Farhan Akhtar: ದೀಪಾವಳಿ ಆಚರಿಸಿದ ಫರ್ಹಾನ್​ ಅಖ್ತರ್​ ವಿರುದ್ಧ ದ್ವೇಷ ಕಾರುತ್ತಿರುವ ಒಂದು ವರ್ಗದ ನೆಟ್ಟಿಗರು

Deepavali 2021: ಸ್ನೇಹಿತರ ಜೊತೆ ಸೇರಿ ದೀಪಾವಳಿ ಹಬ್ಬ ಆಚರಿಸಿದ ಫೋಟೋಗಳನ್ನು ಫರ್ಹಾನ್​ ಅಖ್ತರ್​ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ ಕಮೆಂಟ್​ ಮಾಡುತ್ತಿರುವ ಒಂದು ವರ್ಗದ ನೆಟ್ಟಿಗರು ದ್ವೇಷ ಕಾರುತ್ತಿದ್ದಾರೆ.

Farhan Akhtar: ದೀಪಾವಳಿ ಆಚರಿಸಿದ ಫರ್ಹಾನ್​ ಅಖ್ತರ್​ ವಿರುದ್ಧ ದ್ವೇಷ ಕಾರುತ್ತಿರುವ ಒಂದು ವರ್ಗದ ನೆಟ್ಟಿಗರು
ಫರ್ಹಾನ್​ ಅಖ್ತರ್
Follow us
| Updated By: ಮದನ್​ ಕುಮಾರ್​

Updated on:Nov 05, 2021 | 10:23 AM

ಬಾಲಿವುಡ್​ನ ಖ್ಯಾತ ನಟ ಫರ್ಹಾನ್​ ಅಖ್ತರ್​ ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ದೀಪಾವಳಿ ಆಚರಿಸಿ ಕೆಲವರ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಮುಸ್ಲಿಂ ಧರ್ಮದವರಾದ ಫರ್ಹಾನ್​ ಅಖ್ತರ್​ ಅವರು ದೀಪಾವಳಿ ಹಬ್ಬ ಆಚರಿಸಿದ್ದು ಸರಿಯಲ್ಲ ಎಂಬುದು ಒಂದು ವರ್ಗದ ನೆಟ್ಟಿಗರ ವಾದ. ಹಾಗಾಗಿ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗುತ್ತಿದೆ.

ತಮ್ಮ ನೇರ ನಡೆ-ನುಡಿಗಳಿಂದ ಗುರುತಿಸಿಕೊಂಡವರು ಫರ್ಹಾನ್​ ಅಖ್ತರ್​. ತಮಗೆ ಸರಿ ಎನಿಸಿದ್ದನ್ನು ಅವರು ಮಾಡುತ್ತಾರೆ. ಆ ಕಾರಣಕ್ಕಾಗಿ ಪದೇಪದೇ ಅವರು ಟ್ರೋಲಿಗರಿಗೆ ಆಹಾರ ಆಗುತ್ತಾರೆ. ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸೆಲೆಬ್ರೇಟ್​ ಮಾಡಲಾಗುತ್ತಿದೆ. ಅದೇ ರೀತಿ ಫರ್ಹಾನ್​ ಅಖ್ತರ್​ ಕೂಡ ತಮ್ಮ ‘ಎಕ್ಸೆಲ್​ ಎಂಟರ್​ಟೇ ನ್​ಮೆಂಟ್​’ ಕಚೇರಿಯಲ್ಲಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಪ್ರೇಯಸಿ ಶಿಬಾನಿ ದಂಡೇಕರ್​, ಬ್ಯುಸಿನೆಸ್​ ಪಾರ್ಟ್ನರ್​ ರಿತೇಶ್​​ ಸಿದ್ವಾನಿ, ರಿತೇಶ್ ಪತ್ನಿ ಡಾಲಿ ಸಿದ್ವಾನಿ ಮುಂತಾದವರು ಹಬ್ಬದ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಹಿಂದುಗಳ ಹಬ್ಬವನ್ನು ಫರ್ಹಾನ್​ ಅಖ್ತರ್​ ಆಚರಿಸಿರುವುದಕ್ಕೆ ಕೆಲವರು ಕಿಡಿಕಾರುತ್ತಿದ್ದಾರೆ.

ಕಮೆಂಟ್​ಗಳ ಮೂಲಕ ಫರ್ಹಾನ್​ ಅಖ್ತರ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ‘ಇವರ ಅಪ್ಪ (ಜಾವೇದ್​ ಅಖ್ತರ್​) ಯಾವ ಧರ್ಮವನ್ನೂ ನಂಬುವುದಿಲ್ಲ. ಆದರೆ ಇಲ್ಲಿ ಇವನು ಡ್ರಾಮಾ ಮಾಡುತ್ತಿದ್ದಾನೆ’ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ‘ಒಬ್ಬ ಮುಸ್ಲಿಂ ಆಗಿ ನೀನು ಮಾಡುತ್ತಿರುವುದೇನು?’ ಎಂದು ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ‘ಈತ ಹೆಸರಿಗೆ ಮಾತ್ರ ಮುಸ್ಲಿಂ’ ಎಂದು ಕುಹಕಿಸಿ ಕೆಲವರು ಕಮೆಂಟ್​ ಮಾಡಿದ್ದಾರೆ.

ಈ ರೀತಿ ಟ್ರೋಲ್​ಗೆ ಒಳಗಾಗಿರುವುದು ಫರ್ಹಾನ್​ ಅಖ್ತರ್​ ಮಾತ್ರವಲ್ಲ. ಈ ಹಿಂದೆ ಅನೇಕ ಸೆಲೆಬ್ರಿಟಿಗಳನ್ನು ಇದೇ ಕಾರಣಕ್ಕಾಗಿ ಟ್ರೋಲ್​ ಮಾಡಲಾಗಿತ್ತು. ಶಾರುಖ್​ ಖಾನ್​ ಮನೆಯಲ್ಲಿ ದೀಪಾವಳಿ ಆಚರಿಸಿದಾಗಲೂ ಇದೇ ರೀತಿಯ ಕಮೆಂಟ್​ಗಳು ಬರುತ್ತವೆ. ಸೈಫ್​ ಅಲಿ ಖಾನ್​ ಅವರು ಈ ವರ್ಷ ಗಣಪತಿ ಹಬ್ಬ ಆಚರಿಸಿದ್ದರು. ಗಣಪತಿ ವಿಗ್ರಹಕ್ಕೆ ಅವರು ಕೈ ಮುಗಿಯುತ್ತಿರುವ ಫೋಟೋವನ್ನು ಕರೀನಾ ಕಪೂರ್​ ಶೇರ್​ ಮಾಡಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿದ್ದ ಅನೇಕರು ಖಾರದ ಮಾತುಗಳಿಂದ ನಿಂದಿಸಿದ್ದರು.

ಇದನ್ನೂ ಓದಿ: 

ಅಭಿಮಾನಿಗಳಿಗೆ ರಶ್ಮಿಕಾ ದೀಪಾವಳಿ ವಿಶ್ ಮಾಡಿದ್ದು ಹೇಗೆ?

ಮೇಘನಾ ಸರ್ಜಾ ಮಗ ರಾಯನ್ ದೀಪಾವಳಿ ವಿಶ್

Published On - 9:59 am, Fri, 5 November 21

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ