ಮತದಾರರ ಫೋಟೊ ಗುರುತಿನ ಚೀಟಿ ಮತದಾರ ನೀಡಿರುವ ವಿಳಾಸಕ್ಕೆ ಮತಗಟ್ಟೆ ಅಧಿಕಾರಿ ಭೇಟಿ ನೀಡುತ್ತಾರೆ ನಮೂನೆ ಸರಿಯಾಗಿದ್ದು, ಸ್ವೀಕೃತವಾದಲ್ಲಿ ಮತಗಟ್ಟೆ ಅಧಿಕಾರಿ ಎಪಿಕ್ ಕಾರ್ಡನ್ನು ನೀಡುತ್ತಾರೆ ಅಥವಾ ಕಚೇರಿಗೆ ಬರುವಂತೆ ಸೂಚಿಸುತ್ತಾರೆ.

ಮತದಾನ ಮಾಡುವುದು ಹೇಗೆ? ಮುಖ್ಯ ಚುನಾವಣಾಧಿಕಾರಿಗಳ ವೆಬ್​ಸೈಟ್​ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಬೇಕು. ಮತದಾನದ ದಿನ ಸಾರ್ವಜನಿಕ ರಜೆ ಘೋಷಿಸಲಾಗುತ್ತದೆ ಚುನಾವಣಾಧಿಕಾರಿಗಳ ಬಳಿಯೂ ಮತದಾರರ ಪಟ್ಟಿ ಲಭ್ಯವಿರುತ್ತದೆ. ಮೊಬೈಲ್​ ಫೋನ್ ಮತ್ತಿತರೆ ವಸ್ತುಗಳಿಗೆ ಮತಗಟ್ಟೆ ಕೇಂದ್ರಕ್ಕೆ ನಿರ್ಬಂಧವಿಧಿಸಿದೆ. ಸರತಿ ಸಾಲಿನಲ್ಲಿ ನಿಂತು ಶಾಯಿ ಹಾಕಿಸಿಕೊಂಡು ಮತ ಚಲಾಯಿಸಬೇಕು.

ಮತದಾರರು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಮತದಾನ ದಿನಕ್ಕೆ ಮುನ್ನವೇ ನಿಮ್ಮ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ವೆಬ್​​ಸೈಟ್​ನಲ್ಲಿ ಲಭ್ಯವಿರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ದೃಢಪಡಿಸಿಕೊಳ್ಳಿ. ಮತದಾರರ ಫೋಟೊ ಗುರುತಿನ ಚೀಟಿಯೊಂದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಕಡ್ಡಾಯ. ಚುನಾವಣೆ ಸಂದರ್ಭದಲ್ಲಿ ನೋಂದಣಿ ಹಾಗೂ ಮತದಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಹಾಯವಾಣಿ 1950ಕ್ಕೆ ಕರೆ ಮಾಡಿ ಪಡೆಯಬಹುದು. EPIC ಕಾರ್ಡ್ ಸುರಕ್ಷಿತ ಮತ್ತು ಪೋರ್ಟಬಲ್ ಡಿಜಿಟಲ್ ಡಾಕ್ಯುಮೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ವೋಟರ್ ಸ್ಲಿಪ್ ಮತ್ತು EPIC ಕಾರ್ಡ್ ಜೊತೆಗೆ, ಆಧಾರ್ ಅಥವಾ ಡ್ರೈವಿಂಗ್ ಲೈಸೆನ್ಸ್‌ನಂತಹ ಹೆಚ್ಚುವರಿ ಗುರುತಿನ ಚೀಟಿಯನ್ನು ಒಯ್ಯಿರಿ.

ಒಂದಕ್ಕಿಂತ ಹೆಚ್ಚಿನ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶವಿಲ್ಲ, ಹಾಗಾಗಿ ಹೊಸ ವಿಳಾಸದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಮುನ್ನ ಹಳೆಯ ಮತಕ್ಷೇತ್ರದ ಪಟ್ಟಿಯಲ್ಲಿ ಹೆಸರನ್ನು ತೆಗೆಸಬೇಕು. ನಿಮ್ಮ ಕ್ಷೇತ್ರದ ಹೆಸರು ಹಾಗೂ ಮಾಹಿತಿಯನ್ನು www.ceokarnataka.kar.nic.in, www.eci.nic.in, www.ecisvee.nic.in ಅಥವಾ www.nsvp.in ನಿಂದ ಪಡೆಯಬಹುದು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು