‘ನಮ್ಮ ಹೊಲಕ್ಕೂ ಡ್ರೋನ್ ತಗೊಂಡು ಬರ್ತೀರಾ?’ ಪ್ರತಾಪ್​ನ ಕಾಲೆಳೆದ ತುಕಾಲಿ ಸಂತೋಷ್

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೇ.80ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿ ಅವರಿದ್ದಾರೆ. ಅವರನ್ನು ತುಕಾಲಿ ಸಂತೋಷ್ ಅವರು ಮಾತನಾಡಿಸಲು ಪ್ರಯತ್ನಿಸಿದರು.

‘ನಮ್ಮ ಹೊಲಕ್ಕೂ ಡ್ರೋನ್ ತಗೊಂಡು ಬರ್ತೀರಾ?’ ಪ್ರತಾಪ್​ನ ಕಾಲೆಳೆದ ತುಕಾಲಿ ಸಂತೋಷ್
ಸಂತೋಷ್-ಡ್ರೋನ್ ಪ್ರತಾಪ್

Updated on: Oct 10, 2023 | 8:21 AM

ಡ್ರೋನ್ ಪ್ರತಾಪ್ (Drone Prathap) ಬಗ್ಗೆ ಹುಟ್ಟಿಕೊಂಡ ಟ್ರೋಲ್​ಗಳು ಒಂದೆರಡಲ್ಲ. ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಇದಕ್ಕೆ ಕಾರಣ ಹಲವು. ಅವರು ಹಲವು ವಿಚಾರಗಳಲ್ಲಿ ಸುಳ್ಳು ಹೇಳಿದ್ದರು ಎಂಬುದು ಬಳಿಕ ತಿಳಿದು ಬಂದಿತ್ತು. ಅವರು ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಕರೆದುಕೊಂಡರು. ಈಗ ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಲ್ಲಿ ಪ್ರತಾಪ್ ಅವರನ್ನು ಸಂತೋಷ್ ಕಾಲೆಳೆದಂತೆ ಕಂಡುಬಂತು. ಆ ಬಳಿಕ ಅದರ ಹಿಂದಿನ ನಿಜವಾದ ಉದ್ದೇಶ ತಿಳಿಯಿತು.

ಡ್ರೋನ್ ಪ್ರತಾಪ್ ಅವರು ತಮ್ಮದೇ ಆದ ಆಫೀಸ್ ಆರಂಭಿಸಿದ್ದಾರೆ. ಅಲ್ಲಿ ಡ್ರೋನ್​ಗಳನ್ನು ಇಟ್ಟಿದ್ದಾರೆ. ಕೃಷಿ ಭೂಮಿಗೆ ಔಷಧ ಸಿಂಪಡನೆ ಮಾಡಲೂ ಅವರ ಬಳಿ ಡ್ರೋನ್ ಸಿಗಲಿದೆಯಂತೆ. ಈ ವಿಚಾರವನ್ನು ಅವರು ಯೂಟ್ಯೂಬ್ ಚಾನೆಲ್​ಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಶೇ.80ಕ್ಕಿಂತ ಕಡಿಮೆ ವೋಟ್ ಪಡೆದು ಅಸಮರ್ಥರ ಸಾಲಿನಲ್ಲಿ ಅವರಿದ್ದಾರೆ. ಅವರನ್ನು ತುಕಾಲಿ ಸಂತೋಷ್ ಅವರು ಮಾತನಾಡಿಸಲು ಪ್ರಯತ್ನಿಸಿದರು.

‘ಲೈಫ್ ಹೇಗೆ ಅನಿಸ್ತಿದೆ? ಇತ್ತೀಚೆಗೆ ಬೇರೆ ದೇಶಕ್ಕೆ ಹೋಗಿದ್ರಾ’ ಎಂದು ಪ್ರತಾಪ್​ಗೆ ಸಂತೋಷ್ ಕೇಳಿದರು. ಇದಕ್ಕೆ ಇಲ್ಲ ಎನ್ನುವ ಉತ್ತರ ಅವರ ಕಡೆಯಿಂದ ಬಂತು. ‘ಶಿವಮೊಗ್ಗದಲ್ಲಿ ಡ್ರೋನ್ ಬಿಡ್ತಾ ಇದ್ರಿ’ ಎಂದು ಸಂತೋಷ್ ಹೇಳಿದ ಮಾತಿಗೆ ಅಲ್ಲಿ ಸುತ್ತಮುತ್ತ ಇದ್ದವರು ನಕ್ಕರು. ‘ಡ್ರೋನ್​ನಲ್ಲಿ ಎಷ್ಟು ಲೀಟರ್ ಹಿಡಿಯುತ್ತೆ’ ಎಂದು ಅವರು ಪ್ರಶ್ನೆಯನ್ನು ಮುಂದುವರಿಸಿದರು. ‘11 ಲೀಟರ್​ದು ಇದೆ, 17 ಲೀಟರ್​ದು ಇದೆ ಹಾಗೂ 32 ಲೀಟರ್​ದು ಇದೆ’ ಎಂದು ಗಂಭೀರವಾಗಿ ಉತ್ತರಿಸಿದರು ಪ್ರತಾಪ್.

‘ನಮ್ಮ ಹೊಲಕ್ಕೆ ಡ್ರೋನ್ ತಗೊಂಡು ಬರ್ತೀರಾ’ ಎಂಬ ಸಂತೋಷ್ ಪ್ರಶ್ನೆಗೆ, ಡ್ರೋನ್ ಕಳುಹಿಸಿ ಕೊಡ್ತೀನಿ ಎನ್ನುವ ಉತ್ತರ ಪ್ರತಾಪ್ ಕಡೆಯಿಂದ ಬಂತು. ‘ನೀವೆ ಬನ್ನಿ, ಪರಿಚಯ ಆಗುತ್ತದೆ’ ಎಂದರು ಸಂತೋಷ್. ಆಗಲೂ ಸುತ್ತ ಇದ್ದವರು ನಕ್ಕರು. ‘ಅಯ್ಯೋ, ನಾನು ಗಂಭೀರವಾಗಿಯೇ ಇದ್ದನ್ನು ಹೇಳುತ್ತಿದ್ದೇನೆ. ಅವರು ಮಡಿಕೇರಿ, ಶಿವಮೊಗ್ಗ, ತೀರ್ಥಹಳ್ಳಿಗೆಲ್ಲ ಹೋಗಿದ್ದರು’ ಎಂದು ಸಂತೋಷ್ ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ: ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಸ್ಥಿತಿ ಅತಂತ್ರ: ಆರು ಜನರ ಹಣೆ ಬರಹ ನಿರ್ಧರಿಸಲಿರುವ ಬಿಗ್​ಬಾಸ್

ಮರುದಿನ ಡ್ರೋನ್ ಪ್ರತಾಪ್​ಗೆ ಬುದ್ಧಿವಾದ ಹೇಳುವ ಕೆಲಸವನ್ನು ಸಂತೋಷ್ ಮಾಡಿದರು. ‘ಜನರ ಜೊತೆ ಬೆರೆಯಿರಿ. ಪ್ರತಾಪ್ ಸೂಪರ್ ಆಗಿರಬೇಕು. ನೀವು ಬ್ಯೂಟಿಫುಲ್ ಪರ್ಸನ್. ನನ್ನ ಸ್ಟುಡೆಂಟ್ ನೀವು’ ಎಂದು ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Tue, 10 October 23

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us