Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?

Bigg Boss Kannada Rajeev: ರಾಜೀವ್​ ಹೊರಹೋದ ನಂತರ ಬೆಡ್​ರೂಂಗೆ ಬಂದು ಶುಭಾ ಕಣ್ಣೀರು ಹಾಕುತ್ತಾ ಮಲಗಿದ್ದರು. ಆಗ ಅವರ ಬಳಿ ಬಂದ ದಿವ್ಯಾ ಉರುಡುಗ ಹಾಗೂ ಅರವಿಂದ್ ಸಮಾಧಾನದ ಮಾತುಗಳನ್ನು ಆಡಿದರು.

Bigg Boss Kannada: ಬಿಗ್​ ಬಾಸ್​ ಬೆಡ್​ರೂಂನಿಂದ ಬಂತು ಮುತ್ತಿನ ಶಬ್ದ! ಕೊಟ್ಟಿದ್ಯಾರು, ತೆಗೆದುಕೊಂಡಿದ್ಯಾರು?
ಬಿಗ್ ಬಾಸ್​ ಕನ್ನಡ ಸೀಸನ್​ 8
Edited By:

Updated on: Apr 26, 2021 | 4:24 PM

ಈ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಪ್ರೀತಿ-ಪ್ರೇಮ ಹುಟ್ಟಿಕೊಂಡಿವೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರ ಅವರು ಮದುವೆ ಆದ ಉದಾಹರಣೆ ಕೂಡ ಇದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್-ದಿವ್ಯಾ ಉರುಡುಗ ಹಾಗೂ ಮಂಜು ಪಾವಗಡ-ದಿವ್ಯಾ ಸುರೇಶ್​ ನಡುವೆ ಏನೋ ನಡೆಯುತ್ತಿದೆ ಎಂಬುದು ಪ್ರೇಕ್ಷಕರಿಗೆ ಅರ್ಥವಾಗಿದೆ. ಹೀಗಿರುವಾಗಲೆ ಬಿಗ್​ ಬಾಸ್​ ಮನೆಯ ಬೆಡ್​ರೂಂನಲ್ಲಿ ಮುತ್ತಿನ ಶಬ್ದ ಕೇಳಿದೆ.

ಎಂಟನೇ ವಾರದ ಎಪಿಸೋಡ್​ನಲ್ಲಿ ಬಿಗ್​ ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದಾರೆ. ಅವರು ಮನೆಯಿಂದ ಹೊರ ಹೋಗಿರುವುದು ಸಾಕಷ್ಟು ಜನರಿಗೆ ಶಾಕ್​ ಮೂಡಿಸಿದೆ. ಅದರಲ್ಲೂ ರಾಜೀವ್​ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದ ಶುಭಾ ಪೂಂಜಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಗೋಲ್ಡನ್​ ಪಾಸ್​ ಟಾಸ್ಕ್​ನಲ್ಲಿ ಶುಭಾ ಹಾಗೂ ರಾಜೀವ್​ ಒಪ್ಪಂದ ಮಾಡಿಕೊಂಡಿದ್ದರು ಎನ್ನುವ ವಿಚಾರ ಭಾನುವಾರ (ಏಪ್ರಿಲ್​ 25) ಎಪಿಸೋಡ್​ನಲ್ಲಿ ಗೊತ್ತಾಗಿದೆ. ರಾಜೀವ್​ಗೆ ಗೋಲ್ಡ್​ ಪಾಸ್​ ಸಿಕ್ಕ ಹೊರತಾಗಿಯೂ  ಅದನ್ನು ಬಳಸಿಕೊಳ್ಳಲಿಲ್ಲ. ಇದು ಅವರು ಮನೆಯಿಂದ ಹೊರ ಹೋಗಲು ಪ್ರಮುಖ ಕಾರಣವಾಗಿತ್ತು.

ಈ ವಿಚಾರ ಶುಭಾಗೆ ತುಂಬಾನೇ ಬೇಸರ ತರಿಸಿದೆ. ಹೀಗಾಗಿ, ಅವರು ಬಿಟ್ಟು ಬಿಡದೆ ಅಳೋಕೆ ಶುರುಮಾಡಿದ್ದಾರೆ. ರಾಜೀವ್​ ಹೊರಹೋದ ನಂತರ ಬೆಡ್​ರೂಂಗೆ ಬಂದು ಶುಭಾ ಕಣ್ಣೀರು ಹಾಕುತ್ತಾ ಮಲಗಿದ್ದರು. ಆಗ ಅವರ ಬಳಿ ಬಂದ ದಿವ್ಯಾ ಉರುಡುಗ ಹಾಗೂ ಅರವಿಂದ್ ಸಮಾಧಾನದ ಮಾತುಗಳನ್ನು ಆಡಿದರು. ಆಗಲೂ ಶುಭಾ ಕಣ್ಣೀರು ನಿಂತಿಲ್ಲ.

ಈ ವೇಳೆ ದಿವ್ಯಾ ಪ್ರೀತಿಯಿಂದ ಶುಭಾ ಅವರನ್ನು ಎಳೆದುಕೊಂಡು ಮುತ್ತಿಟ್ಟರು. ಬೆಡ್​ರೂಂನಲ್ಲಿ ಕತ್ತಲಿತ್ತು. ಪಕ್ಕದಲ್ಲಿ ಅರವಿಂದ್ ಕೂಡ ಇದ್ದಿದ್ದರಿಂದ ಆರಂಭದಲ್ಲಿ ದಿವ್ಯಾ ಮುತ್ತು ಕೊಟ್ಟಿದ್ದು ಅರವಿಂದ್​ಗೆ ಎಂದು ಅನೇಕರಿಗೆ ಅನಿಸಿತ್ತು. ಆದರೆ, ಮತ್ತೊಮ್ಮೆ ರಿವೈಂಡ್​ ಮಾಡಿ ನೋಡಿದಾಗ ದಿವ್ಯಾ ಮುತ್ತುಕೊಟ್ಟಿದ್ದು ಶುಭಾಗೆ ಎನ್ನುವುದು ಗೊತ್ತಾಗಿದೆ.

ಇನ್ನು, ರಾಜೀವ್​ ಬಿಗ್​ ಬಾಸ್ ಮನೆಯಿಂದ ಹೊರ ಹೋಗಿರುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ಆಗುತ್ತಿದೆ.

ಇದನ್ನೂ ಓದಿ: Bigg Boss Kannada: ಬಿಗ್​​ಬಾಸ್ ಮನೆಯಿಂದ ರಾಜೀವ್​ ಹೊರ ಹೋಗಿದ್ದು ಎಷ್ಟು ಸರಿ? ಸಾಮಾಜಿಕ ಜಾಲತಾಣದಲ್ಲಿ ಜೋರಾಯ್ತು ಚರ್ಚೆ

Published On - 4:08 pm, Mon, 26 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us