ಬಿಗ್​ ಬಜೆಟ್​ ಹಿಂದಿ ಚಿತ್ರದಿಂದ ರಣವೀರ್​ ಸಿಂಗ್​ ಔಟ್​; ಅಲ್ಲು ಅರ್ಜುನ್​, ಜೂ. ಎಟಿಆರ್​ಗೆ ಚಾನ್ಸ್​?

|

Updated on: Apr 16, 2023 | 10:49 AM

ಟಾಲಿವುಡ್​ನ ಸ್ಟಾರ್​ ನಟರಿಗೆ ಈಗ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಾಗಿದೆ. ಒಂದು ಬಹುನಿರೀಕ್ಷಿತ ಸಿನಿಮಾಗೆ ಹಿಂದಿ ಹೀರೋಗಳ ಬದಲು ಅಲ್ಲು ಅರ್ಜುನ್​ ಮತ್ತು ಜೂ. ಎನ್​ಟಿಆರ್​ ಅವರನ್ನು ಪರಿಗಣಿಸಲಾಗುತ್ತಿದೆ.

ಬಿಗ್​ ಬಜೆಟ್​ ಹಿಂದಿ ಚಿತ್ರದಿಂದ ರಣವೀರ್​ ಸಿಂಗ್​ ಔಟ್​; ಅಲ್ಲು ಅರ್ಜುನ್​, ಜೂ. ಎಟಿಆರ್​ಗೆ ಚಾನ್ಸ್​?
ಜೂ. ಎನ್​ಟಿಆರ್​, ರಣವೀರ್​ ಸಿಂಗ್​, ಅಲ್ಲು ಅರ್ಜುನ್​
Follow us on

ನಟ ರಣವೀರ್​ ಸಿಂಗ್​ (Ranveer Singh) ಅವರಿಗೆ ಈಗ ಟೈಮ್​ ಚೆನ್ನಾಗಿಲ್ಲ. ಒಂದಷ್ಟು ವರ್ಷಗಳ ಹಿಂದೆ ‘ಪದ್ಮಾವತ್​’, ‘ಬಾಜಿರಾವ್​ ಮಸ್ತಾನಿ’ ಮುಂತಾದ ಸೂಪರ್​ ಹಿಟ್​ ಸಿನಿಮಾ ನೀಡಿದ್ದ ಅವರು ಇತ್ತೀಚೆಗಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿದ್ದಾರೆ. ‘83’, ‘ಜಯೇಶ್​ ಭಾಯ್​ ಜೋರ್ದಾರ್​’, ‘ಸರ್ಕಸ್​’ ಸಿನಿಮಾಗಳ ಮೂಲಕ ಅವರು ಹ್ಯಾಟ್ರಿಕ್​ ಸೋಲು ಕಂಡಿದ್ದಾರೆ. ಇದರಿಂದ ಅವರ ವೃತ್ತಿಜೀವನದ ಮೇಲೆ ಹೊಡೆತ ಬಿದ್ದಿದೆ. ಮೂಲಗಳ ಪ್ರಕಾರ ರಣವೀರ್​ ಸಿಂಗ್​ ನಟಿಸಬೇಕಿದ್ದ ಒಂದು ಬಿಗ್​ ಬಜೆಟ್​ ಪ್ರಾಜೆಕ್ಟ್​ ಈಗ ತೆಲುಗು ನಟರ ಪಾಲಾಗುತ್ತಿದೆ. ರಣವೀರ್​ ಸಿಂಗ್​ ಬದಲಿಗೆ ಜೂನಿಯರ್​ ಎನ್​ಟಿಆರ್​ (Jr NTR) ಅಥವಾ ಅಲ್ಲು ಅರ್ಜುನ್​ (Allu Arjun) ಅವರು ಅವಕಾಶ ಬಾಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಲಿವುಡ್​ ಮತ್ತು ಟಾಲಿವುಡ್​ ಅಂಗಳದಲ್ಲಿ ಗುಸುಗುಸು ಕೇಳಿಬಂದಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಸಿನಿಮಾಗೆ ವಿಕ್ಕಿ ಕೌಶಲ್​ ಹೀರೋ ಆಗಬೇಕಿತ್ತು. ಆದರೆ ಅವರನ್ನು ಚಿತ್ರದಿಂದ ಹೊರಗಿಡಲಾಯಿತು. ಬಳಿಕ ರಣವೀರ್​ ಸಿಂಗ್​ ಹೆಸರು ಕೇಳಿಬಂತು. ಈಗ ಅವರೂ ಕೂಡ ಚಿತ್ರತಂಡದಿಂದ ಔಟ್​ ಆಗಿದ್ದಾರೆ ಎನ್ನಲಾಗುತ್ತಿದೆ. ರಣವೀರ್​ ಸಿಂಗ್​ ಬದಲಿಗೆ ಟಾಲಿವುಡ್​ ನಟರಿಗೆ ಮಣೆಹಾಕಲು ನಿರ್ಧರಿಸಲಾಗುತ್ತಿದೆ.

ಇದನ್ನೂ ಓದಿ: ರಣವೀರ್​ ಸಿಂಗ್​ ನಟನೆಯ ‘ಸರ್ಕಸ್​’ ಕರಾಬು ಎಂದ ಫ್ಯಾನ್ಸ್​; ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ

ಇದನ್ನೂ ಓದಿ
‘ಸೈಮಾ’ ಅವಾರ್ಡ್ಸ್​ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಅಲ್ಲು ಅರ್ಜುನ್​; ವಿಡಿಯೋ ನೋಡಿ
Pushpa 2: ಮತ್ತೆ ಫೀಲ್ಡ್​ಗೆ ಇಳಿದ ಪುಷ್ಪರಾಜ್​; ಇಲ್ಲಿದೆ ರಶ್ಮಿಕಾ, ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​
Allu Arjun: ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್​ ಲುಕ್​ ಹೀಗಿರುತ್ತಾ? ವೈರಲ್​ ಆಗಿದೆ ಹೊಸ ಫೋಟೋ
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​

ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಪೈಪೋಟಿ ನೀಡಲು ಜಿಯೋ ಸ್ಟುಡಿಯೋಸ್​ ಸಜ್ಜಾಗಿದೆ. ಹಲವು ಪ್ರಾಜೆಕ್ಟ್​ಗಳನ್ನು ಈ ಸಂಸ್ಥೆ ಘೋಷಿಸಿದೆ. ಬಹುನಿರೀಕ್ಷಿತ ‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಸಿನಿಮಾವನ್ನು ಈ ಸಂಸ್ಥೆ ನಿರ್ಮಾಣ ಮಾಡಲಿದೆ. ಮೊದಲು ಬೇರೆ ನಿರ್ಮಾಪಕರು ಇದ್ದರು. ಆದರೆ ಹಣಕಾಸಿನ ತೊಂದರೆಯಿಂದ ಅವರು ಹಿಂದೆ ಸರಿದ ಬಳಿಕ ಈ ಸಿನಿಮಾವನ್ನು ನಿರ್ಮಿಸುವ ಹೊಣೆಯನ್ನು ಜಿಯೋ ಸ್ಟುಡಿಯೋಸ್ ಹೊತ್ತುಕೊಂಡಿದೆ.

ಇದನ್ನೂ ಓದಿ: ರಣವೀರ್​ ಸಿಂಗ್​-ದೀಪಿಕಾ ಬೇರೆ ಆಗ್ತಾರಾ? ಫ್ಯಾನ್ಸ್​ ಆತಂಕಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್​

‘ದಿ ಇಮ್ಮಾರ್ಟಲ್​ ಅಶ್ವತ್ಥಾಮ’ ಚಿತ್ರಕ್ಕೆ ‘ಉರಿ’ ಸಿನಿಮಾ ಖ್ಯಾತಿಯ ಅದಿತ್ಯ ಧಾರ್​ ಅವರು ನಿರ್ದೇಶನ ಮಾಡಲಿದ್ದಾರೆ. ಹೀರೋ ಆಯ್ಕೆಯ ವಿಚಾರದಲ್ಲಿ ಅವರ ಮತ್ತು ನಿರ್ಮಾಣ ಸಂಸ್ಥೆ ನಡುವೆ ಚಕಮಕಿ ನಡೆಯುತ್ತಿದೆ. ಜೂನಿಯರ್​ ಎನ್​ಟಿಆರ್​ ಅಥವಾ ಅಲ್ಲು ಅರ್ಜುನ್​ ಹೀರೋ ಆಗಿ ನಟಿಸಿದರೆ ಉತ್ತಮ ಎಂಬುದು ನಿರ್ಮಾಣ ಸಂಸ್ಥೆಯ ಅಭಿಪ್ರಾಯ ಎನ್ನಲಾಗಿದೆ. ಅಂತಿಮವಾಗಿ ಯಾರು ಆಯ್ಕೆ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ‘ವಾರ್​ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್​ಟಿಆರ್

‘ಪುಷ್ಪ’ ಸಿನಿಮಾದ ಗೆಲುವಿನ ಬಳಿಕ ಅಲ್ಲು ಅರ್ಜುನ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಅದೇ ರೀತಿ ‘ಆರ್​ಆರ್​ಆರ್​’ ಸಿನಿಮಾ ಸೂಪರ್​ ಹಿಟ್​ ಆಗಿ, ಆಸ್ಕರ್​ ಪ್ರಶಸ್ತಿಯನ್ನೂ ಬಾಚಿಕೊಂಡ ಬಳಿಕ ಜೂನಿಯರ್​ ಎನ್​ಟಿಆರ್​ ಖ್ಯಾತಿ ಹೆಚ್ಚಾಗಿದೆ. ಈ ಸ್ಟಾರ್​ ನಟರಿಗೆ ಈಗ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Sun, 16 April 23