AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​; ವಿಡಿಯೋ ವೈರಲ್​

Satyaprem Ki Katha: ಬೇರೆಯವರ ಚಪ್ಪಲಿ ಮುಟ್ಟಿದರೆ ತಮ್ಮ ಅಭಿಮಾನಿಗಳಿಗೆ ಬೇಸರ ಆಗಬಹುದು ಎಂದು ಸ್ಟಾರ್​ ನಟ-ನಟಿಯರು ಆಲೋಚಿಸಬಹುದು. ಆದರೆ ಕಾರ್ತಿಕ್​ ಆರ್ಯನ್​ ಅವರು ಆ ರೀತಿ ಅಲ್ಲ.

Karthik Aaryan: ವೇದಿಕೆ ಮೇಲೆ ಚಪ್ಪಲಿ ಹಾಕಿಕೊಳ್ಳಲು ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​; ವಿಡಿಯೋ ವೈರಲ್​
ಕಿಯಾರಾಗೆ ಸಹಾಯ ಮಾಡಿದ ಕಾರ್ತಿಕ್​ ಆರ್ಯನ್​
ಮದನ್​ ಕುಮಾರ್​
|

Updated on: Jun 22, 2023 | 3:03 PM

Share

ನಟ ಕಾರ್ತಿಕ್​ ಆರ್ಯನ್​ (Karthik Aaryan) ಅವರು ಬಾಲಿವುಡ್​ನಲ್ಲಿ ಸ್ಟಾರ್​ ಹೀರೋ ಆಗಿ ಬೆಳೆದಿದ್ದಾರೆ. ‘ಭೂಲ್​ ಭುಲಯ್ಯ 2’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಬಾಲಿವುಡ್​ ಮಾಫಿಯಾದ ನಡುವೆಯೂ ಅವರು ತಮ್ಮ ಸಾಮರ್ಥ್ಯ ಏನು ಎಂಬುದನ್ನು ಸಾಬೀತು ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಕಾರ್ತಿಕ್​ ಆರ್ಯನ್ ಜೊತೆ ಕಿಯಾರಾ ಅಡ್ವಾಣಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡು ಬಿಡುಗಡೆ ಮಾಡಲಾಯಿತು. ಈ ಪ್ರಯುಕ್ತ ಮುಂಬೈನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆ ವೇದಿಕೆಯಲ್ಲಿ ಕಿಯಾರಾ ಅಡ್ವಾಣಿ (Kiara Advani) ಅವರಿಗೆ ಚಪ್ಪಲಿ ಹಾಕಿಕೊಳ್ಳಲು ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಸಾಮಾನ್ಯವಾಗಿ ಸ್ಟಾರ್​ ನಟರಿಗೆ ತಮ್ಮ ಪ್ರತಿಷ್ಠೆಯ ಬಗ್ಗೆ ಕಾಳಜಿ ಇರುತ್ತದೆ. ತಾವು ಬೇರೆಯವರ ಚಪ್ಪಲಿ ಮುಟ್ಟಿದರೆ ತಮ್ಮ ಅಭಿಮಾನಿಗಳಿಗೆ ಬೇಸರ ಆಗಬಹುದು ಎಂದು ಸ್ಟಾರ್​ ನಟ-ನಟಿಯರು ಆಲೋಚಿಸಬಹುದು. ಆದರೆ ಕಾರ್ತಿಕ್​ ಆರ್ಯನ್​ ಅವರು ಆ ರೀತಿ ಅಲ್ಲ. ಯಾವ ಅಂಜಿಕೆಯೂ ಇಲ್ಲದೇ ಅವರು ಕಿಯಾಯಾ ಅಡ್ವಾಣಿಯ ಚಪ್ಪಲಿ ಮುಟ್ಟಿದ್ದಾರೆ. ಅವರ ಈ ಗುಣವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಕಿಯಾರಾ ಅಡ್ವಾಣಿ ಅವರು ಹೈ ಹೀಲ್ಸ್​ ಧರಿಸಿ ಬಂದಿದ್ದರು. ವೇದಿಕೆಯಲ್ಲಿ ಡ್ಯಾನ್ಸ್​ ಮಾಡುವ ಸಲುವಾಗಿ ಅವರು ಹೀಲ್ಸ್​ ತೆಗೆದಿಟ್ಟರು. ಡ್ಯಾನ್ಸ್​ ಮಾಡಿದ ಬಳಿಕ ಮತ್ತೆ ಅವುಗಳನ್ನು ಹಾಕಿಕೊಳ್ಳಲು ಮುಂದಾದಾಗ ಕಾರ್ತಿಕ್​ ಆರ್ಯನ್​ ಸಹಾಯ ಮಾಡಿದರು. ನಟಿಯ ಚಪ್ಪಲಿಯನ್ನು ತಾವೇ ಕೈಯಾರೆ ತಂದು ಕೊಟ್ಟರು. ಅಲ್ಲದೇ ಕಿಯಾರಾ ಚಪ್ಪಲಿ ಹಾಕಿಕೊಳ್ಳುವವರೆಗೂ ಅವರಿಗೆ ಆಧಾರವಾಗಿ ಕಾರ್ತಿಕ್​ ಆರ್ಯನ್​ ನಿಂತಿದ್ದರು.

ಇದನ್ನೂ ಓದಿ: Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ

ಕಾರ್ತಿಕ್​ ಆರ್ಯನ್​ ಅವರು ತುಂಬ ಸರಳ ಸ್ವಭಾವದ ಹೀರೋ. ಜನಸಾಮಾನ್ಯರ ಜೊತೆ ಅವರು ಚೆನ್ನಾಗಿ ಬೆರೆಯುತ್ತಾರೆ. ಈ ಹಿಂದೆ ಅವರು ರಸ್ತೆಬದಿಯಲ್ಲಿ ಆಹಾರ ಸೇವಿಸಿದ ವಿಡಿಯೋ ವೈರಲ್​ ಆಗಿತ್ತು. ಈಗ ಕಿಯಾರಾಗೆ ಚಪ್ಪಲಿ ಧರಿಸಲು ಸಹಾಯ ಮಾಡಿದ ವಿಡಿಯೋ ಕೂಡ ವೈರಲ್​ ಆಗಿದೆ. ಇದನ್ನು ನೋಡಿದ ಅನೇಕರಿಗೆ ಸುಶಾಂತ್​ ಸಿಂಗ್ ರಜಪೂತ್​ ಅವರ ನೆನಪಾಗಿದೆ. ಇನ್ನೂ ಕೆಲವರು ಕಾರ್ತಿಕ್​ ಆರ್ಯನ್​ ಅವರನ್ನು ಶಾರುಖ್​ ಖಾನ್​ಗೆ ಹೋಲಿಸಿದ್ದಾರೆ. ‘ಇವರು ನಿಜವಾದ ಜಂಟಲ್​ಮ್ಯಾನ್​’ ಎಂದು ಅಭಿಮಾನಿಗಳು ಹೊಗಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ