ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​

| Updated By: ಮದನ್​ ಕುಮಾರ್​

Updated on: Nov 27, 2021 | 9:53 AM

Arbaaz Merchant Viral Video: ಮಕ್ಕಳು ಏನಾದರೂ ತಪ್ಪು ಮಾಡಿ ಸಿಕ್ಕಿಬಿದ್ದರೆ ತಂದೆ-ತಾಯಿ ತಲೆ ತಗ್ಗಿಸುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಆದರೆ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ ಅವರ ತಂದೆಗೆ ಇದೇನೋ ಹೆಮ್ಮೆ ತರುವಂತಹ ಕೃತ್ಯದ ರೀತಿ ಕಾಣಿಸುತ್ತಿದೆ.

ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನ ಜತೆ ಹೆಮ್ಮೆಯಿಂದ ಪೋಸ್​ ಕೊಟ್ಟ ತಂದೆ; ನಗೆಪಾಟಲಿನ ವಿಡಿಯೋ ವೈರಲ್​
ತಂದೆ ಜತೆ ಡ್ರಗ್ಸ್​ ಕೇಸ್​ ಆರೋಪಿ ಅರ್ಬಾಜ್​ ಮರ್ಚೆಂಟ್​
Follow us on

ಮುಂಬೈ ಡ್ರಗ್ಸ್​ ಕೇಸ್ (Drug Case)​ ಸಂಬಂಧಿಸಿದಂತೆ ವಿಚಾರಣೆ ಮುಂದುವರಿದಿದೆ. ಶಾರುಖ್​ ಖಾನ್ (Shah Rukh Khan)​ ಪುತ್ರ ಆರ್ಯನ್​ ಖಾನ್ (Aryan Khan )​ ಸೇರಿದಂತೆ ಅನೇಕ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಕೋರ್ಟ್​ ಆದೇಶದಂತೆ ಅವರೆಲ್ಲರೂ ಎನ್​ಸಿಬಿ ಕಚೇರಿಗೆ ಬಂದು ಸಹಿ ಹಾಕಬೇಕು. ಹಾಗಾಗಿ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ (Arbaaz Merchant) ಕೂಡ ಶುಕ್ರವಾರ (ನ.26) ಎನ್​ಸಿಬಿ ಕಚೇರಿಗೆ ಬಂದಿದ್ದರು. ಆ ವೇಳೆ ಅವರ ತಂದೆ ನಡೆದುಕೊಂಡ ರೀತಿ ಸಿಕ್ಕಾಪಟ್ಟೆ ವಿಚಿತ್ರವಾಗಿತ್ತು. ಮಾಧ್ಯಮಗಳಿಗೆ ಪೋಸ್​ ನೀಡುವಂತೆ ಮಗನಿಗೆ ಅವರು ಒತ್ತಾಯಿಸಿದರು. ಅಲ್ಲದೇ ತಾವು ಕೂಡ ಖುಷಿಖುಷಿಯಿಂದಲೇ ಕ್ಯಾಮೆರಾಗಳಿಗೆ ಪೋಸ್​ ನೀಡಿದರು. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ (Arbaaz Merchant Viral Video) ಆಗುತ್ತಿದೆ. ಅವರ ವರ್ತನೆಯನ್ನು ಅನೇಕರು ಖಂಡಿಸುತ್ತಿದ್ದಾರೆ.

ಮಕ್ಕಳು ಏನಾದರೂ ತಪ್ಪು ಮಾಡಿ ಸಿಕ್ಕಿಬಿದ್ದರೆ ತಂದೆ-ತಾಯಿ ತಲೆ ತಗ್ಗಿಸುವಂತಹ ವಾತಾವರಣ ನಿರ್ಮಾಣ ಆಗುತ್ತದೆ. ಆದರೆ ಡ್ರಗ್ಸ್​ ಪ್ರಕರಣದ ಆರೋಪಿ ಅರ್ಬಾಜ್​​ ಮರ್ಚೆಂಟ್​ ಅವರ ತಂದೆಗೆ ಇದೇನೋ ಹೆಮ್ಮೆ ತರುವಂತಹ ಕೃತ್ಯದ ರೀತಿ ಕಾಣಿಸುತ್ತಿದೆ. ಹಾಗಾಗಿ ಅವರು ಪಾಪರಾಜಿಗಳ ಕ್ಯಾಮೆರಾಗಳಿಗೆ ಪೋಸ್​ ನೀಡುವಂತೆ ಮಗನನ್ನು ಒತ್ತಾಯಿಸಿದರು. ಪುತ್ರನ ಮೈ ಮೇಲೆ ಕೈ ಹಾಕಿ ಅವರು ನಗುನಗುತ್ತಾ ಪೋಸ್​ ನೀಡಿದರು. ಅವರ ವರ್ತನೆಯಿಂದ ಅರ್ಬಾಜ್​​ ಮರ್ಚೆಂಟ್​ಗೆ ಸಿಕ್ಕಾಪಟ್ಟೆ ಕಿರಿಕಿರಿ ಆಯಿತು. ‘ಸ್ಟಾಪ್​ ಇಟ್​’ ಎಂದು ತಂದೆಗೆ ವಾರ್ನಿಂಗ್​ ನೀಡಿ ಅವರು ಕಾರು ಹತ್ತಿ ಹೊರಟು ಹೋದರು.

ಹೇಗಿದೆ ಆರ್ಯನ್​ ಖಾನ್​ ಪರಿಸ್ಥಿತಿ?

ಹುಟ್ಟಿನಿಂದಲೂ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು ಆರ್ಯನ್​ ಖಾನ್​. ಹಾಗಾಗಿ ಅವರಿಗೆ ಜೈಲಿನಲ್ಲಿ ಹೊಂದಿಕೊಳ್ಳಲು ಕಷ್ಟ ಆಗಿತ್ತು. ಜೈಲಿನ ಕಠಿಣ ವಾತಾವರಣವು ಅವರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಕೋರ್ಟ್​ ತೀರ್ಪು ನೀಡುವುದಕ್ಕೂ ಮುನ್ನವೇ ಒಂದು ವರ್ಗದ ಜನರು ಆರ್ಯನ್​ ಖಾನ್​ರನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಇದರಿಂದ ಆರ್ಯನ್​ ಮನಸ್ಸಿಗೆ ಘಾಸಿ ಆಗಿದೆಯಂತೆ. ಆದ್ದರಿಂದ ಮಗನಿಗೆ ಆಪ್ತ ಸಮಾಲೋಚನೆ ಕೊಡಿಸಲು ಗೌರಿ ಖಾನ್​ ನಿರ್ಧರಿಸಿದ್ದಾರೆ. ಪುತ್ರನ ಮಾನಸಿಕ ಆರೋಗ್ಯದ ಬಗ್ಗೆ ಅವರು ಕಾಳಜಿ ವಹಿಸುತ್ತಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ:

Aryan Khan: ಆರ್ಯನ್​ ಖಾನ್​ ಜನ್ಮದಿನ: ಮಧ್ಯರಾತ್ರಿ 12 ಗಂಟೆಗೆ NCB ಅಧಿಕಾರಿಗಳ ಜತೆ ಕಾಲ ಕಳೆದ ಶಾರುಖ್​ ಪುತ್ರ​

‘ಆರ್ಯನ್​ ಖಾನ್​ ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್​ ಗಂಭೀರ ಆರೋಪ

Published On - 9:50 am, Sat, 27 November 21