AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸಹ ಸ್ಪರ್ಧಿಯ ಪತ್ನಿಯ ಹೊಗಳಿ ಕೆನ್ನೆಗೆ ಏಟು ತಿಂದ ಸ್ಪರ್ಧಿ

‘ಬಿಗ್ ಬಾಸ್’ ಶೋ ಆರಂಭ ಆಯಿತು ಎನ್ನುವಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ಬಾರಿ ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ ವಿವಾದಗಳ ಕೇಂದ್ರ ಬಿಂದು ಆಗಿದೆ. ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿಗೆ ಹೊಡೆದಿದ್ದಾರೆ. ಅದೂ ಪತ್ನಿಯ ವಿಚಾರಕ್ಕೆ.

ಬಿಗ್ ಬಾಸ್​ನಲ್ಲಿ ಸಹ ಸ್ಪರ್ಧಿಯ ಪತ್ನಿಯ ಹೊಗಳಿ ಕೆನ್ನೆಗೆ ಏಟು ತಿಂದ ಸ್ಪರ್ಧಿ
ಅರ್ಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Jul 10, 2024 | 7:31 AM

ಬಿಗ್ ಬಾಸ್’ ರಿಯಾಲಿಟಿ ಶೋ ಆರಂಭ ಆದಾಗಲೆಲ್ಲ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈಗ ‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ರಲ್ಲಿ ವಿವಾದ ಒಂದು ಹುಟ್ಟಿಕೊಂಡಿದೆ. ಸ್ಪರ್ಧಿ ಅರ್ಮಾನ್ ಮಲಿಕ್ ಅವರು ಸಹ ಸ್ಪರ್ಧಿ ವಿಶಾಲೆ ಪಾಂಡೆ ಕೆನ್ನೆಗೆ ಬಾರಿಸಿದ್ದಾರೆ. ಆದಾಗ್ಯೂ ಅವರನ್ನು ಹೊರ ಹಾಕಿಲ್ಲ. ಈ ವಿಚಾರ ಸೊಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಯಾವುದೇ ಸ್ಪರ್ಧಿಯು ಹಲ್ಲೆ ಮಾಡಿದರೆ ಅಂಥವರನ್ನು ಮುಲಾಜಿಲ್ಲದೆ ಹೊರಕ್ಕೆ ಕಳುಹಿಸಲಾಗುತ್ತದೆ. ಆದರೆ, ಅರ್ಮಾನ್ ಮಲಿಕ್ ವಿಚಾರದಲ್ಲಿ ಆ ರೀತಿ ಆಗಿಲ್ಲ.

ಈ ಕಿರಿಕ್ ಆರಂಭ ಆಗಿದ್ದು ಪತ್ನಿಯ ವಿಚಾರಕ್ಕೆ. ವಿಶಾಲ್ ಅವರು ಅರ್ಮಾನ್ ಮಲಿಕ್ ಪತ್ನಿ ಸುಂದರವಾಗಿದ್ದಾರೆ ಎಂದರು. ಇದಕ್ಕೆ ಸಿಟ್ಟಾದ ಅರ್ಮಾನ್ ಅವರು ವಿಶಾಲ್ ಮೇಲೆ ಕಿಡಿಕಾರಿದರು. ಆಗ ವಿಶಾಲ್ ‘ಅತ್ತಿಗೆ ಚೆನ್ನಾಗಿದ್ದಾಳೆ’ ಎಂದರು. ಆಗ ಶುರುವಾಯಿತು ಜಗಳ. ನಂತರ ಇದು ಮಿತಿ ಮೀರಿದೆ. ಈ ವೇಳೆ ಅರ್ಮಾನ್ ಅವರು ವಿಶಾಲ್ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಬಿಗ್ ಬಾಸ್ ಮಂದಿ ಸಮರ್ಥಿಸಿಕೊಂಡಿದ್ದಾರೆ. ‘ನಾನು ಆ ಅರ್ಥದಲ್ಲಿ ಹೇಳಿಲ್ಲ’ ಎಂದಿದ್ದಾರೆ ವಿಶಾಲ್.

‘ಅರ್ಮಾನ್ ಅವರನ್ನು ಹೊರ ಹಾಕಿ’

ಈ ಘಟನೆ ಬಗ್ಗೆ ವಿಶಾಲ್ ಸಹೋದರಿ ನೇಹಾ ಮಾತನಾಡಿದ್ದಾರೆ. ‘ಅರ್ಮಾನ್ ಅವರನ್ನು ಎಲಿಮಿನೇಟ್ ಆಗಬೇಕು. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆ ಆಗುತ್ತದೆ. ಮುಂದಿನ ಸೀಸನ್​ಗಳಲ್ಲಿ ಸ್ಪರ್ಧಿಗಳು ಹಿಂಸೆ ಮಾಡಲು ಬಯಸುತ್ತಾರೆ. ವಿಶಾಲ್ ಅವರು ಸ್ಟ್ರಾಂಗ್ ಆಗಿದ್ದು ಶೋ ಗೆಲ್ಲಲಿ’ ಎಂದು ನೇಹಾ ಆಶಿಸಿದ್ದಾರೆ.

ಇದನ್ನೂ ಓದಿ: ಹೊಸ ಹೋಟೆಲ್ ಆರಂಭಿಸಿದ ಮೈಕಲ್ ಅಜಯ್; ಬಿಗ್ ಬಾಸ್ ಮಂದಿಯ ಬೆಂಬಲ

ಬದಲಾದ ನಿರೂಪಕ

ಬಿಗ್ ಬಾಸ್​ನ ಪ್ರತಿ ಬಾರಿ ಸಲ್ಮಾನ್ ಖಾನ್ ಅವರು ನಡೆಸಿಕೊಡುತ್ತಿದ್ದರು. ಈ ಬಾರಿ ಅನಿಲ್ ಕಪೂರ್ ಅವರು ಶೋನ ನಡೆಸಿಕೊಡುತ್ತಿದ್ದಾರೆ. ಅವರು ವೀಕೆಂಡ್ ಎಪಿಸೋಡ್​ಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಅನೇಕರು ‘ಸಲ್ಮಾನ್ ಖಾನ್ ಅವರೇ ಮರಳಿ ಬರಲಿ’ ಎನ್ನುವ ಬೇಡಿಕೆ ಇಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ