Barrelakka Shireesha: ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿರುವ ಬರ್ರೆಲಕ್ಕ; ಕೊಲ್ಲಾಪುರ ಕ್ಷೇತ್ರದಲ್ಲಿ ಎಮ್ಮೆ ಕಾಯುವ ಹುಡುಗಿ ಲೀಡಿಂಗ್

Telangana Assembly Elections 2023: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಶಿರೀಷಾ ಅಕಾ ಬರ್ರೆಲಕ್ಕ ಹೆಸರು ಬಹಳ ವೈರಲ್ ಆಗುತ್ತಿದೆ. ಕೊಲ್ಲಾಪುರ ಕ್ಷೇತ್ರದಲ್ಲಿ ಈಕೆ ಲೀಡಿಂಗ್ ಪಡೆದಿದ್ದಾಳೆ. ಪದವಿ ಓದಿ ಕೆಲಸ ಸಿಗದೇ ನಾಲ್ಕು ಎಮ್ಮೆಗಳನ್ನು ತಂದು ಸಾಕುತ್ತಿದ್ದೇನೆಂದು ಈಕೆ ವಿಡಿಯೋ ಮಾಡಿ ಬಿಟ್ಟಾಗಲೇ ವೈರಲ್ ಆಗಿದ್ದವಳು ಈಕೆ. ತೆಲಂಗಾಣದ ಅಸಂಖ್ಯಾತ ನಿರುದ್ಯೋಗಿಗಳಿಗೆ ಬರ್ರೆಲಕ್ಕ ಧ್ವನಿಯಾಗಿದ್ದಾಳೆ. ಚುನಾವಣೆಯಲ್ಲಿ ಈಕೆಗೆ ಹಲವು ಸಾಮಾಜಿಕ ಕಾರ್ಯಕರ್ತರು, ಗಣ್ಯರು ಬೆಂಬಲ ನೀಡಿದ್ದಾರೆ.

Barrelakka Shireesha: ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿರುವ ಬರ್ರೆಲಕ್ಕ; ಕೊಲ್ಲಾಪುರ ಕ್ಷೇತ್ರದಲ್ಲಿ ಎಮ್ಮೆ ಕಾಯುವ ಹುಡುಗಿ ಲೀಡಿಂಗ್
ಶಿರೀಷಾ ಅಕಾ ಬರ್ರೆಲಕ್ಕ
Follow us
|

Updated on:Dec 03, 2023 | 12:30 PM

ಹೈದರಾಬಾದ್, ಡಿಸೆಂಬರ್ 3: ಈ ಬಾರಿಯ ತೆಲಂಗಾಣ ಚುನಾವಣೆ ಬಗ್ಗೆ ಆಸಕ್ತಿ ಹೊಂದಿದವರಿಗೆ ಬರ್ರೆಲಕ್ಕ ಹೆಸರು ಪರಿಚಿತವಿರಬಹುದು. ಮತದಾನಕ್ಕೂ ಮುನ್ನವೇ ತೆಲಂಗಾಣದಲ್ಲಿ ಸಂಚಲನ ಸೃಷ್ಟಿಸಿದ ಬರೆಲಕ್ಕ ಅಕಾ ಕಾರ್ಣೆ ಶಿರೀಷಾ (Barrelakka Karni Shireesha) ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಕೊಲ್ಲಾಪುರ ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದ್ದಾಳೆ. ಜುಪಲ್ಲಿ ಕೃಷ್ಣರಾವ್ ಮತ್ತು ಶಿರೀಷಾ ಮಧ್ಯೆ ನಿಕಟ ಪೈಪೋಟಿ ನಡೆದಿದೆ. ಒಂದು ಹಂತದಲ್ಲಿ ಬರೆಲಕ್ಕ ಮುನ್ನಡೆಯನ್ನೂ ಪಡೆದಿದ್ದು ಗಮನಾರ್ಹ.

25 ವರ್ಷದ ಶಿರೀಷಾ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಮುಂಚೆಯೇ ರಾಜ್ಯಾದ್ಯಂತ ಖ್ಯಾತರಾಗಿದ್ದವರು, ವೈರಲ್ ಆಗಿದ್ದವರು. ಶಿರೀಷಾ ಅವರ ಒಂದು ಇನ್ಸ್​ಟಾಗ್ರಾಂ ವಿಡಿಯೋ 2021ರಲ್ಲಿ ಬಹಳ ವೈರಲ್ ಆಗಿತ್ತು. ಪದವಿ ಪಡೆದಿದ್ದರೂ ಕೆಲಸ ಸಿಕ್ಕಿಲ್ಲ. ಅಮ್ಮನಿಂದ ಹಣ ಪಡೆದು 4 ಎಮ್ಮೆಗಳನ್ನು ಖರೀದಿಸಿದ್ದೇನೆ ಎಂದು ಈ ಹುಡುಗಿ ಇನ್ಸ್​ಟಾಗ್ರಾಂನಲ್ಲಿ ಒಂದು ವಿಡಿಯೋ ಪೋಸ್ಟ್ ಹಾಕಿದ್ದಳು. ಆಗ ಆ ವಿಡಿಯೋ ದೊಡ್ಡ ವೈರಲ್ ಆಗಿಹೋಗಿತ್ತು. ಆಗಿನಿಂದ ಆಕೆಯ ಹೆಸರು ಬರ್ರೆಲಕ್ಕ ಎಂದೇ ಖ್ಯಾತವಾಗಿದೆ. ಬರ್ರೆಲ ಎಂದರೆ ತೆಲುಗಿನಲ್ಲಿ ಎಮ್ಮೆ ಎಂದರ್ಥ.

ಇದನ್ನೂ ಓದಿ: Telangana Results: ತೆಲಂಗಾಣ ಕಾಂಗ್ರೆಸ್ ಶಾಸಕರ ರಕ್ಷಣೆಗೆ ಹೈದರಾಬಾದ್​​ ತಲುಪಿದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್

ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಶಿರೀಷಾ ಒಂದು ರೀತಿಯಲ್ಲಿ ತೆಲಂಗಾಣದ ನಿರುದ್ಯೋಗಿಗಳ ಧ್ವನಿಯಾಗಿದ್ದಾರೆ. ಹಲವು ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಶಿರೀಷಾ ಬೆನ್ನಿಗೆ ನಿಂತು ಬೆಂಬಲ ಕೊಟ್ಟಿದ್ದಾರೆ. ಆಕೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್​ಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತವೆ. ಈ ಚುನಾವಣೆಯಲ್ಲಿ ಆಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗಲೇ ಇತರ ಪ್ರಬಲ ಅಭ್ಯರ್ಥಿಗಳ ಎದೆ ನಡುಗಿಸಿತ್ತು. ನಾಮಪತ್ರ ವಾಪಸ್ ಪಡೆಯಲು ಸಾಕಷ್ಟು ಒತ್ತಡಗಳು ಆಕೆಗೆ ಬರುತ್ತಿದ್ದವು. ಶಾಲೆಗೆ ಹೋಗುವ ಆಕೆಯ ತಮ್ಮನ ಮೇಲೆ ಹಲ್ಲೆಗೆ ಪ್ರಯತ್ನವೂ ಆಗಿತ್ತು. ಆದರೂ ಅದ್ಯಾವುದಕ್ಕೂ ಜಗ್ಗದೇ ಬರ್ರೆಲಕ್ಕ ಚುನಾವಣಾ ಕಣಕ್ಕದಲ್ಲಿ ಮುಂದುವರಿಯಲು ನಿರ್ಧರಿಸಲು ಧೈರ್ಯ ಮಾಡಿದ್ದು ಶ್ಲಾಘನೀಯ.

ತಮ್ಮ ಕುಟುಂಬಕ್ಕೆ ಬೆದರಿಕೆ ಬಂದಿರುವ ಬಗ್ಗೆ ಈಕೆ ಗದ್ಗದಿತಗೊಂಡು ಮಾತನಾಡಿದ ವಿಡಿಯೋ ಇತ್ತೀಚೆಗೆ ಬಹಳ ವೈರಲ್ ಆಯಿತು. ಈಕೆಗೆ ಜನಬೆಂಬಲ ಇನ್ನಷ್ಟು ಹೆಚ್ಚಿಸಿತ್ತು. ಚುನಾವಣೆಯಲ್ಲಿ ಈಕೆಯನ್ನು ಗೆಲ್ಲಿಸಲು ಸ್ವಯಂಪ್ರೇರಿತವಾಗಿ ಕಾರ್ಯಕರ್ತರ ಪಡೆಯೇ ಸಿದ್ಧವಾಗಿತ್ತು. ಈಕೆ ಹೈಕೋರ್ಟ್ ಮೆಟ್ಟಿಲು ಹತ್ತಿ ರಕ್ಷಣೆ ಪಡೆದರು.

ಇದನ್ನೂ ಓದಿ: ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ರೇವಂತ್​ರೆಡ್ಡಿ ಮನೆಗೆ ಬಿಗಿ ಭದ್ರತೆ

ಕೊಲ್ಲಾಪುರದಲ್ಲಿ ಶಿರೀಷಾ ಮುನ್ನಡೆ ಗಳಿಸುತ್ತಾಳೆ ಎಂದು ಅಂದಾಜು ಮಾಡಿದವರು ಬಹಳ ವಿರಳ. ಹಾಲಿ ಶಾಸಕ ಬಿಆರ್​ಎಸ್​ನ ಬೀರಮ್ ಹರ್ಷವರ್ಧನ್ ರೆಡ್ಡಿ. ಈ ಕ್ಷೇತ್ರದಲ್ಲಿ ಹಿಂದೆ ಐದು ಬಾರಿ ಶಾಸಕರಾಗಿ ಗೆದ್ದವರು ಜುಪಲ್ಲಿ ಕೃಷ್ಣರಾವ್ ಕಾಂಗ್ರೆಸ್​ನವರು. ಈ ಇಬ್ಬರು ಪ್ರಬಲ ಅಭ್ಯರ್ಥಿಗಳಿಗೆ ಪ್ರತಿಸ್ಪರ್ಧಿಯಾದವರು ಬರ್ರೆಲಕ್ಕ.

ಆದರೆ, ಜುಪಲ್ಲಿ ಕೃಷ್ಣರಾವ್ ಗೆಲುವಿನತ್ತ ಮುನ್ನಡೆದಿದ್ದಾರಾದರೂ ಶಿರೀಷಾ ಅಕಾ ಬರ್ರೆಲಕ್ಕ ಒಂದು ಹಂತದಲ್ಲಿ ಮುನ್ನಡೆ ಗಳಿಸಿದ್ದರು ಎಂಬುದೇ ಸೋಜಿಗದ ಸಂಗತಿ. ಈಕೆ ನಾಮಪತ್ರ ಸಲ್ಲಿಸಿದಾಗ ಎದುರಾಳಿಗಳು ಯಾಕೆ ಬೆಚ್ಚಿದ್ದರು ಎಂಬುದನ್ನು ಈಕೆಯ ಪ್ರಬಲ ಪೈಪೋಟಿಯೇ ತೋರಿಸಿಕೊಟ್ಟಿದೆ. ಈಕೆ ಈ ಚುನಾವಣೆಯಲ್ಲಿ ಸೋತರೂ ಕೂಡ ಈಕೆ ಮೂಡಿಸಿದ ಛಾಪು ನಿಜಕ್ಕೂ ಹೊಸ ಇತಿಹಾಸ ಪುಟ ತೆರೆಸಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Sun, 3 December 23

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ