Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹರ್ ಪಾಲಿಸುವ ಸೂತ್ರವಿದು

Movie Production: ಕರಣ್ ಜೋಹರ್ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ನಷ್ಟ ರಹಿತವಾಗಿ ಸಿನಿಮಾ ನಿರ್ಮಿಸುವುದಕ್ಕೆ ಕರಣ್ ಕಂಡುಕೊಂಡಿರುವ ಸೂತ್ರವಿದು.

ನಷ್ಟ ಆಗದಂತೆ ಸಿನಿಮಾ ನಿರ್ಮಾಣ ಮಾಡುವುದು ಹೇಗೆ? ಕರಣ್ ಜೋಹರ್ ಪಾಲಿಸುವ ಸೂತ್ರವಿದು
ಕರಣ್ ಜೋಹರ್
Follow us
ಮಂಜುನಾಥ ಸಿ.
|

Updated on: May 03, 2023 | 8:37 AM

ಬಾಲಿವುಡ್ (Bollywood) ಬ್ಯಾಡ್ ಬಾಯ್​ಗಳ ಪಟ್ಟಿಯಲ್ಲಿ ಕರಣ್ ಜೋಹರ್ (Karan Johar) ಹೆಸರೂ ಕೇಳಿ ಬರುತ್ತದೆ. ಪಾರ್ಟಿ ಫ್ಲೀಕ್, ತನ್ನ ಶೋನಲ್ಲಿ ಇತರರ ಲೈಂಗಿಕತೆ ಬಗ್ಗೆ ಅನವಶ್ಯಕ ಕುತೂಹಲ ತೋರುವ ಮಾತುಗಳನ್ನಾಡುವುದು, ವಯಸ್ಸಿಗೆ ಅತಿಎನಿಸುವ ಫ್ಯಾಷನ್ ಮಾಡುವುದು, ನೆಪೊಟಿಸಮ್​ಗೆ ಭರಪೂರ ಬೆಂಬಲ ನೀಡುವುದು ಹೀಗೆ ಕರಣ್ ಜೋಹರ್ ಮೇಲೆ ಹಲವು ಆರೋಪಗಳಿವೆ. ಇವೆಲ್ಲವುಗಳ ನಡುವೆ ಕರಣ್ ಜೋಹರ್ ಬಾಲಿವುಡ್​ನ ಒಬ್ಬ ಟಾಪ್ ಬ್ಯುಸಿನೆಸ್​ಮ್ಯಾನ್. ಶಾರುಖ್ ಖಾನ್ ಸೇರಿದಂತೆ ಹಲವರು ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಬ್ಯುಸಿನೆಸ್ (Business) ವಿಷಯಕ್ಕೆ ಬಂದರೆ ಕರಣ್ ಜೋಹರ್ ಬಹಳ ಕಟ್ಟುನಿಟ್ಟು.

ತಂದೆ ನಿಧನ ಬಳಿಕ ಕರಣ್ ಕೈಗೆ ಬಂದ ಧರ್ಮಾ ಪ್ರೊಡಕ್ಷನ್ ಅನ್ನು ಅವರು ಬೆಳೆಸಿದ ರೀತಿ ಅದ್ಭುತ. ಕರಣ್ ಜೋಹರ್ ಇತ್ತೀಚೆಗೆ ಬ್ಯುಸಿನೆಸ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾವು ಸಿನಿಮಾ ಒಂದನ್ನು ನಿರ್ಮಿಸುವಾಗ ಹಾಕುವ ಲೆಕ್ಕಾಚಾರಗಳೇನು? ಎಂಬ ಬಗ್ಗೆ ವಿವರಿಸಿದ್ದಾರೆ.

ಕರಣ್ ಜೋಹರ್ ಯಾವುದೇ ಸಿನಿಮಾ ನಿರ್ಮಾಣ ಮಾಡಬೇಕಾದರೂ ಆ ಸಿನಿಮಾ ಸೋತರೆ ಏನಾಗಬಹುದು ಎಂಬ ಲೆಕ್ಕಾಚಾರದಲ್ಲಿಯೇ ಆ ಸಿನಿಮಾದ ಮೇಲೆ ಹಣ ಹೂಡುತ್ತಾರಂತೆ. ಅಂದರೆ ಸಿನಿಮಾ ನಿರ್ಮಾಣ ಮಾಡುವಾಗಲೇ ಆ ಸಿನಿಮಾದ ಡಿಜಿಟಲ್ ಹಕ್ಕು, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳು ಎಷ್ಟಕ್ಕೆ ವ್ಯಾಪಾರ ಆಗಬಹುದು ಎಂಬ ಲೆಕ್ಕಾಚಾರ ಹಾಕಿ ಅದಕ್ಕೆ ತಕ್ಕಂತೆ ಅಷ್ಟೆ ಆ ಸಿನಿಮಾಕ್ಕೆ ಬಂಡವಾಳ ಹೂಡುತ್ತಾರೆ.

ಇದನ್ನು ಉದಾಹರಣೆ ಸಹಿತ ವಿವರಿಸಿದ ಕರಣ್ ಜೋಹರ್, ನಾನು ಮಾಡುವ ಒಂದು ಸಿನಿಮಾಕ್ಕೆ ಅದರ ಸ್ಟಾರ್ ವ್ಯಾಲ್ಯು ಆಧಾರದ ಮೇಲೆ ಡಿಜಿಟಲ್ ಹಕ್ಕು 40 ಕೋಟಿಗೆ, ಸ್ಯಾಟಲೈಟ್ ಹಕ್ಕು 20 ಕೋಟಿಗೆ ಹಾಗೂ ಆಡಿಯೋ ಹಕ್ಕು 15 ಕೋಟಿಗೆ ವ್ಯಾಪಾರ ಆಗಲಿದೆ ಎಂದು ಅನಿಸಿದರೆ ನಾನು ಆ ಸಿನಿಮಾಕ್ಕೆ ಸುಮಾರು 70 ರಿಂದ 80 ಕೋಟಿ ಬಂಡವಾಳ ಹಾಕುತ್ತೇನೆ. ಒಂದೊಮ್ಮೆ ಸಿನಿಮಾ ಅಟ್ಟರ್ ಫ್ಲಾಪ್ ಆದರೂ ಸಹ ನಾನು ಹಾಕಿದ ಬಂಡವಾಳದ ಬಹುಪಾಲು ಭಾಗ ನನಗೆ ವಾಪಸ್ಸಾಗಿರುತ್ತದೆ. ಬಂಡವಾಳ ವಾಪಸ್ ಪಡೆಯುವ ಬಗ್ಗೆ ನಾನು ಸದಾ ಜಾಗೃತೆ ವಹಿಸುತ್ತೇನೆ ಎಂದಿದ್ದಾರೆ ಕರಣ್ ಜೋಹರ್.

ಯಾವುದೇ ಸಿನಿಮಾ ಆಗಲಿ ಅದರ ನಿರ್ಮಾಣ ವೆಚ್ಚ ಹಾಗೂ ಪ್ರಚಾರ ವೆಚ್ಚವನ್ನು ನಾವು ಸೇಫ್ ಮಾಡಿದಷ್ಟು ಸಿನಿಮಾ ಲಾಭ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಸಿನಿಮಾ ಸಾಧಾರಣವಾಗಿ ಓಡಿದರೂ ಒಟ್ಟು ಕಲೆಕ್ಷನ್​ನ ಸುಮಅರು 50% ನಿರ್ಮಾಪಕನಿಗೆ ನಿಗುತ್ತದೆಯಾದ್ದರಿಂದ ನಿರ್ಮಾಪಕ ಸೇಫ್ ಆಗಿರುತ್ತಾನೆ ಎಂದಿದ್ದಾರೆ ಕರಣ್ ಜೋಹರ್. ”ಯಾವುದೇ ಸಿನಿಮಾ ಆಗಲಿ ಸೋಲುವುದಿಲ್ಲ, ಸೋಲುವುದು ಬಜೆಟ್ ಮಾತ್ರ” ಎಂಬುದನ್ನು ತಾವು ಬಹುವಾಗಿ ನಂಬಿರುವುದಾಗಿ ಹೇಳಿರುವ ಕರಣ್ ಜೋಹರ್, ಸಿನಿಮಾದ ಕತೆ, ಸ್ಟಾರ್​ಗಳ ಆಧಾರದಲ್ಲಿ ಸೂಕ್ತವಾಗಿ ಬಜೆಟ್ ಹಾಕಿದರೆ ಪ್ರತಿ ಸಿನಿಮಾ ಸಹ ಹಿಟ್ ಆಗುತ್ತದೆ ಎನ್ನುತ್ತಾರೆ.

ಇದೇ ಸಂದರ್ಶನದಲ್ಲಿ ಯುವಸ್ಟಾರ್ ನಟರ ಬಗ್ಗೆ ಮಾತನಾಡಿರುವ ಕರಣ್ ಜೊಹರ್, ಕೆಲವು ಅದ್ಭುತವಾದ ನಟರು ಇದ್ದಾರೆ. ಅವರು, ಶಾರುಖ್ ಖಾನ್, ಸಲ್ಮಾನ್, ಆಮಿರ್, ಹೃತಿಕ್, ಅಜಯ್ ದೇವಗನ್, ಅಕ್ಷಯ್ ಅವರಿಗಿಂತಲೂ ಚಾರ್ಮಿಂಗ್ ಇರಬಹುದು, ಇವರೆಲ್ಲರಿಗಿಂತಲೂ ಜನಪ್ರಿಯ ಸಹ ಇರಬಹುದೇನೋ ಆದರೆ ಸ್ಟಾರ್ ವ್ಯಾಲ್ಯೂ ಎಂಬುದು ಸಿನಿಮಾ ನಿರ್ಮಾಣದಲ್ಲಿ ಮುಖ್ಯವಾಗುತ್ತದೆ. ಜನಪ್ರಿಯ ಆದೊಡನೆ ನಿನ್ನ ಸಿನಿಮಾ ನೋಡಲು ಜನ ಬರುತ್ತಾರೆ ಎಂದೇನಿಲ್ಲ, ಯೂಟ್ಯೂಬ್ ವಿಡಿಯೋ ಮಾಡುವವನು ಸಹ ಜನಪ್ರಿಯ ಆಗಿರುತ್ತಾನೆ. ಇದನ್ನು ಯುವನಟರು ಅರ್ಥಮಾಡಿಕೊಳ್ಳಬೇಕು. ಥಿಯೇಟರ್​ಗೆ ಜನರನ್ನು ಯಾರು ಕರೆದುಕೊಂಡು ಬರುತ್ತಾರೋ ಅವರನ್ನು ಸ್ಟಾರ್ ಎನ್ನುತ್ತಾರೆ ಅವರಿಗೆ ಪ್ರತ್ಯೇಕವಾದ ಸ್ಟಾರ್ ವಾಲ್ಯೂ ಇದೆ” ಎಂದಿದ್ದಾರೆ ಕರಣ್ ಜೋಹರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್