Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!

| Updated By: ganapathi bhat

Updated on: Mar 10, 2021 | 11:24 AM

ಇಷ್ಟು ದಿನ ಶಾಂತವಾಗಿದ್ದ ಬಿಗ್​ ಬಾಸ್​ ಮನೆ ಈಗ ರಣಾಂಗಣ ಆಗಿದೆ. ಒಬ್ಬರ ಮೇಲೆ ಇನ್ನೊಬ್ಬರು ಆಕ್ರಮಣ ಮಾಡಿದ್ದು, ಪರಿಸ್ಥಿತಿ ಬೇರೆ ಮಟ್ಟಕ್ಕೆ ಹೋಗಿದೆ.

Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us on

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. 16 ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಪೈಪೋಟಿಯು ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇತರೆ ಸ್ಪರ್ಧಿಗಳ ಮೇಲೆ ಆಕ್ರಮಣ ಮಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಆತಂಕಕಾರಿ ವೈರಸ್​!

9ನೇ ದಿನ ಮನೆಯ ಸದಸ್ಯರಿಗೆ ವೈರಸ್​ ವರ್ಸಸ್​ ಮನುಷ್ಯರು ಎಂಬ ಟಾಸ್ಕ್​ ನೀಡಲಾಯಿತು. ವೈರಸ್​ ಮತ್ತು ಮನುಷ್ಯರು ಎಂದು 2 ತಂಡ ಮಾಡಲಾಯಿತು. ವೈರಸ್​ ಟೀಮ್​ನವರು ಮನುಷ್ಯರ ಮೇಲೆ ದಾಳಿ ಮಾಡಬೇಕು. ಅದರಿಂದ ತಪ್ಪಿಸಿಕೊಳ್ಳಲು ಮನುಷ್ಯರು ಪ್ರಯತ್ನಿಸಬೇಕು. ಒಂದು ವೇಳೆ ವೈರಸ್​ ತಗುಲಿಸಿಕೊಂಡರೆ ಕ್ವಾರಂಟೈನ್​ ಆಗಬೇಕು. ಕ್ವಾರಂಟೈನ್​ ಸಮಯದಲ್ಲಿ ವೈರಸ್​ಗಳು ನೀಡುವ ಶಿಕ್ಷೆಯನ್ನು ಮನುಷ್ಯರು ಅನುಭವಿಸಬೇಕು. ಇದು ಆಟದ ರೂಲ್ಸ್​.

ವೈರಸ್​ ಹೆಸರು ಕೇಳುತ್ತಿದ್ದಂತೆಯೇ ಮನೆಯ ಎಲ್ಲ ಸದಸ್ಯರೂ ಅಲರ್ಟ್ ಆದರು. ಆಟವನ್ನು ಕೂಡ ಅಷ್ಟೇ ಗಂಭೀರವಾಗಿ ತೆಗೆದುಕೊಂಡರು. ಆಟ ಆಡುವ ಭರದಲ್ಲಿ ಕೊಂಚ ಅತಿರೇಕ ಎಂಬಂತೆ ಎಲ್ಲರೂ ವರ್ತಿಸಿದ್ದಾರೆ. ವೈರಸ್​ ವರ್ಸಸ್​ ಮನುಷ್ಯರ ಯುದ್ಧದಲ್ಲಿ ನಿರ್ಮಲಾ ಚೆನ್ನಪ್ಪ ಅವರ ಕುತ್ತಿಗೆಗೆ ನೋವಾಯಿತು. ಶಮಂತ್​ಗೆ ಉಸಿರಾಡಲು ಕಷ್ಟ ಆಗುವ ರೀತಿಯಲ್ಲಿ ಪ್ರಶಾಂತ್​ ಸಂಬರಗಿ ನಡೆದುಕೊಂಡರು. ಆಟ ಮುಖ್ಯವೇ ಹೊರತು ಮನೆಯ ಸದಸ್ಯರ ಸುರಕ್ಷೆ ಮುಖ್ಯವಲ್ಲ ಎಂಬ ಮನೋಭಾವದಲ್ಲಿ ಎಲ್ಲರೂ ದಾಳಿ ಮಾಡಿದರು!

ಕ್ವಾರಂಟೈನ್​ ಶಿಕ್ಷೆ ಅನುಭವಿಸಿದ ಗೀತಾ ಭಾರತಿ ಭಟ್​ ಅವರ ಮುಖಕ್ಕೆ ಡಂಬೆಲ್​ ತಾಗಿ ನೋವಾಯಿತು. ದಿವ್ಯಾ ಉರುಡುಗ ಮುಂತಾದವರಿಗೆ ಪರಚಿದ ಗಾಯಗಳಾಗಿವೆ. ಎಲ್ಲರೂ ಆಟ ಆಡಿದ ರೀತಿ ನೋಡಿದರೆ ಅಲ್ಲೇನೋ ರಿಯಲ್​ ಹೊಡೆದಾಟ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು. ಇದೆಲ್ಲವನ್ನೂ ವೀಕ್ಷಕರು ಉಸಿರು ಬಿಗಿ ಹಿಡಿದು ನೋಡಬೇಕಾಯಿತು! ಈ ಟಾಸ್ಕ್​ನಿಂದಾಗಿ ಒಳಗಿರುವವರ ಅಸಲಿ ಮುಖಗಳು ಅನಾವರಣ ಆಗಿವೆ. ಇಷ್ಟು ದಿನ ಟಾಸ್ಕ್​ ಮುಗಿದ ಬಳಿಕ ಒಂದಾಗುತ್ತಿದ್ದ ಎಲ್ಲರೂ 9ನೇ ದಿನ ಮಾತ್ರ ಟಾಸ್ಕ್​ ನಂತರವೂ ಮುಖ ಗಂಟು ಹಾಕಿಕೊಂಡಿದ್ದರು!

ಇದನ್ನೂ ಓದಿ: Bigg Boss Kannada: ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಆತಂಕಕಾರಿ ವೈರಸ್​? ನಿರ್ಮಲಾ ಚೆನ್ನಪ್ಪ ಅಸ್ವಸ್ಥ

Bigg Boss Kannada: ಮಂಜುಗೆ ‘ಐ ಲವ್​ ಯೂ’ ಎಂದ ದಿವ್ಯಾ ಉರುಡುಗ! ಬಿಗ್​ ಬಾಸ್​ನಲ್ಲಿ ಏನು ನಡೀತಾ ಇದೆ?