AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸಹ ಸ್ಪರ್ಧಿಯ ಪತ್ನಿಯ ಹೊಗಳಿ ಕೆನ್ನೆಗೆ ಏಟು ತಿಂದ ಸ್ಪರ್ಧಿ

‘ಬಿಗ್ ಬಾಸ್’ ಶೋ ಆರಂಭ ಆಯಿತು ಎನ್ನುವಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ಬಾರಿ ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ ವಿವಾದಗಳ ಕೇಂದ್ರ ಬಿಂದು ಆಗಿದೆ. ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿಗೆ ಹೊಡೆದಿದ್ದಾರೆ. ಅದೂ ಪತ್ನಿಯ ವಿಚಾರಕ್ಕೆ.

ಬಿಗ್ ಬಾಸ್​ನಲ್ಲಿ ಸಹ ಸ್ಪರ್ಧಿಯ ಪತ್ನಿಯ ಹೊಗಳಿ ಕೆನ್ನೆಗೆ ಏಟು ತಿಂದ ಸ್ಪರ್ಧಿ
ಅರ್ಮಾನ್
ರಾಜೇಶ್ ದುಗ್ಗುಮನೆ
|

Updated on: Jul 10, 2024 | 7:31 AM

Share

ಬಿಗ್ ಬಾಸ್’ ರಿಯಾಲಿಟಿ ಶೋ ಆರಂಭ ಆದಾಗಲೆಲ್ಲ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ರಲ್ಲಿ ವಿವಾದ ಒಂದು ಹುಟ್ಟಿಕೊಂಡಿದೆ. ಸ್ಪರ್ಧಿ ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿ ವಿಶಾಲೆ ಪಾಂಡೆ ಕೆನ್ನೆಗೆ ಬಾರಿಸಿದ್ದಾರೆ. ಆದಾಗ್ಯೂ ಅವರನ್ನು ಹೊರ ಹಾಕಿಲ್ಲ. ಈ ವಿಚಾರ ಸೊಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಯಾವುದೇ ಸ್ಪರ್ಧಿಯು ಹಲ್ಲೆ ಮಾಡಿದರೆ ಅಂಥವರನ್ನು ಮುಲಾಜಿಲ್ಲದೆ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ, ಅರ್ಮಾನ್ ಮಲಿಕ್ ವಿಚಾರದಲ್ಲಿ ಆ ರೀತಿ ಆಗಿಲ್ಲ.

ಈ ಕಿರಿಕ್ ಆರಂಭ ಆಗಿದ್ದು ಪತ್ನಿಯ ವಿಚಾರಕ್ಕೆ. ವಿಶಾಲ್ ಅವರು ಅರ್ಮಾನ್ ಮಲಿಕ್ ಪತ್ನಿ ಸುಂದರವಾಗಿದ್ದಾರೆ ಎಂದರು. ಇದಕ್ಕೆ ಸಿಟ್ಟಾದ ಅರ್ಮಾನ್ ಅವರು ವಿಶಾಲ್ ಮೇಲೆ ಕಿಡಿಕಾರಿದರು. ಆಗ ವಿಶಾಲ್ ‘ಅತ್ತಿಗೆ ಚೆನ್ನಾಗಿದ್ದಾಳೆ’ ಎಂದರು. ಆಗ ಶುರುವಾಯಿತು ಜಗಳ. ನಂತರ ಇದು ಮಿತಿ ಮೀರಿದೆ. ಈ ವೇಳೆ ಅರ್ಮಾನ್ ಅವರು ವಿಶಾಲ್ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಬಿಗ್ ಬಾಸ್ ಮಂದಿ ಸಮರ್ಥಿಸಿಕೊಂಡಿದ್ದಾರೆ. ‘ನಾನು ಆ ಅರ್ಥದಲ್ಲಿ ಹೇಳಿಲ್ಲ’ ಎಂದಿದ್ದಾರೆ ವಿಶಾಲ್.

‘ಅರ್ಮಾನ್ ಅವರನ್ನು ಹೊರ ಹಾಕಿ’

ಈ ಘಟನೆ ಬಗ್ಗೆ ವಿಶಾಲ್ ಸಹೋದರಿ ನೇಹಾ ಮಾತನಾಡಿದ್ದಾರೆ. ‘ಅರ್ಮಾನ್ ಅವರನ್ನು ಎಲಿಮಿನೇಟ್ ಆಗಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಮುಂದಿನ ಸೀಸನ್​ಗಳಲ್ಲಿ ಸ್ಪರ್ಧಿಗಳು ಹಿಂಸೆ ಮಾಡಲು ಬಯಸುತ್ತಾರೆ. ವಿಶಾಲ್ ಅವರು ಸ್ಟ್ರಾಂಗ್ ಆಗಿದ್ದು ಶೋ ಗೆಲ್ಲಲಿ’ ಎಂದು ನೇಹಾ ಆಶಿಸಿದ್ದಾರೆ.

ಇದನ್ನೂ ಓದಿ: ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ

ಬದಲಾದ ನಿರೂಪಕ

ಬಿಗ್ ಬಾಸ್​ನ ಪ್ರತಿ ಬಾರಿ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದರು. ಈ ಬಾರಿ ಅನಿಲ್ ಕಪೂರ್ ಅವರು ಶೋನ ನಡೆಸಿಕೊಡುತ್ತಿದ್ದಾರೆ. ಅವರು ವೀಕೆಂಡ್ ಎಪಿಸೋಡ್​ಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಅನೇಕರು ‘ಸಲ್ಮಾನ್ ಖಾನ್ ಅವರೇ ಮರಳಿ ಬರಲಿ’ ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಲೋಕಾಯುಕ್ತ: ಹಲವೆಡೆ ದಾಳಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ