AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಗೆದ್ದವಗೆ ಶೋ ಮುಗಿದ ಐದು ತಿಂಗಳ ಬಳಿಕ ಬಂತು ಬಹುಮಾನ

ಬಿಗ್​ಬಾಸ್ ಗೆದ್ದವರಿಗೆ ಭಾರಿ ಮೊತ್ತದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಕಾರು ಸೇರಿದಂತೆ ಇನ್ನಿತರೆ ಬಹುಮಾನಗಳನ್ನು ನೀಡಲಾಗುತ್ತದೆ. ಆದರೆ ಇದೆಲ್ಲವೂ ಗೆದ್ದವರನ್ನು ತಲುಪಲು ತಿಂಗಳುಗಳೇ ಬೇಕು. ಬಿಗ್​ಬಾಸ್ ಮುಗಿದ ಐದು ತಿಂಗಳ ಬಳಿಕ ಈಗ ವಿನ್ನರ್​ಗೆ ಬಹುಮಾನಗಳನ್ನು ಹಸ್ತಾಂತರಿಸಲಾಗಿದೆ.

ಬಿಗ್​ಬಾಸ್ ಗೆದ್ದವಗೆ ಶೋ ಮುಗಿದ ಐದು ತಿಂಗಳ ಬಳಿಕ ಬಂತು ಬಹುಮಾನ
ಮಂಜುನಾಥ ಸಿ.
|

Updated on:Jun 01, 2024 | 7:21 PM

Share

ಬಿಗ್​ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಭಾಗವಹಿಸುವವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಲಾಗುತ್ತದೆ. ಜೊತೆಗೆ ಬಿಗ್​ಬಾಸ್ ಗೆದ್ದವರಿಗೂ ಸಹ ಲಕ್ಷಾನುಗಟ್ಟಲೆ ಬಹುಮಾನದ ಮೊತ್ತದ ಜೊತೆಗೆ ಕಾರು ಇನ್ನಿತರೆ ಉಡುಗೊರೆಗಳು ಸಹ ದೊರಕುತ್ತವೆ. ಆದರೆ ಈ ಬಹುಮಾನದ ಮೊತ್ತ, ಕಾರು ಇನ್ನಿತರೆ ಬಹುಮಾನಗಳು ಶೋ ಮುಗಿದ ಕೂಡಲೇ ಬರುವುದಿಲ್ಲ. ಅದಕ್ಕೆ ಬಹಳ ದಿನ ಕಾಯಬೇಕಾಗುತ್ತದೆ. ಬಿಗ್​ಬಾಸ್ ಶೋ ಮುಗಿದ ಐದು ತಿಂಗಳ ಬಳಿಕ ಈಗ ಬಿಗ್​ಬಾಸ್ ವಿನ್ನರ್​ಗೆ ಬಹುಮಾನದ ಮೊತ್ತ, ಕಾರು ಇನ್ನಿತರೆ ಉಡುಗೊರೆಗಳು ದೊರಕಿವೆ. ಅಂದಹಾಗೆ ಈ ವಿನ್ನರ್ ಕನ್ನಡದ ಕಾರ್ತಿಕ್ ಮಹೇಶ್ ಅಲ್ಲ ಬದಲಿಗೆ ತೆಲುಗಿನ ಪಲ್ಲವಿ ಪ್ರಶಾಂತ್.

ತೆಲುಗು ಬಿಗ್​ಬಾಸ್ 7 ರಿಯಾಲಿಟಿ ಶೋ ಭಾರಿ ಜನಪ್ರಿಯತೆ ಗಳಿಸಿತ್ತು. ಈ ಶೋನಲ್ಲಿ ಸಾಮಾನ್ಯ ವ್ಯಕ್ತಿ, ಯುವ ರೈತ ಪಲ್ಲವಿ ಪ್ರಶಾಂತ್ ಸಹ ಭಾಗಿಯಾಗಿದ್ದರು. ಪಲ್ಲವಿ ಪ್ರಶಾಂತ್ ಶೋನಲ್ಲಿ ಅದ್ಭುತವಾಗಿ ಆಡಿದ್ದರು. ಅಲ್ಲದೆ ಅವರಿಗೆ ಭಾರಿ ಜನ ಬೆಂಬಲವೂ ವ್ಯಕ್ತವಾಗಿತ್ತು. ಅಂತಿಮವಾಗಿ ಪಲ್ಲವಿ ಪ್ರಶಾಂತ್ ಬಿಗ್​ಬಾಸ್ ವಿನ್ನರ್ ಆಗಿದ್ದರು. ಅವರಿಗೆ 35 ಲಕ್ಷ ಹಣದ ಚೆಕ್, ಒಂದು ಮಾರುತಿ ಬ್ರೆಜಾ ಕಾರು ಹಾಗೂ ಒಂದು ಚಿನ್ನದ ನೆಕ್ಲೆಸ್ ಉಡುಗೊರೆಯಾಗಿ ನೀಡಲಾಗಿತ್ತು. ವೇದಿಕೆ ಮೇಲೆ ಇದನ್ನು ನೀಡಿದಂತೆ ಮಾಡಿದರಾದರೂ ಯಾವುದೂ ಸಹ ಪಲ್ಲವಿ ಪ್ರಶಾಂತ್ ಕೈಸೇರಿರಲಿಲ್ಲ.

ತೆಲುಗು ಬಿಗ್​ಬಾಸ್ ಸೀಸನ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮುಗಿದಿತ್ತು. ಈಗ ಶೋ ಮುಗಿದ ಐದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ವಿನ್ನರ್ ಪಲ್ಲವಿ ಪ್ರಶಾಂತ್​ಗೆ ಬಹುಮಾನದ ಹಣ, ಕಾರು ಹಾಗೂ ನೆಕ್ಲೆಸ್ ದೊರೆತಿದೆ. 35 ಲಕ್ಷದ ಚೆಕ್, ಹಾಗೂ ನೆಕ್ಲೆಸ್ ಅನ್ನು ಹಿಡಿದು ತಮ್ಮ ಅಪ್ಪ-ಅಮ್ಮನೊಡನೆ ಪಲ್ಲವಿ ಪ್ರಶಾಂತ್ ಫೋಟೊ ಸೆಲ್ಫಿ ತೆಗೆದುಕೊಂಡು ಹಂಚಿಕೊಂಡಿದ್ದಾರೆ. ಇನ್ನು ಕಾರು ತೆಗೆದುಕೊಳ್ಳಲು, ಬಿಗ್​ಬಾಸ್​ ಶೋನಲ್ಲಿ ಅವರಿಗೆ ಆಪ್ತವಾಗಿದ್ದ ಶಿವಾಜಿ ಅವರನ್ನು ಕರೆದುಕೊಂಡು ಹೋಗಿ ಅವರಿಂದಲೇ ಕಾರನ್ನು ಪಡೆದುಕೊಂಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Shehnaaz Gill: ಹಾಟ್ ಅವತಾರದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡ ಬಿಗ್‌ಬಾಸ್ ಬೆಡಗಿ

ಪಲ್ಲವಿ ಪ್ರಶಾಂತ್ ಯುವ ರೈತನಾಗಿದ್ದು, ತಾವು ಹಾಗೂ ತಮ್ಮ ಕುಟುಂಬ ಹೊಲದಲ್ಲಿ ದುಡಿಯುವುದನ್ನು ವ್ಲಾಗ್ ರೀತಿ ಮಾಡಿ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಬಿಗ್​ಬಾಸ್​ಗೆ ಹೋಗಬೇಕೆಂಬ ಆಸೆಯಿಂದ ಹಲವು ಬಾರಿ ವಿಡಿಯೋಗಳಲ್ಲಿ ತಮ್ಮನ್ನು ಬಿಗ್​ಬಾಸ್​ಗೆ ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು. ಕೊನೆಗೆ ಬಿಗ್​ಬಾಸ್ 7 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ಪಲ್ಲವಿ ಪ್ರಶಾಂತ್​ಗೆ ದೊರಕಿತು. ಅದ್ಭುತವಾಗಿ ಆಟವಾಡಿದ ಪಲ್ಲವಿ ಪ್ರಶಾಂತ್ ಬಿಗ್​ಬಾಸ್​ ನಿಂದಾಗಿ ಹೊರಗಿನ ಪ್ರಪಂಚದಲ್ಲಿ ಹೀರೋ ಅಂತಾಗಿದ್ದರು. ಕೊನೆಗೆ ಅವರೇ ಬಿಗ್​ಬಾಸ್ ವಿನ್ನರ್ ಸಹ ಆದರು.

ಇನ್ನು ಕನ್ನಡದ ಬಿಗ್​ಬಾಸ್ ಸೀಸನ್ 10 ಜನವರಿ 28 ಕ್ಕೆ ಅಂತ್ಯವಾಯಿತು. ನಟ ಕಾರ್ತಿಕ್ ಮಹೇಶ್ ವಿಜೇತರಾದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಆದರೆ ಕಾರ್ತಿಕ್​ಗೆ ಬಿಗ್​ಬಾಸ್​ನಿಂದ ಬಹುಮಾನವಾಗಿ ಬರಬೇಕಿದ್ದ ಕಾರು ಇನ್ನೂ ಸಿಕ್ಕಿಲ್ಲ. ಪ್ರತಾಪ್​ಗೆ ಎಲೆಕ್ಟ್ರಿಕ್ ಬೈಕ್ ನೀಡಲಾಯ್ತು. ಆ ಬೈಕ್ ಅನ್ನು ಅವರು ಒಬ್ಬ ಡೆಲಿವರಿ ಯುವಕನಿಗೆ ಉಚಿತವಾಗಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sat, 1 June 24

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ