AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Vaidya: ಹಾಡಿನಲ್ಲಿ ದೇವಿಗೆ ಅಪಮಾನದ ಆರೋಪ; ಖ್ಯಾತ ಗಾಯಕನಿಗೆ ಜೀವ ಬೆದರಿಕೆ

Garbe Ki Raat: ಖ್ಯಾತ ಗಾಯಕ ರಾಹುಲ್ ವೈದ್ಯ ತಮ್ಮ ನೂತನ ಹಾಡಿನಲ್ಲಿ ದೇವಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಎಫ್​​ಐಆರ್​ ದಾಖಲಾಗಿದೆ.

Rahul Vaidya: ಹಾಡಿನಲ್ಲಿ ದೇವಿಗೆ ಅಪಮಾನದ ಆರೋಪ; ಖ್ಯಾತ ಗಾಯಕನಿಗೆ ಜೀವ ಬೆದರಿಕೆ
‘ಗಾರ್ಬೆ ಕೀ ರಾತ್’ ಹಾಡಿನ ದೃಶ್ಯ
TV9 Web
| Edited By: |

Updated on: Oct 15, 2021 | 11:52 AM

Share

ಖ್ಯಾತ ಗಾಯಕ ಹಾಗೂ ಮಾಜಿ ಬಿಗ್​ ಬಾಸ್ 14 ಸ್ಪರ್ಧಿ ರಾಹುಲ್ ವೈದ್ಯಗೆ (Rahul Vaidya) ಜೀವ ಬೆದರಿಕೆ ಎದುರಾಗಿದೆ. ಅವರ ಹೊಸ ಹಾಡು ‘ಗಾರ್ಬೆ ಕಿ ರಾತ್’ನಲ್ಲಿ (Gaarbe Ki Raat) ‘ಶ್ರೀ ಮೊಗಲ್ ಮಾ’ ದೇವಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ದೇವಿಯ ಆರಾಧಕರು ತಿರುಗಿಬಿದ್ದಿದ್ದು, ರಾಹುಲ್​ಗೆ ಜೀವ ಬೆದರಿಕೆ ಎದುರಾಗಿದೆ. ಈ ಹಾಡನ್ನು ನವರಾತ್ರಿಯ ಎರಡನೇ ದಿನದಂದು ಬಿಡುಗಡೆ ಮಾಡಲಾಗಿತ್ತು. ಯೂಟ್ಯೂಬ್​ನಲ್ಲಿ ಸುಮಾರು 5 ಮಿಲಿಯನ್ ವೀಕ್ಷಣೆಯನ್ನು ಈ ಹಾಡು ಕಂಡಿದೆ.

‘ಗಾರ್ಬೆ ಕೀ ರಾತ್’ ಹಾಡಿನಲ್ಲಿ ರಾಹುಲ್ ವೈದ್ಯ ಅವರೊಂದಿಗೆ, ಖ್ಯಾತ ಕಿರುತೆರೆ ನಿರೂಪಕಿ ನಿಯಾ ಶರ್ಮಾ(Nia Sharma) ಕೂಡ ಕಾಣಿಸಿಕೊಂಡಿದ್ದಾರೆ. ಈ ಹಾಡು ಗುಜರಾತಿ ಹಿನ್ನೆಲೆಯನ್ನು ಹೊಂದಿದ್ದು, ಅಲ್ಲಿನ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ನಂತರ ಇದೇ ವಿಷಯಕ್ಕೆ ಕುರಿತಂತೆ ರಾಹುಲ್ ವೈದ್ಯ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.

ಈ ಕುರಿತು ಭಕ್ತರು ರಾಹುಲ್ ವೈದ್ಯರಿಗೆ, ದೇವಿಯ ಹೆಸರನ್ನು ತೆಗೆಯುವಂತೆ ತಿಳಿಸಿದ್ದು, ಒಂದು ವೇಳೆ ತೆಗೆಯದಿದ್ದರೆ ಗಂಭೀರ ಕ್ರಮ ಎದುರಿಸಲು ಸಿದ್ಧರಾಗಿ ಎಂದು ತಿಳಿಸಿದ್ದಾರೆ. ಮತ್ತಷ್ಟು ಜನ ಆ ಹಾಡನ್ನೇ ಎಲ್ಲಾ ಮಾಧ್ಯಮಗಳಿಂದ ತೆಗೆಯಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಾಡಿನಲ್ಲಿ ನಿಯಾ ಶರ್ಮಾ ಅವರು ದೇವಿಯ ಕುರಿತು ಅವಹೇಳನಕಾರಿಯಾಗಿ ಪದ ಬಳಸಿದ್ದಾರೆ ಎಂಬುದು ಜನರ ಆರೋಪವಾಗಿದೆ.

ಈ ಕುರಿತು ರಾಹುಲ್ ವೈದ್ಯರ ವಕ್ತಾರ ಮಾಹಿತಿ ನೀಡಿದ್ದು, ಅವರಿಗೆ ಜೀವ ಬೆದರಿಕೆ ಬರುತ್ತಿರುವುದು ನಿಜ ಎಂದು ತಿಳಿಸಿದ್ದಾರೆ. ಸದ್ಯದಲ್ಲಿಯೇ ಹಾಡನ್ನು ಸರಿಪಡಿಸಲಾಗುವುದು ಎಂದೂ ಅವರು ತಿಳಿಸಿದ್ಧಾರೆ. ಹಾಡಿನಲ್ಲಿ ದೇವಿಯನ್ನು ಅಪಮಾನಿಸುವ ಯಾವ ಉದ್ದೇಶಗಳೂ ತಂಡಕ್ಕಿರಲಿಲ್ಲ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ರಾಹುಲ್ ವೈದ್ಯ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ. ಈಗ ಆಗಿರುವ ಸಮಸ್ಯೆಯನ್ನು ಸರಿಪಡಿಸಲು ಕೆಲವು ಸಮಯ ಬೇಕು. ಅದಕ್ಕಾಗಿ ಈಗ ಕೆಲಸವನ್ನು ಆರಂಭಿಸಿದ್ದೇವೆ ಎಂದು ರಾಹುಲ್ ವಕ್ತಾರ ಮಾಹಿತಿ ನೀಡಿದ್ದಾರೆ. ಸದ್ಯ ‘ಗಾರ್ಬೆ ಕೀ ರಾತ್’ ಹಾಡನ್ನು ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಲಭ್ಯವಿಲ್ಲ.

ಇದನ್ನೂ ಓದಿ:

G. K. Govind Rao : ‘ಪ್ರೊಫೆಸರ್, ಇನ್ನ್ಯಾರೊಂದಿಗೆ ನಾನು ಜಗಳವಾಡಲಿ’ ನಿರ್ದೇಶಕ ಟಿ.ಎನ್. ಸೀತಾರಾಮ್

ತಾಲಿಬಾನ್ ಬದಲಾದರೂ ಪಾಕಿಸ್ತಾನ ಬದಲಾಗಲ್ಲ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ