AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ಗೆ ಕೈಕೊಟ್ಟಿದ್ದ ಕಮಲ್ ಹಾಸನ್, ಕಿಂಗ್ ಖಾನ್​​ಗೆ ಆಗಿತ್ತು ಬೇಸರ

Kamal Haasan-Shah Rukh Khan: ಕಮಲ್ ಹಾಸನ್ ಹಾಗೂ ಶಾರುಖ್ ಖಾನ್ ಆಪ್ತ ಗೆಳೆಯರು. ಕಮಲ್ ಹಾಸನ್ ನಿರ್ದೇಶಿಸಿದ್ದ ‘ಹೇ ರಾಮ್’ ಸಿನಿಮಾನಲ್ಲಿ ಶಾರುಖ್ ಖಾನ್ ಸಂಭಾವನೆ ಪಡೆಯದೆ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಒಮ್ಮೆ ಕಮಲ್ ಹಾಸನ್ ಅವರಿಂದ ಬೇಸರ ಅನುಭವಿಸಿದ್ದರಂತೆ ಶಾರುಖ್ ಖಾನ್, ಏನದು ಸಂಗತಿ?

ಶಾರುಖ್​ಗೆ ಕೈಕೊಟ್ಟಿದ್ದ ಕಮಲ್ ಹಾಸನ್, ಕಿಂಗ್ ಖಾನ್​​ಗೆ ಆಗಿತ್ತು ಬೇಸರ
Kamal Haasan Srk
ಮಂಜುನಾಥ ಸಿ.
|

Updated on: Sep 20, 2025 | 5:10 PM

Share

ಸಿನಿಮಾ ರಂಗದಲ್ಲಿ ಕೊಟ್ಟು-ತೆಗೆದುಕೊಳ್ಳುವ ಪದ್ಧತಿ ಮೊದಲಿನಿಂದಲೂ ಇದೆ. ದೊಡ್ಡ ನಟರು ಮತ್ತೊಬ್ಬರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಆ ನಂತರ ಈ ನಟರು ಮತ್ತೊಬ್ಬ ನಟನ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವುದು. ಪರಸ್ಪರರ ಸಿನಿಮಾಗಳಿಗೆ ಸಹಾಯ ಮಾಡುವುದು ನಡೆಯುತ್ತಲೇ ಬಂದಿದೆ. ಶಾರುಖ್ ಖಾನ್ (Shah Rukh Khan) ಸಹ ತಮ್ಮ ಆಪ್ತರ ಹಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟರಾಗಿದ್ದ ಶಾರುಖ್ ಖಾನ್, ಕಮಲ್ ಹಾಸನ್ ಅವರ ಮೇಲಿನ ಪ್ರೀತಿಯಿಂದ ಅವರ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆದರೆ ಆ ಬಳಿಕ ಕಮಲ್ ಹಾಸನ್, ಶಾರುಖ್ ಖಾನ್​​ಗೆ ಕೈಕೊಟ್ಟರಂತೆ. ಈ ಬಗ್ಗೆ ಶಾರುಖ್ ಖಾನ್​​ರ ಆಪ್ತೆ, ನಿರ್ದೇಶಕ ಫರಾಹ್ ಖಾನ್ ಹೇಳಿಕೊಂಡಿದ್ದಾರೆ.

ಶಾರುಖ್ ಖಾನ್ ಮೊದಲ ನಿರ್ಮಾಣದ ಸಿನಿಮಾ ‘ಮೈ ಹೂ ನಾ’ ಭಾರಿ ದೊಡ್ಡ ಹಿಟ್ ಆದ ಸಿನಿಮಾ. ಸಿನಿಮಾ ನಿರ್ದೇಶನ ಮಾಡಿದ್ದು ಫರಾಹ್ ಖಾನ್. ಸಿನಿಮಾದ ಪ್ರಮುಖ ಪಾತ್ರವೊಂದಕ್ಕೆ ಕಮಲ್ ಹಾಸನ್ ಅವರನ್ನು ಕೇಳಲಾಗಿತ್ತಂತೆ. ‘ಮೈ ಹೂ ನಾ’ ಸಿನಿಮಾನಲ್ಲಿ ಖ್ಯಾತ ನಟ ಸುನಿಲ್ ಶೆಟ್ಟಿ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ನಾಯಕ ನಟನಷ್ಟೆ ವಿಲನ್ ಪಾತ್ರಕ್ಕೂ ಪ್ರಾಧಾನ್ಯತೆ ಈ ಸಿನಿಮಾನಲ್ಲಿತ್ತು. ಹಾಗಾಗಿ ಪ್ರಮುಖ ನಟರನ್ನೇ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲು ಶಾರುಖ್ ಖಾನ್ ಮತ್ತು ಫರಾಹ್ ಖಾನ್ ಬಯಸಿದ್ದರು.

ಸುನಿಲ್ ಶೆಟ್ಟಿ ಪಾತ್ರಕ್ಕೆ ಮೊದಲು ಕೇಳಿದ್ದು ಕಮಲ್ ಹಾಸನ್ ಅವರನ್ನಂತೆ. ಶಾರುಖ್ ಖಾನ್ ಹೇಳಿದ್ದರಂತೆ. ಕಮಲ್ ಅವರಿಗೆ ನಾನೆಂದರೆ ಬಹಳ ಪ್ರೀತಿ, ನಾನು ಅವರ ‘ಹೇ ರಾಮ್’ ಸಿನಿಮಾನಲ್ಲಿ ನಟಿಸಿದ್ದೇನೆ, ಖಂಡಿತ ಅವರು ಬೇಡ ಎನ್ನುವದಿಲ್ಲ ಎಂದಿದ್ದರಂತೆ. ಅದರಂತೆ ಫರಾಹ್ ಖಾನ್ ಹೋಗಿ ಚೆನ್ನೈನಲ್ಲಿ ಕಮಲ್ ಹಾಸನ್​​ಗೆ ಕತೆ ಹೇಳಿದರಂತೆ. ಫರಾಹ್ ಹೇಳಿಕೊಂಡಿರುವಂತೆ, ಕಮಲ್ ಹಾಸನ್ ಒಂದು ದಿನವೆಲ್ಲ ಅವರನ್ನು ಸತಾಯಿಸಿ, ಏನೇನೋ ಅನುಮಾನಗಳನ್ನು ಕೇಳಿ ಕೊನೆಗೆ ಆಗುವುದಿಲ್ಲ’ ಎಂದರಂತೆ. ಇದು ಶಾರುಖ್ ಖಾನ್​​ಗೆ ಬಹಳ ಬೇಸರ ತರಿಸಿತಂತೆ.

ಇದನ್ನೂ ಓದಿ:ಹಿಂದೂ ಧರ್ಮದ ಬಗ್ಗೆ ಹೇಳಿಕೆ, ಕಮಲ್ ಹಾಸನ್​ಗೆ ಕೊಲೆ ಬೆದರಿಕೆ

ಇನ್ನು ಅದೇ ಪಾತ್ರಕ್ಕೆ ನಾನಾ ಪಟೇಕರ್ ಅವರನ್ನು ಕೇಳಲಾಯ್ತಂತೆ. ಆದರೆ ನಾನಾ ಪಟೇಕರ್ ಆಗ ಬ್ಯುಸಿಯಾಗಿದ್ದರಂತೆ. ಆದರೆ ಫರಾಹ್ ಖಾನ್​​ಗೆ ಆ ಪಾತ್ರದ ಬಗ್ಗೆ ಕೆಲವು ಒಳ್ಳೆಯ ಸಲಹೆ, ಸೂಚನೆಗಳನ್ನು ನೀಡಿದರಂತೆ. ಬಳಿಕ ನಾಸಿರುದ್ಧೀನ್ ಶಾ ಅವರನ್ನೂ ಕೇಳಲಾಯ್ತಂತೆ. ಆದರೆ ಅವರು ಸಹ ಒಪ್ಪಲಿಲ್ಲ, ಆದರೆ ಅದೇ ಸಿನಿಮಾದಲ್ಲಿ ಮತ್ತೊಂದು ಸಣ್ಣ ಪಾತ್ರದಲ್ಲಿ ನಟಿಸಿದರು. ಅಂತಿಮವಾಗಿ ಪಾತ್ರದಲ್ಲಿ ನಟಿಸಲು ಸುನಿಲ್ ಶೆಟ್ಟಿ ಒಪ್ಪಿಕೊಂಡರು. ಸಿನಿಮಾ ದೊಡ್ಡ ಹಿಟ್ ಆಯ್ತು.

ಅಂದಹಾಗೆ ಶಾರುಖ್ ಖಾನ್, ಕಮಲ್ ಹಾಸನ್ ನಿರ್ದೇಶಿಸಿ ನಟಿಸಿದ್ದ ‘ಹೇ ರಾಮ್’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾನಲ್ಲಿ ನಟಿಸಲು ಯಾವುದೇ ಸಂಭಾವನೆಯನ್ನು ಶಾರುಖ್ ಖಾನ್ ಪಡೆದಿರಲಿಲ್ಲ. ನನಗೆ ಕಮಲ್ ಎಂದರೆ ಪ್ರೀತಿ, ಅವರೊಂದಿಗೆ ಇರಲು ಮಾತ್ರವೇ ನಾನು ಈ ಸಿನಿಮಾನಲ್ಲಿ ನಟಿಸುತ್ತಿದ್ದೇನೆ ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!