ಉತ್ತರ ಪ್ರದೇಶ: ಕಾಂಗ್ರೆಸ್​​ನ ಎಲ್ಲ ಪ್ರಚಾರ ಕಾರ್ಯಕ್ರಮ ರದ್ದು, ನೋಯ್ಡಾ ಕಾರ್ಯಕ್ರಮ ರದ್ದು ಮಾಡಿದ ಯೋಗಿ ಆದಿತ್ಯನಾಥ

| Updated By: ರಶ್ಮಿ ಕಲ್ಲಕಟ್ಟ

Updated on: Jan 05, 2022 | 2:45 PM

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಗುರುವಾರ ನಡೆಯಲಿರುವ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಉತ್ತರ ಪ್ರದೇಶ: ಕಾಂಗ್ರೆಸ್​​ನ ಎಲ್ಲ ಪ್ರಚಾರ ಕಾರ್ಯಕ್ರಮ ರದ್ದು, ನೋಯ್ಡಾ ಕಾರ್ಯಕ್ರಮ ರದ್ದು ಮಾಡಿದ ಯೋಗಿ ಆದಿತ್ಯನಾಥ
ಪ್ರಾತಿನಿಧಿಕ ಚಿತ್ರ
Follow us on

ಲಖನೌ: ಉತ್ತರ ಪ್ರದೇಶದ (Uttar Pradesh) ಬರೇಲಿ ಜಿಲ್ಲೆಯಲ್ಲಿ ನೂರಾರು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಮಾಸ್ಕ್ ಇಲ್ಲದೆ ಮ್ಯಾರಥಾನ್​​ನಲ್ಲಿ (marathon) ಭಾಗವಹಿಸಿದ್ದು ಮಾತ್ರವಲ್ಲದೆ ಕಾಲ್ತುಳಿತ ಸಂಭವಿಸುವಂತೆ ಮುಗ್ಗರಿಸಿ ಬಿದ್ದ ಘಟನೆಯ ಆಘಾತಕಾರಿ ದೃಶ್ಯಗಳ ನಂತರ ಕಾಂಗ್ರೆಸ್ (Congress) ಬುಧವಾರ ಉತ್ತರ ಪ್ರದೇಶದಲ್ಲಿ ಚುನಾವಣೆ ಸಂಬಂಧಿಸಿದ ಎಲ್ಲಾ ರಾಜಕೀಯ ರ್ಯಾಲಿಗಳು ಮತ್ತು ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಗುರುವಾರ ನಡೆಯಲಿರುವ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿರುವ ಜಿಲ್ಲೆಯಾಗಿದೆ ಗೌತಮ್ ಬುದ್ಧ ನಗರ.  ಕೊವಿಡ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಿರ್ವಹಿಸುವುದು ಕಷ್ಟಕರವಾಗಿಸುವ, ಸಾವಿರಾರು ಜನಸಂದಣಿಯನ್ನು ಸೆಳೆಯುವ ಎಲ್ಲಾ ರಾಜಕೀಯ ಘಟನೆಗಳು ಮತ್ತು ರ್ಯಾಲಿಗಳನ್ನು ರದ್ದುಗೊಳಿಸುವಲ್ಲಿ ಕಾಂಗ್ರೆಸ್‌ನ ನಿರ್ಧಾರವನ್ನು ಅನುಸರಿಸಲು ಆಡಳಿತಾರೂಢ ಬಿಜೆಪಿ ಯೋಜಿಸುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಮಂಗಳವಾರದ ಕಾಂಗ್ರೆಸ್ ತನ್ನ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’ ಚುನಾವಣಾ ಪ್ರಚಾರದ ಭಾಗವಾಗಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ನೂರಾರು ಮಹಿಳೆಯರು ಮತ್ತು ಹದಿಹರೆಯದ ಹುಡುಗಿಯರು ಮಾಸ್ಕ್ ಧರಿಸದೆ ಕಾಣಿಸಿಕೊಂಡರು.  ರಸ್ತೆಯಲ್ಲಿ ಜನರು ತುಂಬಿದ್ದು ಮ್ಯಾರಥಾನ್ ಆರಂಭವಾದಾಗ ಮುಂಭಾಗದಲ್ಲಿದ್ದ ಕೆಲವು ಮಹಿಳೆಯರು ಮುಗ್ಗರಿಸಿ ಕೆಳಗೆ ಬಿದ್ದರು. ನೂರಾರು ಜನರು ಮುಂಭಾಗದಲ್ಲಿದ್ದವರನ್ನು ದಾಟಲು ತಳ್ಳಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕಾಲ್ತುಳಿತದಂತಿರುವ  ಪರಿಸ್ಥಿತಿ ಅಲ್ಲಿ ಉಂಟಾಗಿದ್ದು,ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ.

ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕಿ ಮತ್ತು ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್ ಅವರು ವೈಷ್ಣೋದೇವಿ ದೇಗುಲದಲ್ಲಿ ಸಂಭವಿಸಿದ್ದೇನು ಎಂದು ಕೇಳುವ ಮೂಲಕ ಮ್ಯಾರಥಾನ್​​ನ್ನು ಸಮರ್ಥಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಚುನಾವಣೆ ನಡೆಯಲಿದೆ. ಹೆಚ್ಚಿನ ಕಾಳಜಿಯು ಒಮಿಕ್ರಾನ್ ರೂಪಾಂತರದ ಮೇಲೆ ಕೇಂದ್ರೀಕೃತವಾಗಿದೆ.  ಅಲಹಾಬಾದ್ ಹೈಕೋರ್ಟ್ ಕಳೆದ ತಿಂಗಳು ಚುನಾವಣಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಚುನಾವಣೆಯನ್ನು ಕೆಲವೇ ತಿಂಗಳುಗಳವರೆಗೆ ಮುಂದೂಡುವಂತೆ ಕೇಳಿದೆ. ಆದಾಗ್ಯೂ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಚುನಾವಣಾ ಆಯೋಗದ ನಡುವಿನ ಸಭೆಯ ನಂತರ, ಚುನಾವಣೆಯನ್ನು ನಿಗದಿತ ರೀತಿಯಲ್ಲಿ ನಡೆಸುವುದಾಗಿ ಘೋಷಿಸಲಾಯಿತು.

ಮತದಾನದ ಸಮಯವನ್ನು ವಿಸ್ತರಿಸುವುದು ಮತ್ತು ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಕೆಲವು ತಡೆಗಟ್ಟುವ ಕ್ರಮಗಳನ್ನು ಘೋಷಿಸಲಾಯಿತು. ಆದರೆ ಸಾವಿರಾರು ಜವರು ಭಾಗವಹಿಸುವ ರಾಜಕೀಯ ರ್ಯಾಲಿಗಳನ್ನು ತಕ್ಷಣವೇ ಭೇದಿಸುವುದರಿಂದ ಆಯೋಗವು ದೂರ ಸರಿಯಿತು ಮತ್ತು ಈ ಸಮಯದಲ್ಲಿ ಸಾಮಾಜಿಕ ಅಂತರವು ಇರುವುದಿಲ್ಲ ಎಂದು ಹೇಳಿತು.  “ಚುನಾವಣೆ ದಿನಾಂಕಗಳನ್ನು ಘೋಷಿಸಿದ ನಂತರ ಮತ್ತು ಮಾದರಿ ನೀತಿ ಸಂಹಿತೆ ಪ್ರಾರಂಭವಾದ ನಂತರ ನಮ್ಮ ಜವಾಬ್ದಾರಿ ಪ್ರಾರಂಭವಾಗುತ್ತದೆ. ಅಲ್ಲಿಯವರೆಗೆ, ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಮತ್ತು ಅವರು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಶಿಫಾರಸುಗಳ ಪ್ರಕಾರ ಕಾರ್ಯನಿರ್ವಹಿಸುತ್ತಾರೆ” ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ.

ಇಂದು ಬೆಳಿಗ್ಗೆ ಭಾರತವು 58,097 ಹೊಸ ಕೊವಿಡ್ ಪ್ರಕರಣಗಳನ್ನು ದಾಖಲಿಸಿದೆ. 2,135 ಒಮಿಕ್ರಾನ್ ಪ್ರಕರಣಗಳು ದಾಖವಾಗಿದ್ದು 31 ಪ್ರಕರಣಗಳು ಉತ್ತರ ಪ್ರದೇಶದಿಂದ ವರದಿ ಆಗಿದೆ.

ಇದನ್ನೂ ಓದಿ:  Video: ಉತ್ತರ ಪ್ರದೇಶದ ಕಾಂಗ್ರೆಸ್ ಮ್ಯಾರಥಾನ್‌ನಲ್ಲಿ ಕಾಲ್ತುಳಿತದಂತಹ ದೃಶ್ಯ; ಮಾಸ್ಕ್ ಇಲ್ಲದೆ ರಸ್ತೆಗಿಳಿದರು ನೂರಾರು ಮಹಿಳೆಯರು

ಇದನ್ನೂ ಓದಿ: ದೇಶದಲ್ಲಿ ಇಂದು ಬರೋಬ್ಬರಿ 58,097 ಕೊರೊನಾ ಸೋಂಕಿನ ಕೇಸ್​ಗಳು ದಾಖಲು; 534 ಮಂದಿ ಸಾವು, 2000 ದಾಟಿದ ಒಮಿಕ್ರಾನ್​ ಸೋಂಕಿತರ ಸಂಖ್ಯೆ