AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದರು.

Bigg Boss Kannada: ಬಿಗ್​ ಬಾಸ್​ ಕೊನೆಯ ದಿನ ಶಮಂತ್ ಬ್ರೋ ಗೌಡ​ ಆಸೆಗೆ ಮಣಿದ ಕಣ್ಮಣಿ
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
|

Updated on:May 09, 2021 | 9:36 PM

Share

ಬಿಗ್​ ಬಾಸ್​ ಮನೆಯಲ್ಲಿ ಬೆಳಗ್ಗೆ ನಿತ್ಯ ಒಂದೊಂದು ಸಾಂಗ್ ಹಾಕಲಾಗುತ್ತದೆ. ಈ ಸಾಂಗ್​ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ದಿನ ಆರಂಭವಾಗುತ್ತದೆ. ಸಾಂಗ್​ ಕೇಳುತ್ತಿದ್ದಂತೆ ಮನೆಯವರು ಹಾಸಿಗೆಯಿಂದ ಎದ್ದು ಸ್ಟೆಪ್​ ಹಾಕುತ್ತಾರೆ. ಬಿಗ್​ ಬಾಸ್ ಕೊನೆಯ ದಿನ ದೊಡ್ಮನೆಯಲ್ಲಿ ‘ಬಾ ಗುರು..’ ಸಾಂಗ್​ ಹಾಕಲಾಗಿದೆ. ಈ ಸಾಂಗ್​ ಕೇಳಿ ಶಮಂತ್​ ಫುಲ್​ ಖುಷಿಯಾಗಿದ್ದಾರೆ.

‘ಬಾ ಗುರು..’ ಸಾಂಗ್​ ಅನ್ನು ಶಮಂತ್ ಕಂಪೋಸ್​ ಮಾಡಿದ್ದಾರೆ. ಬಿಗ್​ ಬಾಸ್​ ಮನೆ ಒಳ ಹೋದ ನಂತರ ಮುಂಜಾನೆ ಈ ಹಾಡನ್ನು ಹಾಕುವಂತೆ ಶಮಂತ್​ ಹಲವು ಬಾರಿ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಕ್ಯಾಮೆರಾ ಮುಂದೆ ಬಂದು ಪ್ಲೀಸ್​ ಬಿಗ್​ ಬಾಸ್​ ‘ಬಾ ಗುರು..’ ಸಾಂಗ್​ ಹಾಕಿ ಎಂದು ಕೇಳಿದ್ದರು.

10ನೇ ವಾರಾಂತ್ಯದಲ್ಲಿ ಕಣ್ಮಣಿ ಶಮಂತ್​ಗೆ ಟಾಸ್ಕ್​ ಒಂದನ್ನು ನೀಡಿದ್ದಳು. ಬಿಗ್​ ಬಾಸ್​ ಮನೆಯಲ್ಲಿ 5 ವಿಶೇಷ ಸಾಂಗ್​ ಕಂಪೋಸ್​ ಮಾಡಿ ಹಾಡಿದರೆ ನಿಮ್ಮ ಸಾಂಗ್​ ಪ್ಲೇ ಆಗುತ್ತದೆ ಎಂದಿದ್ದರು. ಅಂತೆಯೇ ಶಮಂತ್​ ತುಂಬಾನೆ ಶ್ರದ್ಧೆಯಿಂದ ಐದು ಹಾಡು ಕಂಪೋಸ್​ ಮಾಡಿ ಹಾಡಿದ್ದಾರೆ.

ಕಂಪೋಸ್​ ಮಾಡಿ ಹಾಡನ್ನು ಒಪ್ಪಿಸಿದ ಮರುದಿನವೂ ಶಮಂತ್​ ಹಾಡು ಬಂದಿಲ್ಲ. ಇದಕ್ಕೆ ಶಮಂತ್​ ತುಂಬಾನೇ ಬೇಸರಗೊಂಡಿದ್ದರು. ಅವರು ಮನೆಯಿಂದ ಹೊರ ಹೋಗುವ ಕೊನೆಯ ದಿನ ಬೆಳಗ್ಗೆ ಶಮಂತ್​ ಕಂಪೋಸ್​ ಮಾಡಿದ ‘ಬಾ ಗುರು..’ ಸಾಂಗ್​ ಹಾಕಲಾಯಿತು. ಈ ಹಾಡನ್ನು ಕೇಳಿ ಶಮಂತ್​ ಸಖತ್​ ಖುಷಿಯಾದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಕೊನೆಗೂ ಈಡೇರಲಿಲ್ಲ ಮಹಿಳಾ ಸ್ಪರ್ಧಿಗಳ ಆ ಕನಸು

Published On - 9:34 pm, Sun, 9 May 21

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ