AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಕಷ್ಟ ಅನುಭವಿಸಿದ್ದೆ ಎಂದಲ್ಲ ಹೇಳಲ್ಲ’; ಚಿನ್ನದ ಸ್ಪೂನ್ ಹಿಡಿದು ಹುಟ್ಟಿದ ಅಮಿತಾಭ್ ಮೊಮ್ಮಗಳ ಮಾತು

ಬಹುತೇಕ ಸ್ಟಾರ್ ಕಿಡ್​ಗಳ ಜೀವನ ಸೆಟಲ್ ಆಗಿರುತ್ತದೆ. ಸ್ಟಾರ್ ಕಿಡ್ ಅನನ್ಯಾ ಪಾಂಡೆ ಅವರು ‘ನಾನು ಚಿತ್ರರಂಗಕ್ಕೆ ಬರುವಾಗ ಸಾಕಷ್ಟು ಕಷ್ಟ ಅನುಭವಿಸಿದೆ’ ಎಂದು ಹೇಳಿ ಟ್ರೋಲ್ ಆಗಿದ್ದರು. ಆದರೆ, ನವ್ಯಾ ನವೇಲಿ ಆ ರೀತಿ ಅಲ್ಲ. ಅವರು ಇರುವ ವಿಚಾರವನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ.

‘ನಾನು ಕಷ್ಟ ಅನುಭವಿಸಿದ್ದೆ ಎಂದಲ್ಲ ಹೇಳಲ್ಲ’; ಚಿನ್ನದ ಸ್ಪೂನ್ ಹಿಡಿದು ಹುಟ್ಟಿದ ಅಮಿತಾಭ್ ಮೊಮ್ಮಗಳ ಮಾತು
ನವ್ಯಾ-ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Sep 22, 2023 | 2:41 PM

Share

ಸೆಲೆಬ್ರಿಟಿಗಳ ಮಕ್ಕಳು ಎಂದರೆ ಸಾಕು ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಗುತ್ತದೆ. ಆದರೆ, ಎಲ್ಲಾ ಸೆಲೆಬ್ರಿಟಿ ಮಕ್ಕಳು ಸಿನಿಮಾ ಮಾಡೋಕೆ ಇಷ್ಟಪಡುವುದಿಲ್ಲ. ಕೆಲವರು ನಟನೆ ಬಿಟ್ಟು ಉದ್ಯಮದ ಕಡೆ ಮುಖ ಮಾಡಿದ್ದಿದೆ. ಅಮಿತಾಭ್ ಬಚ್ಚನ್ ಮೊಮ್ಮೊಗಳು, ಶ್ವೇತಾ ಬಚ್ಚನ್ ಮಗಳು ನವ್ಯಾ ನವೇಲಿ ಅವರು ಉದ್ಯಮದ ಕಡೆ ಒಲವು ಹೊಂದಿದ್ದಾರೆ. ಅವರು ಎನ್​ಜಿಒ ಕೂಡ ನಡೆಸುತ್ತಿದ್ದಾರೆ. ಅವರು ತಮ್ಮ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಯಾವುದೇ ಕಷ್ಟ ಅನುಭವಿಸಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಬಹುತೇಕ ಸ್ಟಾರ್ ಕಿಡ್​ಗಳ ಜೀವನ ಸೆಟಲ್ ಆಗಿರುತ್ತದೆ. ಸ್ಟಾರ್ ಕಿಡ್ ಅನನ್ಯಾ ಪಾಂಡೆ ಅವರು ‘ನಾನು ಚಿತ್ರರಂಗಕ್ಕೆ ಬರುವಾಗ ಸಾಕಷ್ಟು ಕಷ್ಟ ಅನುಭವಿಸಿದೆ’ ಎಂದು ಹೇಳಿ ಟ್ರೋಲ್ ಆಗಿದ್ದರು. ಆದರೆ, ನವ್ಯಾ ನವೇಲಿ ಆ ರೀತಿ ಅಲ್ಲ. ಅವರು ಇರುವ ವಿಚಾರವನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ. ಈ ಮೂಲಕ ಮೆಚ್ಚುಗೆ ಪಡೆದಿದ್ದಾರೆ.

ನವ್ಯಾ ಅವರು ಎನ್​ಜಿಒ ನಡೆಸುತ್ತಿದ್ದಾರೆ. ಇದರ ಜೊತೆಗೆ ತಂದೆಯ ಉದ್ಯಮಕ್ಕೂ ಸಹಾಯ ಮಾಡುತ್ತಿದ್ದಾರೆ. ಅವರು ನಿಖಿಲ್ ಕಾಮತ್ ಅವರ ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ್ದಾರೆ. ‘ನನಗೆ ಕಷ್ಟದ ದಿನಗಳು ಇದ್ದವು ಎಂದು ನಾನು ಹೇಳಲಾರೆ. ನನಗೆ ಅದರ ಅನುಭವವೇ ಆಗಿಲ್ಲ. ನಾನು ಶಿಕ್ಷಣ ಮುಗಿಸುವಾಗ 21 ವರ್ಷ. ನನಗೆ ಇದನ್ನು ಮಾಡಬೇಕು ಎಂದು ನಾನು ಹೇಳಿದೆ. ಅದು ಹಾಗೆಯೇ ಆಯಿತು. ಇಷ್ಟು ಸುಲಭದಲ್ಲಿ ಯಾರಿಗೂ ಅವಕಾಶ ಸಿಗುವುದಿಲ್ಲ’ ಎಂದಿದ್ದಾರೆ ನವ್ಯಾ.

‘ನನಗೆ ದೊಡ್ಡ ಅಡ್ವಾಂಟೇಜ್ ಇದೆ. ಎಲ್ಲವನ್ನೂ ನಾನು ತುಂಬಾ ಸುಲಭವಾಗಿ ಪಡೆದಿದ್ದೆನೆ. ಅದರೊಂದಿಗೆ ಒಂದಷ್ಟು ಒತ್ತಡಗಳು ಬರುತ್ತವೆ. ಆದರೆ ನಾನು ಅದರ ಬಗ್ಗೆ ದೂರಲಾರೆ’ ಎಂದಿದ್ದಾರೆ ನವ್ಯಾ. ಅವರು ಇಷ್ಟು ಪ್ರಬುದ್ಧರಾಗಿ ಮಾತನಾಡಿದ್ದು ಅನೇಕರಿಗೆ ಇಷ್ಟವಾಗಿದೆ.

ಇದನ್ನೂ ಓದಿ: ‘ಇಂಡಿಯಾ’ ಹೆಸರು ಬದಲಾವಣೆ ಚರ್ಚೆ ಬೆನ್ನಲ್ಲೇ ‘ಭಾರತ್​ ಮಾತಾ ಕಿ ಜೈ’ ಎಂದ ಅಮಿತಾಭ್​ ಬಚ್ಚನ್​

ಅಮಿತಾಭ್ ಮಗಳು ಶ್ವೇತಾ. ಅವರು ಉದ್ಯಮಿ ನಿಖಿಲ್ ನಂದಾ ಅವರನ್ನು ವಿವಾಹ ಆದರು. ನವ್ಯಾ ಅವರು 12ನೇ ತರಗತಿವರೆಗೆ ದೆಹಲಿಯಲ್ಲಿ ಶಿಕ್ಷಣ ಪಡೆದರು. ಆ ಬಳಿಕ ಇಂಗ್ಲೆಂಡ್ ಹಾಗೂ ಅಮೆರಿಕದಲ್ಲಿ ಅವರು ಶಿಕ್ಷಣ ಪಡೆದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!