Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲಿಷ್, ಕೊರಿಯನ್, ಚೈನೀಸ್​ ಸೇರಿ ಹಲವು ಭಾಷೆಗಳಿಗೆ ರಿಮೇಕ್ ಆಗಲಿದೆ ‘ದೃಶ್ಯಂ’ ಸಿನಿಮಾ

ಮೂಲ ಚಿತ್ರದಲ್ಲಿ ಮೋಹನ್​​ಲಾಲ್, ಜೀತು ಜೊಸೆಫ್​, ಮೀನಾ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಜೀತು ಜೊಸೆಫ್ ನಿರ್ದೇಶನ ಮಾಡಿದ್ದರು.

ಇಂಗ್ಲಿಷ್, ಕೊರಿಯನ್, ಚೈನೀಸ್​ ಸೇರಿ ಹಲವು ಭಾಷೆಗಳಿಗೆ ರಿಮೇಕ್ ಆಗಲಿದೆ ‘ದೃಶ್ಯಂ’ ಸಿನಿಮಾ
ದೃಶ್ಯಂ 2 ಚಿತ್ರದಲ್ಲಿ ಮೋಹನ್​ಲಾಲ್
Follow us
ರಾಜೇಶ್ ದುಗ್ಗುಮನೆ
|

Updated on: Feb 09, 2023 | 7:14 AM

ಮಲಯಾಳಂನ ‘ದೃಶ್ಯಂ’ (Drishyam) ಹಾಗೂ ‘ದೃಶ್ಯಂ 2’ ಸಿನಿಮಾಗಳು ಸೂಪರ್ ಹಿಟ್ ಆದವು. ಕನ್ನಡ, ಹಿಂದಿ ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲಾಯಿತು. ಅಲ್ಲಿಯೂ ಸಿನಿಮಾ ಹಿಟ್ ಆದವು. ಹಿಂದಿಯಲ್ಲಿ ಈ ಚಿತ್ರವನ್ನು ರಿಮೇಕ್ ಮಾಡುವ ಹಕ್ಕನ್ನು ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾಷನಲ್ ಪಡೆದುಕೊಂಡಿತ್ತು. ಈಗ ಇವರು ವಿದೇಶಿ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದಾರೆ. ಈ ಮೂಲಕ ಚೈನೀಸ್ (Chinees) ಮೊದಲಾದ ಭಾಷೆಗಳಿಗೆ ಈ ಸಿನಿಮಾನ ರಿಮೇಕ್ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾನಲ್ ಕಡೆಯಿಂದಲೇ ಮಾಹಿತಿ ಸಿಕ್ಕಿದೆ. ‘ಹಿಂದಿಯಲ್ಲಿ ದೃಶ್ಯಂ 2 ಯಶಸ್ಸು ಕಂಡಿತು. ಈ ಬೆನ್ನಲ್ಲೇ ನಾವು ಇಂಗ್ಲಿಷ್ ಸೇರಿದಂತೆ ಎಲ್ಲಾ ಭಾಷೆಗಳ ರಿಮೇಕ್ ಹಕ್ಕನ್ನು ಪಡೆದಿದ್ದೇವೆ. ಸದ್ಯ ನಾವು ಕೊರಿಯನ್, ಜಪಾನೀಸ್ ಹಾಗೂ ಹಾಲಿವುಡ್​​ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಪನೋರಮ ಸ್ಟುಡಿಯೋಸ್ ಇಂಟರ್​ನ್ಯಾಷನಲ್ ತಿಳಿಸಿದೆ.

ಮೂಲ ಚಿತ್ರದಲ್ಲಿ ಮೋಹನ್​​ಲಾಲ್, ಜೀತು ಜೊಸೆಫ್​, ಮೀನಾ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ಜೀತು ಜೊಸೆಫ್ ನಿರ್ದೇಶನ ಮಾಡಿದ್ದರು. ಕಿರುಕುಳ ಕೊಡುತ್ತಿರುವ ವ್ಯಕ್ತಿಯನ್ನು ಕಥಾನಾಯಕನ ಕುಟುಂಬದವರು ಹತ್ಯೆ ಮಾಡುತ್ತಾರೆ. ಆ ಹೆಣವನ್ನು ನಿರ್ಮಾಣ ಆಗುತ್ತಿರುವ ಪೊಲೀಸ್ ಠಾಣೆ ಒಳಗೆ ಹುಗಿದು ಹಾಕುತ್ತಾನೆ. ಈ ಪ್ರಕರಣದಿಂದ ಆತ ಹೇಗೆ ತಪ್ಪಿಸಿಕೊಳ್ಳುತ್ತಾನೆ ಅನ್ನೋದು ಸಿನಿಮಾದ ಕಥೆ.

‘ದೃಶ್ಯಂ 2’ ಚಿತ್ರದಲ್ಲಿ ಪೊಲೀಸ್ ಠಾಣೆ ಅಡಿಯಲ್ಲಿ ಮೂಳೆಗಳು ಇವೆ ಎಂಬ ವಿಚಾರ ರಿವೀಲ್ ಆಗುತ್ತದೆ. ಇದರಿಂದಲೂ ಕಥಾನಾಯಕ ತಪ್ಪಿಸಿಕೊಳ್ಳುತ್ತಾನೆ. ಅದು ‘ದೃಶ್ಯಂ 2’ನ ಸಸ್ಪೆನ್ಸ್​. ಕನ್ನಡದಲ್ಲಿ ರವಿಚಂದ್ರನ್ ಅವರು ಮುಖ್ಯ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್