AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಧರಿಸುವಂತೆ ಮಾಡುತ್ತೇನೆ: ಉತ್ತರ ಪ್ರದೇಶದ ಬಿಜೆಪಿ ನಾಯಕ

"ಮೊದಲ ಬಾರಿಗೆ ಇಷ್ಟೊಂದು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ 'ಸಲಾಮ್' ಇದೆಯೇ ಅಥವಾ 'ಜೈ ಶ್ರೀ ರಾಮ್' ಇದೆಯೇ?" ಎಂದು ಸಿಂಗ್ ಕೇಳಿದ್ದಾರೆ.  2017ರಲ್ಲಿ ಸಿಂಗ್ ಡೊಮರಿಯಾಗಂಜ್ ಕ್ಷೇತ್ರದಿಂದ ಸುಮಾರು 200 ಮತಗಳಿಂದ ಗೆದ್ದಿದ್ದರು.

ನಾನು ಪುನರಾಯ್ಕೆಯಾದರೆ ಮುಸ್ಲಿಮರು ತಿಲಕ ಧರಿಸುವಂತೆ ಮಾಡುತ್ತೇನೆ: ಉತ್ತರ ಪ್ರದೇಶದ ಬಿಜೆಪಿ ನಾಯಕ
ರಾಘವೇಂದ್ರ ಸಿಂಗ್
TV9 Web
| Edited By: |

Updated on: Feb 14, 2022 | 3:52 PM

Share

ಲಖನೌ: ಉತ್ತರಪ್ರದೇಶದ (Uttar Pradesh) ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್ (Raghvendra Singh) ತಾನು ಮರು ಆಯ್ಕೆಯಾದರೆ ಮುಸ್ಲಿಮರು ಟೋಪಿ (ಸ್ಕಲ್ ಕ್ಯಾಪ್) ಧರಿಸುವ ಬದಲು ಹಣೆಗೆ ತಿಲಕ ಇಡುತ್ತಾರೆ ಎಂದು ಹೇಳಿದ್ದಾರೆ ಬಿಜೆಪಿ (BJP) ನಾಯಕನ ದ್ವೇಷ ಭಾಷಣದ ವಿಡಿಯೊ ವೈರಲ್ ಆಗಿದ್ದು ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಪೂರ್ವ ಯುಪಿಯ ಡೊಮರಿಯಾಗಂಜ್‌ನ ಶಾಸಕ ರಾಘವೇಂದ್ರ  ಸಿಂಗ್ “ಇಸ್ಲಾಮಿಕ್ ಭಯೋತ್ಪಾದನೆ” ಎಂದು ಕರೆದಿದ್ದನ್ನು ಎದುರಿಸಿರುವ ಭಾಷಣ ಇದು ಎಂದು ಸಮರ್ಥಿಸಿಕೊಂಡಿದ್ದಾರೆ. “ಇಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಇದ್ದಾಗ, ಹಿಂದೂಗಳು ಗೋಲ್ ಟೋಪಿಗಳನ್ನು (ಸ್ಕಲ್ ಕ್ಯಾಪ್) ಧರಿಸುವಂತೆ ಒತ್ತಾಯಿಸಲಾಯಿತು. ನಾನು ಷರತ್ತು ವಿಧಿಸಿದೆ. ನಾನು ಹಿಂದೂ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧನಿದ್ದೇನೆ. ನನ್ನ ಪ್ರಕಾರ ಮುಸ್ಲಿಮರು ನನ್ನನ್ನು ಸೋಲಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದರೆ, ನಾನು ಮೌನವಾಗಿರುವುದಿಲ್ಲ ಎಂದು ರಾಘವೇಂದ್ರ ಸಿಂಗ್ ವಿಡಿಯೊದಲ್ಲಿ ಹೇಳಿದ್ದಾರೆ. ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿದ ಬಲಪಂಥೀಯ ಗುಂಪಿನ ಹಿಂದೂ ಯುವ ವಾಹಿನಿಯ ಉತ್ತರ ಪ್ರದೇಶದ ಉಸ್ತುವಾರಿಯಾಗಿದ್ದಾರೆ. ಸಿಂಗ್ ಅವರ ದ್ವೇಷಭಾಷಣದ ವಿಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ. ನಾನು ಮತ್ತೆ ಶಾಸಕನಾದರೆ, ಗೋಲ್ ಟೋಪಿಗಳು (ಸ್ಕಲ್ ಕ್ಯಾಪ್) ಮಾಯವಾದಂತೆ. ಮುಂದಿನ ಬಾರಿ ಮಿಯಾನ್ ಲೋಗ್ (ಮುಸ್ಲಿಮರಿಗೆ ಅವಹೇಳನಕಾರಿಯಾಗಿ ಬಳಸಲಾಗುವ ಪದ) ತಿಲಕ ಧರಿಸುತ್ತಾರೆ ”ಎಂದು ಸಿಂಗ್ ಹೇಳಿದ್ದಾರೆ.

“ಮೊದಲ ಬಾರಿಗೆ ಇಷ್ಟೊಂದು ಹಿಂದೂಗಳು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ದೊಮರಿಯಾಗಂಜ್‌ನಲ್ಲಿ ‘ಸಲಾಮ್’ ಇದೆಯೇ ಅಥವಾ ‘ಜೈ ಶ್ರೀ ರಾಮ್’ ಇದೆಯೇ?” ಎಂದು ಸಿಂಗ್ ಕೇಳಿದ್ದಾರೆ.  2017ರಲ್ಲಿ ಸಿಂಗ್ ಡೊಮರಿಯಾಗಂಜ್ ಕ್ಷೇತ್ರದಿಂದ ಸುಮಾರು 200 ಮತಗಳಿಂದ ಗೆದ್ದಿದ್ದರು.

ಮಿಶ್ರ ಜನಸಂಖ್ಯೆಯನ್ನು ಹೊಂದಿರುವ ಡೊಮರಿಯಾಗಂಜ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಆರನೇ ಹಂತದ ಮತದಾನದ ಕ್ಷೇತ್ರಗಳಲ್ಲಿ ಬರಲಿದೆ.  ಪೂರ್ವ ಯುಪಿಯಲ್ಲಿ ಹಲವಾರು ಬಿಜೆಪಿ ನಾಯಕರು ಮತದಾನಕ್ಕೂ ಮುನ್ನ ಧ್ರುವೀಕರಣದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಿಜೆಪಿ ಕಳೆದ ತಿಂಗಳು ಹಲವಾರು ಹಿಂದುಳಿದ ಜಾತಿಗಳ ನಾಯಕರನ್ನು ಕಳೆದುಕೊಂಡಿದ್ದು, ಅವರು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಸೇರಿದ್ದರು.

ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ: ಕಾಂಗ್ರೆಸ್​​ಗೆ ಅದರ ದಾರಿ, ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ: ಮಮತಾ ಬ್ಯಾನರ್ಜಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್