ಅಫ್ಘಾನ್​ ಕ್ರಿಕೆಟರ್​ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್​ ಬಾಸ್​ ಸ್ಪರ್ಧಿ; ತಾಲಿಬಾನ್​ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು

| Updated By: ಮದನ್​ ಕುಮಾರ್​

Updated on: Aug 23, 2021 | 3:46 PM

ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದರು. ಅವರ ಮದುವೆಯ ಕನಸು ಈಗ ಭಗ್ನವಾಗಿದೆ.

ಅಫ್ಘಾನ್​ ಕ್ರಿಕೆಟರ್​ ಜತೆ ಮದುವೆಗೆ ಸಿದ್ಧವಾಗಿದ್ದ ಬಿಗ್​ ಬಾಸ್​ ಸ್ಪರ್ಧಿ; ತಾಲಿಬಾನ್​ ಭಯದಿಂದ ಸಂಬಂಧಕ್ಕೆ ಎಳ್ಳು-ನೀರು
ನಟಿ ಆರ್ಶಿ ಖಾನ್​
Follow us on

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಹಿಡಿತಕ್ಕೆ ಪಡೆದ ನಂತರ ಅಲ್ಲಿನ ವಾತಾವರಣ ಹದಗೆಟ್ಟಿದೆ. ಉಗ್ರರ ಕೈಯಲ್ಲಿ ಅಫ್ಘಾನಿಸ್ತಾನ ನಲುಗುತ್ತಿದೆ. ಇದು ಬೇರೆ ದೇಶದಲ್ಲಿ ಇರುವ ಜನರ ಮೇಲೂ ಪರಿಣಾಮ ಬೀರಿದೆ. ಆಫ್ಘನ್​ ಜೊತೆ ವ್ಯಾಪಾರ-ವಹಿವಾಟು, ಸ್ನೇಹ-ಸಂಬಂಧ ಹೊಂದಿದ್ದ ಎಲ್ಲರೂ ಈಗ ಚಿಂತೆಗೀಡಾಗಿದ್ದಾರೆ. ಅದೇ ರೀತಿ ಖ್ಯಾತ ನಟಿ ಆರ್ಶಿ ಖಾನ್​ ಕೂಡ ಗೊಂದಲಕ್ಕೆ ಸಿಲುಕಿದ್ದಾರೆ. ಅಫ್ಘಾನಿಸ್ತಾನದ ಕ್ರಿಕೆಟ್​ ಆಟಗಾರರೊಬ್ಬರ ಜೊತೆ ಮದುವೆ ಆಗಲು ಆರ್ಶಿ ಖಾನ್​ ನಿರ್ಧರಿಸಿದ್ದರು. ಆದರೆ ಅದು ಈಗ ತಪ್ಪಿಹೋಗುವ ಸಂಭವ ಎದುರಾಗಿದೆ. ಆ ಬಗ್ಗೆ ಸ್ವತಃ ಆರ್ಶಿ ಖಾನ್​ ಮಾತನಾಡಿದ್ದಾರೆ.

ತಾಲಿಬಾನಿಗಳು ಆಫ್ಘನ್​ ಅನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಅಲ್ಲಿನ ಕ್ರಿಕೆಟರ್​ ಒಬ್ಬರ ಜೊತೆ ಆರ್ಶಿಯ ಮದುವೆ ಮಾಡಬೇಕು ಎಂದು ಅವರ ತಂದೆ ನಿರ್ಧರಿಸಿದ್ದರು. ಇದೇ ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ ನೆರವೇರಿಸಲು ಕೂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಈಗ ಅಪ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಅಲ್ಲಿಯ ಹುಡುಗನಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದು ಸೂಕ್ತವಲ್ಲ ಎಂದು ಆರ್ಶಿ ಖಾನ್​ ಪೋಷಕರು ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಆರ್ಶಿಗೆ ಭಾರತೀಯ ಹುಡುಗನನ್ನೇ ಹುಡುಕುವ ಸಾಧ್ಯತೆ ದಟ್ಟವಾಗಿದೆ.

‘ಆತ ಆಫ್ಘನ್​ನ ಕ್ರಿಕೆಟರ್​. ನಮ್ಮ ತಂದೆಯ ಸ್ನೇಹಿತರ ಮಗ. ನಮ್ಮ ಕುಟುಂಬದ ಪೂರ್ವಜರು ಇದ್ದಿದ್ದು ಕೂಡ ಅಫ್ಘಾನಿಸ್ತಾನದಲ್ಲಿ. ನಾವು ಅಫ್ಘಾನಿ ಪಠಾಣರು. ನಮ್ಮ ತಾತ ಆಫ್ಘನ್​ನಿಂದ ಭೊಪಾಲ್​ಗೆ ವಲಸೆ ಬಂದು ಜೈಲರ್​ ಆಗಿದ್ದರು. ಆದರೆ ನನ್ನ ತಂದೆ-ತಾಯಿ ರೀತಿ ನಾನು ಅಪ್ಪಟ ಭಾರತೀಯಳು. ಈಗ ನನ್ನ ಪೋಷಕರು ನನಗೆ ಭಾರತೀಯ ಹುಡುಗನನ್ನೇ ಹುಡುಕುತ್ತಾರೆ ಎಂಬುದು ನನಗೆ ಖಾತ್ರಿ ಆಗಿದೆ’ ಎಂದು ಆರ್ಶಿ ಖಾನ್​ ಹೇಳಿದ್ದಾರೆ.

ಹಿಂದಿ ಕಿರುತೆರೆಯ ಹಲವು ಸೀರಿಯಲ್​ಗಳಲ್ಲಿ ನಟಿಸುವ ಮೂಲಕ ಆರ್ಶಿ ಖಾನ್​ ಫೇಮಸ್​ ಆಗಿದ್ದಾರೆ. ಬಿಗ್​ ಬಾಸ್​ ಸೀಸನ್​ 11ರಲ್ಲೂ ಅವರು ಭಾಗವಹಿಸಿದ್ದರು. ನಂತರ ಸೀಸನ್​ 14ರಲ್ಲಿ ಚಾಲೆಂಜರ್​ ಆಗಿ ದೊಡ್ಮನೆಗೆ ಮರುಪ್ರವೇಶ ಮಾಡಿದ್ದರು. ಅನೇಕ ಮ್ಯೂಸಿಕ್​ ವಿಡಿಯೋಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಆಫ್ಘನ್​ ಹುಡುಗನ ಜೊತೆ ಮದುವೆ ಆಗಬೇಕು ಎಂದುಕೊಂಡಿದ್ದ ಅವರ ಆಸೆಗೆ ಈಗ ಎಳ್ಳು-ನೀರು ಬಿಡಬೇಕಾದ ಸಂದರ್ಭ ಬಂದಿದೆ.

ಇದನ್ನೂ ಓದಿ:

ಅಫ್ಘನ್​ಗಳು ಪ್ರಾಣಭಯದಿಂದ ದೇಶಬಿಟ್ಟು ಪಲಾಯನ ಮಾಡುತ್ತಿದ್ದಾರೆ, ಅಲ್ಲಿನ ಮಹಿಳೆಯರು ನರಕಯಾತನೆ ಅನುಭವಿಸುತ್ತಿದ್ದಾರೆ

ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಬಂದ ಕನ್ನಡಿಗನ ಮನದಾಳದ ಮಾತು