ಬುಲ್ಡೋಜರ್‌ಗಳು ವಿಶ್ರಾಂತಿ ಪಡೆಯುತ್ತಿವೆ, ಯುಪಿ ಚುನಾವಣಾ ಫಲಿತಾಂಶದ ನಂತರ ಚಲಾಯಿಸುತ್ತೇವೆ: ಯೋಗಿ ಆದಿತ್ಯನಾಥ

ಐದು ವರ್ಷಗಳ ಅವಧಿಯ ತಮ್ಮ ಸರ್ಕಾರದ ವರದಿ ಕಾರ್ಡ್ ಅನ್ನು ಪ್ರಸ್ತುತಪಡಿಸಿದ ಯೋಗಿ ಆದಿತ್ಯನಾಥ ಅವರು ತಮ್ಮ ಆಡಳಿತದಲ್ಲಿ ಯಾವುದೇ ಗಲಭೆಗಳು ಸಂಭವಿಸಿಲ್ಲ ಮತ್ತು ಅಭೂತಪೂರ್ವ ರೀತಿಯಲ್ಲಿ ಅಪರಾಧಿಗಳನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು.

ಬುಲ್ಡೋಜರ್‌ಗಳು ವಿಶ್ರಾಂತಿ ಪಡೆಯುತ್ತಿವೆ, ಯುಪಿ ಚುನಾವಣಾ ಫಲಿತಾಂಶದ ನಂತರ ಚಲಾಯಿಸುತ್ತೇವೆ: ಯೋಗಿ ಆದಿತ್ಯನಾಥ
ಮೈನ್​​ಪುರಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಯೋಗಿ ಆದಿತ್ಯನಾಥ
Edited By:

Updated on: Feb 18, 2022 | 4:31 PM

ಲಖನೌ: ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರವನ್ನು ಉಳಿಸಿಕೊಂಡರೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಹೊರಗೆ ಬಂದವರ ಮೇಲೆ ತಮ್ಮ ಸರ್ಕಾರ ಬುಲ್ಡೋಜರ್‌ಗಳನ್ನು ಚಲಾಯಿಸಲಿದೆ  ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಶುಕ್ರವಾರ ಹೇಳಿದ್ದಾರೆ. ಮೈನ್‌ಪುರಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ, ಚುನಾವಣೆಯ ಸಮಯದಲ್ಲಿ ಅಪರಾಧಿಗಳ ಆಸ್ತಿಗಳ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸಲು ಸಮಾಜವಾದಿ ಪಕ್ಷದ (Samajwadi Party) ಹಿರಿಯ ನಾಯಕರೊಬ್ಬರು ತನಗೆ ನೆನಪಿಸಿದ್ದಾರೆ ಎಂದು ಹೇಳಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆದರೆ ಚುನಾವಣೆಯ ಸಮಯದಲ್ಲಿ ಹೊರಬಂದ ಎಲ್ಲರ ಮೇಲೂ ನಾವು ಮಾರ್ಚ್ 10 (ಚುನಾವಣಾ ಫಲಿತಾಂಶದ ದಿನ) ನಂತರ ಬುಲ್ಡೋಜರ್‌ಗಳನ್ನು ಬಳಸುತ್ತೇವೆ ಎಂದು ಬಿಜೆಪಿ ನಾಯಕ ಹೇಳಿದರು. ಈ ಚುನಾವಣಾ ಋತುವಿನಲ್ಲಿ, ಆದಿತ್ಯನಾಥ ಅವರು ಅಪರಾಧಿಗಳ ಅಕ್ರಮವಾಗಿ ಸಂಪಾದಿಸಿದ ಆಸ್ತಿಗಳ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸುವ ಮತ್ತು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ನಾಶಪಡಿಸಿದ ಪ್ರತಿಭಟನಾಕಾರರಿಗೆ ವಸೂಲಾತಿ ನೋಟಿಸ್ ಕಳುಹಿಸುವ ತಮ್ಮ ಸರ್ಕಾರದ ನೀತಿಯ ಬಗ್ಗೆ ಆಗಾಗ್ಗೆ ಹೆಮ್ಮೆಪಡುತ್ತಿದ್ದಾರೆ. ಬುಲ್ಡೋಜರ್‌ಗಳ ಬಗ್ಗೆ ಚಿಂತಿಸಬೇಡಿ ಎಂದು ಎಸ್‌ಪಿ ನಾಯಕರಿಗೆ ಏಕೆಂದರೆ ಯಂತ್ರಗಳಿಗೆ “ಸ್ವಲ್ಪ ವಿಶ್ರಾಂತಿ ಬೇಕು” ಮತ್ತು ದುರಸ್ತಿ ಕಾರ್ಯಕ್ಕೆ ಕಳುಹಿಸಲಾಗಿದೆ ಎಂದು ಆದಿತ್ಯನಾಥ ಹೇಳಿದರು.


ಐದು ವರ್ಷಗಳ ಅವಧಿಯ ತಮ್ಮ ಸರ್ಕಾರದ ವರದಿ ಕಾರ್ಡ್ ಅನ್ನು ಪ್ರಸ್ತುತಪಡಿಸಿದ ಯೋಗಿ ಆದಿತ್ಯನಾಥ ಅವರು ,  ತಮ್ಮ ಆಡಳಿತದಲ್ಲಿ ಯಾವುದೇ ಗಲಭೆಗಳು ಸಂಭವಿಸಿಲ್ಲ ಮತ್ತು ಅಭೂತಪೂರ್ವ ರೀತಿಯಲ್ಲಿ ಅಪರಾಧಿಗಳನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಪ್ರಮುಖ ಸಾಧನೆ ಎಂದು ಅವರು ಈ ವರ್ಷಗಳಲ್ಲಿ ಶಾಂತಿಯುತ ಕನ್ವರ್ ಯಾತ್ರೆಗಳನ್ನು ಎತ್ತಿ ತೋರಿಸಿದರು.

ಆದಿಯನಾಥ್ ತಮ್ಮ ವಸೂಲಾತಿ ನೀತಿಯನ್ನು ಪ್ರದರ್ಶಿಸುತ್ತಿರುವಾಗ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನಾಕಾರರಿಂದ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿಗಳನ್ನು ಮರುಪಾವತಿಸಲು ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ರಾಜ್ಯ ಸರ್ಕಾರವು ಪ್ರತಿಭಟನಾಕಾರರಿಂದ ವಸೂಲಿ ಮಾಡಿದ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸುತ್ತದೆ ಎಂದು ಹೇಳಿದೆ. ಆದಾಗ್ಯೂ, 2020 ರ ಆಗಸ್ಟ್ 31 ರಂದು ಹೊಸ ಕಾನೂನನ್ನು ಅಧಿಸೂಚಿಸಿದ ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿಯ ಮರುಪಡೆಯುವಿಕೆ ಕಾಯಿದೆಯಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಲು ನ್ಯಾಯಾಲಯವು ಸರ್ಕಾರಕ್ಕೆ ಅನುಮತಿ ನೀಡಿದೆ.

ಇದನ್ನೂ ಓದಿ: ನಾನು ಜಗತ್ತಿನ ಸ್ವೀಟೆಸ್ಟ್ ಟೆರರಿಸ್ಟ್ ; ಕುಮಾರ್ ವಿಶ್ವಾಸ್ ಆರೋಪ ನಿರಾಕರಿಸಿದ ಕೇಜ್ರಿವಾಲ್

ಇದನ್ನೂ ಓದಿ: ಬುಲ್ಡೋಜರ್ ಹೇಳಿಕೆ: ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್‌ಗೆ ಚುನಾವಣಾ ಆಯೋಗ ನೋಟಿಸ್