Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ

Kartik Aaryan: ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಬುಲಯ್ಯ 2’ ಸಿನಿಮಾದ ಯಶಸ್ಸಿನಿಂದ ಬಾರಿ ಜನಪ್ರಿಯತೆ ಪಡೆದರು. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಹೈಪ್​ ಸೃಷ್ಟಿ ಆಗಿದೆ.

Satyaprem Ki Katha: 4 ಭಿನ್ನ ರೀತಿಯಲ್ಲಿ ಮದುವೆ; ಇದಕ್ಕೆ ಖರ್ಚಾಗಿದ್ದು 7 ಕೋಟಿ ರೂಪಾಯಿ: ನಟ ಕಾರ್ತಿಕ್​ ಆರ್ಯನ್​ ಬಗ್ಗೆ ಅಚ್ಚರಿಯ ಸುದ್ದಿ
ಕಿಯಾರಾ ಅಡ್ವಾಣಿ, ಕಾರ್ತಿಕ್​ ಆರ್ಯನ್​
Follow us
|

Updated on: May 30, 2023 | 3:10 PM

ನಟ ಕಾರ್ತಿಕ್​ ಆರ್ಯನ್ (Kartik Aaryan)​ ಅವರು ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ಅವರಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ. ಸದ್ಯ ಅವರು ‘ಸತ್ಯಪ್ರೇಮ್​ ಕಿ ಕಥಾ’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ (Kiara Advani) ಕಾಣಿಸಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಯಿತು. ಅದರ ಬೆನ್ನಲ್ಲೇ ಒಂದು ವಿಶೇಷ ಸುದ್ದಿ ಕೇಳಿಬಂದಿದೆ. ಅದು ಮದುವೆಗೆ ಸಂಬಂಧಿಸಿದ ಸುದ್ದಿ. ಹಾಗಂತ ರಿಯಲ್​ ವಿವಾಹ ಅಲ್ಲ. ಇದು ಕೇವಲ ರೀಲ್​ ಸಮಾಚಾರ. ‘ಸತ್ಯಪ್ರೇಮ್​ ಕಿ ಕಥಾ’ (Satyaprem Ki Katha) ಸಿನಿಮಾದಲ್ಲಿ ಬರುವ ಒಂದು ಮದುವೆ ಸನ್ನಿವೇಶಕ್ಕಾಗಿ ಬರೋಬ್ಬರಿ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಗುಜರಾತಿ, ದಕ್ಷಿಣ ಭಾರತ, ಮುಸ್ಲಿಂ ಹಾಗೂ ಕ್ರಿಶ್ಚಿಯನ್​ ಶೈಲಿಯಲ್ಲಿ ನಡೆಯುವ ಮದುವೆ ದೃಶ್ಯವನ್ನು ಬಹಳ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ.

ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಬುಲಯ್ಯ 2’ ಸಿನಿಮಾದ ಯಶಸ್ಸಿನಿಂದ ಬಾರಿ ಜನಪ್ರಿಯತೆ ಪಡೆದರು. ಈಗ ಅವರ ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಹೈಪ್​ ಸೃಷ್ಟಿ ಆಗಿದೆ. ಹಾಗಾಗಿ ಹೆಚ್ಚು ಹಣವನ್ನು ವಿನಿಯೋಗಿಸಲು ನಿರ್ಮಾಪಕರು ಮುಂದೆಬರುತ್ತಿದ್ದಾರೆ. ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರಕ್ಕೆ ಸಾಜಿದ್​ ನಾಡಿಯದ್ವಾಲಾ ಅವರು ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್​ ಅವರ ಇಂಟ್ರಡಕ್ಷನ್​ ಗೀತೆಯಲ್ಲಿ ಮದುವೆ ಸನ್ನಿವೇಶ ಬರಲಿದೆ. ಅದನ್ನು ತುಂಬ ಗ್ರ್ಯಾಂಡ್​ ಆಗಿ ಚಿತ್ರೀಕರಿಸಲಾಗಿದೆ. ಹಾಗಾಗಿ ಅದಕ್ಕೆ 7 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: 175 ಕೋಟಿ ರೂ. ಗಳಿಕೆ​ ಮಾಡಿದ್ರೂ ಕಿಂಚಿತ್ತೂ ಗರ್ವ ಇಲ್ಲದೆ ಬೀದಿ ಮಕ್ಕಳ ಜತೆ ಮಾತಾಡಿದ ಕಾರ್ತಿಕ್​ ಆರ್ಯನ್​

ಈ ಮದುವೆಗಾಗಿ ಅದ್ದೂರಿ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಸಿನಿಮಾದಲ್ಲಿ ಬರುವ ಮೊದಲ ಸಾಂಗ್​ ಇದಾದ್ದರಿಂದ ಬಹಳ ಕಾಳಜಿ ವಹಿಸಿ ಕೆಲಸ ಮಾಡಲಾಗಿದೆ. ನೃತ್ಯ ನಿರ್ದೇಶಕ ಬಾಸ್ಕೋ ಮಾರ್ಟಿಸ್​ ಅವರು ಇದಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ದೊಡ್ಡ ಪರದೆಯಲ್ಲಿ ಈ ಹಾಡನ್ನು ನೋಡಲು ಕಾರ್ತಿಕ್​ ಆರ್ಯನ್​ ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಬಣ್ಣದ ಲೋಕದಲ್ಲಿ ಸೆಲೆಬ್ರಿಟಿಗಳ ಪ್ರೇಮ್​ ಕಹಾನಿಗಳಿಗೆ ಕೊರತೆ ಇಲ್ಲ. ಅದೇ ರೀತಿ ಬ್ರೇಕಪ್​ಗಳಿಗೂ ಬರಗಾಲ ಇಲ್ಲ. ಬಾಲಿವುಡ್​ ಮಂದಿಗೆ ಆಗಾಗ ಲವ್​ ಆಗುತ್ತದೆ. ಅಷ್ಟೇ ಬೇಗ ಬ್ರೇಕಪ್​ ಕೂಡ ಆಗುತ್ತದೆ. ನಟ ಕಾರ್ತಿಕ್​​ ಆರ್ಯನ್​ ಮತ್ತು ನಟಿ ಸಾರಾ ಆಲಿ ಖಾನ್ ಅವರ ನಡುವೆಯೂ ಅಂಥ ಅಲ್ಪಾವಧಿ ಪ್ರೀತಿ ಸಿಗುರಿತ್ತು. ‘ಲವ್​ ಆಜ್​ ಕಲ್​ 2’ ಸಿನಿಮಾದಲ್ಲಿ ಅವರಿಬ್ಬರು ಜೋಡಿಯಾಗಿ ನಟಿಸಿದ್ದರು. ಆಗ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಆದರೆ ತಮ್ಮಿಬ್ಬರ ಸಂಬಂಧದ ಬಗ್ಗೆ ಈ ಜೋಡಿ ಸಾರ್ವಜನಿಕವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಹಾಗಂತ ಗಾಸಿಪ್​ ಮಂದಿ ಸುಮ್ಮನೆ ಇರುತ್ತಾರಾ? ಖಂಡಿತಾ ಇಲ್ಲ. ಸಾರಾ ಅಲಿ ಖಾನ್​ ಮತ್ತು ಕಾರ್ತಿಕ್​ ಆರ್ಯನ್​ ಪರಸ್ಪರ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂಬ ಮಾತು ಎಲ್ಲೆಡೆ ಹಬ್ಬಿತ್ತು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಹಕ್ಕಿಗಳು ದೂರಾದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್