AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

Boycott Shah Rukh Khan: ಟ್ವಿಟರ್​ನಲ್ಲಿ ಬಾಯ್ಕಾಟ್ ಶಾರುಖ್ ಖಾನ್ ಟ್ರೆಂಡಿಂಗ್ ಆಗಿದೆ. ಹಾಗೆಯೇ ಅಭಿಮಾನಿಗಳಿಂದ ವಿ ಲವ್ ಶಾರುಖ್ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Shah Rukh Khan: ಟ್ವಿಟರ್​ನಲ್ಲಿ ಟ್ರೆಂಡ್ ಆದ ‘ಬಾಯ್ಕಾಟ್ ಶಾರುಖ್ ಖಾನ್’; ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?
ಶಾರುಖ್ ಖಾನ್
TV9 Web
| Edited By: |

Updated on:Sep 16, 2021 | 2:30 PM

Share

ಟ್ವಿಟರ್‌ನಲ್ಲಿ ಬಾಯ್ಕಾಟ್ ಶಾರುಖ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಶಾರುಖ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಆಧರಿಸಿ ನೆಟ್ಟಿಗರು ಶಾರುಖ್​ರನ್ನು ಬಾಯ್ಕಾಟ್ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಪಾಕಿಸ್ತಾನ ಕ್ರಿಕೆಟಿಗರು ವಿಶ್ವದಲ್ಲೇ ಶ್ರೇಷ್ಠ ಆಟಗಾರರು’ ಹಾಗೂ ‘ಪಾಕ್ ಕ್ರಿಕೆಟಿಗರು ಚಾಂಪಿಯನ್‌ಗಳು’ ಎಂದಿದ್ದ ಶಾರುಖ್ ಹೇಳಿಕೆ ಇದೀಗ ವೈರಲ್ ಆಗಿದ್ದು ಅದನ್ನು ಆಧರಿಸಿ ವಿರೋಧ ವ್ಯಕ್ತವಾಗುತ್ತಿದೆ. ಇದರೊಂದಿಗೆ ಶಾರುಖ್ ಇಮ್ರಾನ್ ಖಾನ್ ಅವರೊಂದಿಗೆ ಇದ್ದ ಚಿತ್ರಗಳು ಕೂಡ ವೈರಲ್ ಆಗಿದ್ದು, ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಈ ವಿಷಯದೊಂದಿಗೆ ಶಾರುಖ್ ವಿರುದ್ಧ ಇನ್ನೂ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ನೆಟ್ಟಿಗರು ಬಾಯ್ಕಾಟ್ ಶಾರುಖ್ ಎಂದು ಟ್ವೀಟ್ ಮಾಡುತ್ತಿದ್ದಾರೆ. ‘ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ’ ಎಂಬ ಹೇಳಿಕೆ, ಕರಣ್ ಜೋಹರ್, ಜಾಹ್ನವಿ ಚಿತ್ರಕ್ಕೆ ಬೆಂಬಲ ಸೂಚಿಸಿ ಆದರೆ ಸುಶಾಂತ್ ಸಿಂಗ್ ರಜಪೂತ್ ಚಿತ್ರಕ್ಕೆ ಬೆಂಬಲ ಸೂಚಿಸದಿರುವುದು ಮೊದಲಾದ ವಿಚಾರಗಳೂ ಚರ್ಚೆಯಾಗುತ್ತಿವೆ.

ಸಾಧ್ವಿ ಪ್ರಾಚಿ ಕೂಡ ಶಾರುಖ್ ವಿರುದ್ಧ ಕಿಡಿ ಕಾರಿದ್ದು, ‘ಶಾರುಖ್ ಖಾನ್ ಹಿಂದೂಸ್ತಾನದ ಅನ್ನ ತಿನ್ನುತ್ತಾರೆ. ಆದರೆ ಪಾಕಿಸ್ತಾನದ ಹಾಡು ಹಾಡುತ್ತಾರೆಂದು’ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾರುಖ್ 5 ವರ್ಷದ ಹಿಂದೆ ನೀಡಿದ್ದ ಹೇಳಿಕೆಗಳು ಈಗ ವೈರಲ್ ಆಗಿದ್ದು, ಇದರ ಆಧಾರದಲ್ಲಿ ಅವರ ನೂತನ ಚಿತ್ರ ‘ಪಠಾಣ್’ ಸೇರಿದಂತೆ ಶಾರುಖ್​ಗೆ ಸಂಬಂಧಪಟ್ಟ ವಿಚಾರಗಳಿಗೆ ‘ಬಾಯ್ಕಾಟ್ ಶಾರುಖ್’ ಟ್ರೆಂಡಿಂಗ್ ಆಗಿದೆ.

ಶಾರುಖ್ ಅಭಿಮಾನಿಗಳಿಂದ ವಿ ಲವ್ ಶಾರೂಖ್ ಖಾನ್ ಟ್ರೆಂಡಿಂಗ್: ಟ್ವಿಟರ್ ನಲ್ಲಿ ಬಾಯ್ಕಾಟ್ ಶಾರೂಖ್ ಖಾನ್ ಟ್ರೆಂಡಿಂಗ್​ಗೆ ವಿರುದ್ಧವಾಗಿ ಶಾರುಖ್ ಖಾನ್ ಪರ ಅಭಿಯಾನ ಆರಂಭವಾಗಿದೆ. ‘SRK ಪ್ರೈಡ್ ಆಫ್ ಇಂಡಿಯಾ’, ‘ವಿ ಲವ್ ಶಾರೂಖ್ ಖಾನ್’ ಮೊದಲಾದ ಹ್ಯಾಶ್ ಟ್ಯಾಗ್​ಗಳ ಮುಖಾಂತರ ಅಭಿಮಾನಿಗಳು ಶಾರುಖ್​ಗೆ ಬೆಂಬಲ ಸೂಚಿಸುತ್ತಿದ್ದಾರೆ. ‘ಭಾರತಕ್ಕೆ ಯಾರೇ ಬಂದರೂ ಶಾರೂಖ್ ಖಾನ್ ಭೇಟಿಯಾಗುತ್ತಾರೆ’, ‘ಶಾರೂಖ್ ಖಾನ್ ಭಾರತದ ಹೆಮ್ಮೆಯ ನಟ’, ‘ಭಾರತದ ದಿಗ್ಗಜ‌ ನಟರೆಲ್ಲರೂ ಶಾರೂಖ್ ಖಾನ್ ಅಭಿಮಾನಿಗಳು’, ‘ಶಾರೂಖ್ ಖಾನ್ ಬಡವರು, ಸಂಕಷ್ಟದಲ್ಲಿದ್ದವರಿಗೆ ಸಾಕಷ್ಟು ಹಣ ದಾನ ಮಾಡಿದ್ದಾರೆ’ ಮೊದಲಾದ ವಿಚಾರಗಳನ್ನು ಶಾರುಖ್ ಅಭಿಮಾನಿಗಳು ಪ್ರಸ್ತಾಪಿಸುತ್ತಿದ್ದಾರೆ. ಹಾಗೆಯೇ ಶಾರುಖ್ ಇಮ್ರಾನ್ ಜೊತೆಗಿರುವ ಫೊಟೊ ವೈರಲ್ ಆಗಿದ್ದಕ್ಕೆ ಪ್ರತಿಯಾಗಿ, ಕಪಿಲ್ ದೇವ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಅನೇಕ ಗಣ್ಯರು ಇಮ್ರಾನ್ ಜೊತೆಗಿರುವ ಚಿತ್ರಗಳು ವೈರಲ್ ಆಗುತ್ತಿವೆ.

ಇದಲ್ಲದೇ ಭಾರತಕ್ಕೆ ಬೇರೆ ದೇಶದಿಂದ ಗಣ್ಯ ವ್ಯಕ್ತಿಗಳು ಆಗಮಿಸಿದರೆ ಅವರು ಶಾರುಖ್​ರನ್ನು ಸ್ಮರಿಸಿಕೊಳ್ಳುತ್ತಾರೆ ಎಂದೂ ಅಭಿಮಾನಿಗಳು ಸಮರ್ಥನೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ, ‘ಬರಾಕ್ ಒಬಾಮ ದೆಹಲಿಗೆ ಬಂದಾಗ ಡಿಡಿಎಲ್​ಜೆ ಸಿನಿಮಾದ ಬಡೇ ಬಡೇ ದೇಶೋ ಮೇ ಡೈಲಾಗ್ ಹೇಳಿದ ಸಂದರ್ಭ’, ‘ಡೊನಾಲ್ಡ್ ಟ್ರಂಪ್ ಕೂಡ ಶಾರೂಖ್ ಖಾನ್ ಹೆಸರು ಹೇಳಿದ ಘಟನೆ’ ಸೇರಿದಂತೆ, ‘ಅನಾಥ ಮಕ್ಕಳಿಗೆ ಶಾರೂಖ್ ಖಾನ್ ಚಿಕಿತ್ಸೆ ಕೊಡಿಸಿದ ಉದಾಹರಣೆ’, ‘ಕೊರೊನಾ ಕಾಲದಲ್ಲಿ ತಮ್ಮ ಕಚೇರಿಯನ್ನು ಕ್ವಾರಂಟೈನ್ ಸೆಂಟರ್ ಮಾಡಿದ ವಿಚಾರ’ ಮೊದಲಾದ ಅಂಶಗಳನ್ನು ಪ್ರಸ್ತಾಪಿಸಿ ಶಾರುಖ್​ರನ್ನು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ‘ಬಾಯ್ಕಾಟ್ ಶಾರುಖ್​ಗೆ ಪ್ರತಿಯಾಗಿ, ಅಭಿಮಾನಿಗಳಿಂದ ‘SRK ಪ್ರೈಡ್ ಆಫ್ ಇಂಡಿಯಾ’ ಹಾಗೂ ‘ವಿ ಲವ್ ಶಾರುಖ್’ ಟ್ರೆಂಡಿಂಗ್ ಆಗಿವೆ.

ಇದನ್ನೂ ಓದಿ:

ಪದೇ ಪದೇ ಮದ್ದೂರಿಗೆ ಭೇಟಿ: ಅಭಿಷೇಕ್ ಅಂಬರೀಶ್ ಮದ್ದೂರಿನಲ್ಲಿ ಚುನಾವಣೆಗೆ ನಿಲ್ತಾರಾ?

ನರೇಂದ್ರ ಮೋದಿ, ಅಕ್ಷಯ್, ರಜನಿಕಾಂತ್ ಸಾಲಿನಲ್ಲಿ ಅಜಯ್ ದೇವಗನ್, ವಿಕ್ಕಿ ಕೌಶಲ್; ಏನಿದು ಸಮಾಚಾರ?

(Boycott Shah Rukh Khan and we love Shah Rukh are trending on twitter here is the reason)

Published On - 11:37 am, Thu, 16 September 21

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ