AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ, ಕೆಲಸ ಸಿಗುತ್ತೆ’; ರೆಹಮಾನ್​​ಗೆ ಕಿವಿಮಾತು ಹೇಳಿದ ಗಾಯಕ

ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಬಾಲಿವುಡ್‌ನಲ್ಲಿ 8 ವರ್ಷಗಳಿಂದ ಕೆಲಸ ಸಿಗುತ್ತಿಲ್ಲ, ಉದ್ಯಮ ಕೋಮುವಾದಿಯಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಗಾಯಕ ಅನುಪ್ ಜಲೋಟಾ, ಧರ್ಮದ ಕಾರಣದಿಂದಲೇ ಕೆಲಸ ಸಿಗುತ್ತಿಲ್ಲ ಎಂದು ರೆಹಮಾನ್ ಭಾವಿಸಿದರೆ, ಅವರು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂದು ವಿವಾದಾತ್ಮಕವಾಗಿ ಸಲಹೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ಚರ್ಚೆಯ ಕೇಂದ್ರಬಿಂದುವಾಗಿದೆ.

‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಿ, ಕೆಲಸ ಸಿಗುತ್ತೆ’; ರೆಹಮಾನ್​​ಗೆ ಕಿವಿಮಾತು ಹೇಳಿದ ಗಾಯಕ
ರೆಹಮಾನ್-ಜಲೋಟಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 22, 2026 | 7:45 AM

Share

ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಮತ್ತು ಗಾಯಕ ಎ.ಆರ್. ರೆಹಮಾನ್ (Ar Rahman) ಇತ್ತೀಚಿನ ಸಂದರ್ಶನವೊಂದರಲ್ಲಿ ಕಳೆದ 8 ವರ್ಷಗಳಿಂದ ಬಾಲಿವುಡ್‌ನಲ್ಲಿ ಕೆಲಸ ಸಿಗುತ್ತಿಲ್ಲ ಎಂದು ಒಪ್ಪಿಕೊಂಡರು. ಬಾಲಿವುಡ್ ಉದ್ಯಮವು ಈಗ ಹೆಚ್ಚು ಕೋಮುವಾದಿಯಾಗಿದೆ ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆಗೆ ವಿವಿಧ ಪ್ರತಿಕ್ರಿಯೆಗಳು ಹೊರಬರಲು ಪ್ರಾರಂಭಿಸಿವೆ. ಧರ್ಮದ ಕಾರಣದಿಂದ ಕೆಲಸ ಸಿಗುತ್ತಿಲ್ಲ ಎಂಬ ದೂರನ್ನು ಹಲವರು ವಿರೋಧಿಸಿದ್ದಾರೆ. ಈಗ, ಭಜನೆಯ ಸಾಮ್ರಾಟ ಎಂಬ ಖ್ಯಾತಿ ಇರೋ ಗಾಯಕ ಅನುಪ್ ಜಲೋಟಾ ನೀಡಿದ ಹೇಳಿಕೆ ಈ ನಿಟ್ಟಿನಲ್ಲಿ ಚರ್ಚೆಗೆ ಬಂದಿದೆ. ಅನುಪ್ ಜಲೋಟಾ ನೇರವಾಗಿ ರೆಹಮಾನ್‌ಗೆ ಮತಾಂತರಗೊಳ್ಳುವಂತೆ ಸಲಹೆ ನೀಡಿದ್ದಾರೆ.

IANSಗೆ ನೀಡಿದ ಸಂದರ್ಶನದಲ್ಲಿ ಅನುಪ್ ಜಲೋಟಾ ಮಾತನಾಡಿದ್ದಾರೆ. ಎ.ಆರ್. ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸ ಸಿಗುತ್ತಿಲ್ಲ ಎಂದು ಭಾವಿಸಿದರೆ, ಅವರು ಹಿಂದೂ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಕು’ ಎಂದು ಹೇಳಿದರು. ಇದು ಚರ್ಚೆಯ ಕೇಂದ್ರಬಿಂದು ಆಗಿದೆ.

‘ಅವರು ಮೊದಲು ಹಿಂದೂ ಆಗಿದ್ದರು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡರು ಎಂದು ಹೇಳಿದರು. ಅದಾದ ನಂತರವೂ ಅವರು ಸಂಗೀತ ಜಗತ್ತಿನಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದರು, ಹಣ ಮತ್ತು ಖ್ಯಾತಿಯನ್ನು ಗಳಿಸಿದರು. ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದರು. ಆದರೆ ರೆಹಮಾನ್ ತಮ್ಮ ಧರ್ಮದ ಕಾರಣದಿಂದಾಗಿ ಕೆಲಸದ ಅವಕಾಶಗಳು ಸಿಗುತ್ತಿಲ್ಲ ಎಂದು ಭಾವಿಸಿದರೆ ತಮ್ಮ ಹಳೆಯ ಧರ್ಮಕ್ಕೆ ಮತ್ತೆ ಮತಾಂತರಗೊಳ್ಳುವ ಬಗ್ಗೆ ಯೋಚಿಸಬೇಖಕಿದೆ’ ಎಂದು ಸಲಹೆ ನೀಡಿದರು.

‘ನಮ್ಮ ದೇಶದಲ್ಲಿ ಮುಸ್ಲಿಮರಾಗಿರುವುದರಿಂದ ಅವರಿಗೆ ಕೆಲಸ ಸಿಗುತ್ತಿಲ್ಲ ಎಂದು ಅವರು ನಂಬಿದರೆ, ಅವರು ಮತ್ತೆ ಹಿಂದೂಗಳಾಗಬೇಕು. ಹಿಂದೂಗಳಾಗಿರುವುದರಿಂದ ಅವರಿಗೆ ಮತ್ತೆ ಸಿನಿಮಾ ಸಿಗುತ್ತವೆ ಎಂದು ಅವರು ನಂಬಬೇಕು. ರೆಹಮಾನ್ ಹೇಳಿದ್ದು ಇದನ್ನೇ. ಆದ್ದರಿಂದ ನಾನು ಅವರಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಪ್ರಯತ್ನಿಸಲು ಸಲಹೆ ನೀಡುತ್ತೇನೆ. ನಂತರ ಅವರಿಗೆ ಮತ್ತೆ ಕೆಲಸ ಸಿಗುತ್ತದೆಯೇ ಎಂದು ನೋಡಬೇಕು’ ಎಂದು ಜಲೋಟಾ ಹೇಳಿದರು.

ಇದನ್ನೂ ಓದಿ: ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

‘ಕಳೆದ 8 ವರ್ಷಗಳಲ್ಲಿ ಬಾಲಿವುಡ್​​ನಲ್ಲಿ ಸೃಜನಶೀಲರಲ್ಲದವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಕೋಮು ವಿಷಯಗಳು ಇರಬಹುದು, ಆದರೆ ಯಾರೂ ನನಗೆ ನೇರವಾಗಿ ಏನನ್ನೂ ಹೇಳಿಲ್ಲ. ಕೆಲವು ವಿಷಯಗಳು ನನ್ನ ಕಿವಿಗೆ ಬಿದ್ದಿವೆ’ ಎಂದು ರೆಹಮಾನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.