
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ವಿಧಾನಸಭಾ ಮತಕ್ಷೇತ್ರವೊಂದರಲ್ಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಧುರೀಣನ ಮನೆಯಲ್ಲಿ ವಿದ್ಯುನ್ಮಾನ ಯಂತ್ರ (ಇವಿಎಮ್) ಮತ್ತು ವಿವಿಪ್ಯಾಟ್ ಮಶೀನುಗಳು ದೊರೆತಿರುವ ಪ್ರಕರಣವನ್ನು ಒಂದು ಸ್ವತಂತ್ರ ಸಂಸ್ಥೆಯ ಮೂಲಕ ನಡೆಸಬೇಕೆಂದು ಬಾರತೀಯ ಜನತಾ ಪಕ್ಷವು ಚುನಾವಣಾ ಆಯೋಗವನ್ನು ಆಗ್ರಹಿಸಿದೆ. ಉಲುಬೀರಿಯ ಮತಕ್ಷೇತ್ರದಲ್ಲಿರುವ ಟಿಎಮ್ಸಿ ನಾಯಕರ ಮನೆಯಲ್ಲಿ ನಾಲ್ಕು ಈವಿಎಮ್, ಅಷ್ಟೇ ಸಂಖ್ಯೆಯ ವಿವಿಪ್ಯಾಟ್ಗಳು ದೊರೆತ ನಂತರ ಆಯೋಗವು ಸಂಬಂಧಪಟ್ಟ ಒಬ್ಬ ಚುನಾವಣಾ ಆಧಿಕಾರಿಯನ್ನು ಸಸ್ಪೆಂಡ್ ಮಾಡಿತ್ತು.
ಮಂಗಳವಾರದಂದು ಸುದ್ದಿಗೋಷ್ಠಿಯೊಂದರಲ್ಲಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಚುನಾವಣೆಗೆ ಕೇವಲ ಒಂದು ದಿನ ಮೊದಲು ಇವಿಎಮ್ ಮತ್ತು ವಿವಿಪ್ಯಾಟ್ಗಳು ಒಬ್ಬ ಟಿಎಮ್ಸಿ ನಾಯಕನ ಮನೆಯಿಂದ ವಶಪಡಿಸಿಕೊಂಡಿರುವುದು ಗಂಭೀರ ವಿಷಯವಾಗಿದೆ ಎಂದು ಹೇಳಿದರು.
‘ಚುನಾವಣಾ ಕರ್ತವ್ಯಕ್ಕೆ ನಿಗದಿಯಾಗಿದ್ದ ಕಾರೊಂದರಲ್ಲಿ ಮಶೀನುಗಳನ್ನು ತೆಗೆದುಕೊಂಡು ಹೋಗಿದ್ದು ಮತ್ತೂ ಗಂಭೀರವಾದ ವಿಷಯವಾಗಿದೆ. ಈ ಪ್ರಕರಣದ ಸಂಪೂರ್ಣ ತನಿಖೆಯಾಗಬೇಕು. ಚುನಾವಣಾ ಆಯೋಗವು ಒಂದು ಪ್ರತ್ಯೇಕ ಮತ್ತ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸುವ ಬಗ್ಗೆ ನಮಗೆ ನಂಬಿಕೆಯಿದೆ,’ ಎಂದು ಹೇಳಿದರು.
ಆಯೋಗವು ವಶಪಡಿಸಿಕೊಂಡ ಇವಿಎಮ್ ಮತ್ತು ವಿವಿಪ್ಯಾಟ್ಗಳನ್ನು ಮಂಗಳವಾರದಂದು ಪಶ್ಚಿಮ ಬಂಗಾಳದಲ್ಲಿ ನಡೆದ ಮೂರನೇ ಹಂತದ ಮತದಾನದಲ್ಲಿ ಬಳಸಲಿಲ್ಲ.
ಏತನ್ಮಧ್ಯೆ, ಇಂದು ಮತದಾನ ನಡೆದ ಡೈಮಂಡ್ ಹಾರ್ಬರ್ ಮತಕ್ಷೇತ್ರದಲ್ಲಿ, ಟಿಎಮ್ಸಿ ಕಾರ್ಯಕರ್ತರು ತಮಗೆ ವೋಟು ಚಲಾಯಿಸಲು ಅವಕಾಶ ನೀಡಲಿಲ್ಲವೆಂದು ಕೆಲ ಮತದಾರರು ದೂರಿದ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ನಾವು ದೂರು ಸಲ್ಲಿಸಿದ ನಂತರ ಕೆಲವ ಅಧಿಕಾರಿಗಳ ಸ್ಥಳಕ್ಕೆ ಆಗಮಿಸಿದರಾದರೂ ಮತ ಚಲಾಯಿಸಲು ನಮಗೆ ನೆರವಾಗಲಿಲ್ಲ ಅಂತ ಒಬ್ಬ ಮಹಿಳೆ ಹೇಳಿದರೆಂದು ಸುದ್ದಿಸಂಸ್ಥೆ ವರದಿ ಮಾಡಿದೆ.
West Bengal: Many voters at a polling booth in Diamond Harbour constituency claimed that TMC workers didn't let them vote.
"Officials came here but didn't facilitate voting for us," said a woman, earlier today. pic.twitter.com/VJCzLeBJsg
— ANI (@ANI) April 6, 2021
ಇದನ್ನೂ ಓದಿ: West Bengal Elections 2021: ಟಿಎಂಸಿ ನಾಯಕನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ; ಚುನಾವಣಾ ಅಧಿಕಾರಿ ಅಮಾನತು
Published On - 11:36 pm, Tue, 6 April 21