AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು: ಹಿನ್ನಡೆಗೆ ಕಾರಣಗಳು ಇಲ್ಲಿವೆ ನೋಡಿ

ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಗೆದ್ದ ಕ್ಷೇತ್ರಗಳನ್ನೂ ಬಿಜೆಪಿ ಕಳೆದುಕೊಂಡಿದೆ. ಅದಕ್ಕೆ ಕಾರಣ ಪಂಚರಾಜ್ಯಗಳು. ಬಿಜೆಪಿಗೆ ಹಿನ್ನಡೆ ಆಗಿದ್ದು ಎಲ್ಲಿ? ಯಾವ್ಯಾವ ಕಾರಣಗಳಿಂದ ಬಿಜೆಪಿಗೆ ಹಿನ್ನೆಡೆ ಆಯ್ತು ಎಂಬ ವಿವರ ಇಲ್ಲಿದೆ.

ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು: ಹಿನ್ನಡೆಗೆ ಕಾರಣಗಳು ಇಲ್ಲಿವೆ ನೋಡಿ
ಪಂಚರಾಜ್ಯಗಳಿಂದ ಬಿಜೆಪಿಯ ‘400 ಪಾರ್​’ ಕನಸು ನುಚ್ಚುನೂರು
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma|

Updated on: Jun 05, 2024 | 7:04 AM

Share

ಬೆಂಗಳೂರು, ಜೂನ್ 5: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಪ್ರಧಾನಿ ನರೇಂದ್ರ ಮೋದಿಯ (Narendra Modi) ಹವಾ, ಮಾತಿನ ಪ್ರಭಾವವೂ ಹೆಚ್ಚು ವರ್ಕ್​ಔಟ್ ಆದಂತಿಲ್ಲ. ಹೋದಲ್ಲಿ ಬಂದಲ್ಲಿ ಮೋದಿ ‘ಚಾರ್​ ಸೋ ಪಾರ್’ ಎನ್ನುತ್ತಿದ್ದರೂ ಎನ್​​​ಡಿಎ (NDA) ಮೈತ್ರಿಕೂಟ ಈಗ 300ರ ಗಡಿಯಲ್ಲೇ ನಿಲ್ಲುವಂತಾಗಿದೆ. ಇನ್ನು ತನ್ನ ಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರಿಟ್ಟ ಕಾಂಗ್ರೆಸ್, ಇಡೀ ಇಂಡಿಯಾವನ್ನೇ ಗೆಲ್ಲುವ ಉತ್ಸಾಹದಲ್ಲಿ ಬಿಜೆಪಿಯ ಬೃಹತ್ ಹಿನ್ನಡೆಗೆ ಕಾರಣವಾಗಿದೆ.

ಈ ಹಿಂದೆ ಗೆದ್ದ ಕ್ಷೇತ್ರಗಳನ್ನೂ ಬಿಜೆಪಿ ಕಳೆದುಕೊಂಡಿದೆ. 2019ರ ಚುನಾವಣೆಯಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಮುನ್ನೂರರ ಗಡಿಯಲ್ಲೇ ಗಿರ್ಕಿ ಹೊಡೆದಿದೆ. ಬಿಜೆಪಿ ಭವಿಷ್ಯ ನಿರ್ಧರಿಸಲಿದ್ದ 5 ರಾಜ್ಯಗಳಲ್ಲಿ ಹಿನ್ನಡೆಯಾಗಿದೆ. ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ ರಾಜ್ಯದಲ್ಲಿ 9 ಸ್ಥಾನಗಳನ್ನು ಕಳೆದುಕೊಂಡಿದ್ದೇ ಬಿಜೆಪಿ ಹಿನ್ನಡೆಗೆ ಮುಖ್ಯ ಕಾರಣ.

‘ಉತ್ತರ’ದ ಫಲಿತಾಂಶದಿಂದ ಬಿಜೆಪಿ ಆಘಾತ

ಉತ್ತರ ಪ್ರದೇಶದಲ್ಲಿ ಮತದಾರರು ಕೊಟ್ಟ ಫಲಿತಾಂಶವೇ ಬಿಜೆಪಿ ಪಾತಾಳಕ್ಕೆ ಕುಸಿಯುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಎಸ್​​ಪಿ ಮತ ಎಸ್​​ಪಿ & ಕಾಂಗ್ರೆಸ್​ಗೆ ಶಿಫ್ಟ್ ಆಗಿದ್ದು, ಸಂವಿಧಾನ ಬದಲಾವಣೆ ಹೇಳಿಕೆಯೇ ಬಿಜೆಪಿ ಹಿನ್ನೆಡೆಗೆ ಕಾರಣವಾದರೆ, ಅಲ್ಪಸಂಖ್ಯಾತ ಮತಗಳು ಇಂಡಿಯಾ ಒಕ್ಕೂಟದ ತೆಕ್ಕೆಗೆ ಹೋಗಿವೆ. ಬಿಎಸ್​​​ಪಿಗೆ ಹೋಗುತ್ತಿದ್ದ ಮುಸ್ಲಿಂ ಮತಗಳು ಕಾಂಗ್ರೆಸ್​, ಎಸ್​​ಪಿಯತ್ತ ವಾಲಿವೆ. ಇನ್ನು ಉತ್ತರ ಪ್ರದೇಶದಲ್ಲಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನಿರುದ್ಯೋಗದಿಂದ ಯುವಕರು ಹೈರಾಣಾಗಿದ್ದರು. ಆದರೆ, ಹೊಸಬರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಗೊಂದಲ ಸೃಷ್ಟಿಸಿತ್ತು. ಠಾಕೂರ್ ಮತ್ತು ಬಾಹ್ಮಣರ ಮಧ್ಯೆ ಇದ್ದ ಕೋಲ್ಡ್​ವಾರ್​​​ನಿಂದಾಗಿ ಬ್ರಾಹ್ಮಣ ಮತಗಳು ಎಸ್​ಪಿಗೆ ಶಿಫ್ಟ್​ ಆಗಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಈ ಬಾರಿ ಅಖಿಲೇಶ್, ರಾಹುಲ್ ಜೋಡಿ ಪ್ರಚಾರ ವರ್ಕೌಟ್ ಆಗಿದೆ.

ಶಿವಸೇನೆ, ಎನ್​ಸಿಪಿ ಇಬ್ಭಾಗದ ಅಪಕೀರ್ತಿ; ಬಿಜೆಪಿಗೆ ‘ಮಹಾ’ ಮುಳ್ಳು

ಕಳೆದ ಬಾರಿ ಮಹಾರಾಷ್ಟ್ರದಲ್ಲಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕಾಂಗ್ರೆಸ್, ಈ ಬಾರಿ 11 ಸ್ಥಾನ ಗೆಲ್ಲುವ ಮೂಲಕ ಹೊಸ ಅಲೆ ಸೃಷ್ಟಿಸಿದೆ. ಶಿವಸೇನೆ ಮತ್ತು ಎನ್​ಸಿಪಿ ಇಬ್ಭಾಗ ಮಾಡಿದ ಅಪಕೀರ್ತಿಯೇ ಬಿಜೆಪಿಗೆ ಮುಳ್ಳಾಗಿದೆ. ಜನರ ಅನುಕಂಪ ಗಿಟ್ಟಿಸಿದ್ದ ಉದ್ಧವ್​ ಠಾಕ್ರೆ & ಶರದ್ ಪವಾರ್, ಶಿವಸೇನೆ, ಎನ್​ಸಿಪಿ ನಾಯಕರ ಮೇಲೆ ಕೇಂದ್ರೀಯ ಸಂಸ್ಥೆಗಳ ಬಳಕೆ ಮಾಡಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ದೀದಿ ಪ್ರಚಾರದ ಮುಂದೆ ಮೋದಿಯ ಮ್ಯಾರಥಾನ್ ಪ್ರಚಾರಗಳೂ ವರ್ಕೌಟ್ ಆಗಿಲ್ಲ.

ಇದನ್ನೂ ಓದಿ: ವಾರಾಣಸಿಯಲ್ಲಿ ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು

ಈ ಬಾರಿಯೂ ಮೋದಿ ಹವಾ, ಮಾತಿನ ಪ್ರಭಾವವೇ ಚಮತ್ಕಾರ ಮಾಡುತ್ತೆ ಅಂದಿಕೊಂಡಿದ್ದ ಬಿಜೆಪಿಗೆ ಈ ಬಾರಿಯ ಫಲಿತಾಂಶ ದೊಡ್ಡ ಹೊಡೆತ ಕೊಟ್ಟಿದ್ದಂತೂ ಸುಳ್ಳಲ್ಲ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ತಾವು ಮಾಡಿದ ಶಪಥ ರಿವೀಲ್ ಮಾಡಿದ ವೀರಕಪು
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಫಾಲ್ಸ್, ವಿಡಿಯೋ ನೋಡಿ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ತಿಮರೋಡಿಯನ್ನು ಬಂಧಿಸುವ ಮುನ್ನ ಪೊಲೀಸ್ ಮತ್ತು ವಕೀಲರ ನಡುವೆ ವಾಗ್ವಾದ
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ಮಹೇಶ್ ತಿಮರೋಡಿ ಮನೇಲಿ 4 ದಿನ ಇದ್ದೆ, ಊಟ ಮಾತ್ರ ಹಾಕಿದ್ದು: ಸುಜಾತ ಭಟ್
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
ವೈಷ್ಣೋದೇವಿ ಯಾತ್ರಿಕರ ಕರೆದೊಯ್ಯುತ್ತಿದ್ದ ಬಸ್ ಅಪಘಾತ, ಓರ್ವ ಸಾವು
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ರೀಲ್ಸ್ ಮಾಡುವಾಗ ಟ್ರ್ಯಾಕ್ಟರ್ ಪಲ್ಟಿ, ಯುವಕ ಸಾವು: ವಿಡಿಯೋ ವೈರಲ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
ಮ್ಯಾಟ್ ಹೆನ್ರಿ ಮಾರಕ ದಾಳಿ: 20 ಎಸೆತಗಳಲ್ಲಿ 16 ಡಾಟ್ ಬಾಲ್, 2 ವಿಕೆಟ್
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?
Daily Devotional: ಅನಾರೋಗ್ಯದಿಂದ ಪಾರಾಗಲು ಏನು ಮಾಡಬೇಕು ಗೊತ್ತಾ?