AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !

Sidharth Shukla:ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಅವರೀಗ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ತೆರಳಿದ್ದಾರೆ.

‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !
ಸಿದ್ಧಾರ್ಥ್​ ಶುಕ್ಲಾ
TV9 Web
| Edited By: |

Updated on: Sep 02, 2021 | 5:07 PM

Share

ಹಿಂದಿ ಉದಯೋನ್ಮುಖ ನಟ, ಬಿಗ್​ಬಾಸ್​ 13 ಸೀಸನ್​ ವಿಜೇತ ಸಿದ್ಧಾರ್ಥ್​ ಶುಕ್ಲಾ ಇಂದು ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ಧಾರ್ಥ್​ ಸಾವು ಅವರ ಕುಟುಂಬ, ಅಭಿಮಾನಿಗಳು, ಮಿತ್ರರು, ಸಹಕಲಾವಿದರಿಗೆಲ್ಲ ಬಹುದೊಡ್ಡ ಶಾಕ್​ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ ಸೋಷಿಯಲ್​ ಮೀಡಿಯಾದಲ್ಲಿ ಸಿದ್ಧಾರ್ಥ್​ ಶುಕ್ಲಾ ಅವರ ಹಳೇ ಟ್ವೀಟ್​ವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಸಿದ್ಧಾರ್ಥ್​ ಶುಕ್ಲಾ ತಮ್ಮ ಬ್ಯೂಸಿ ಶೆಡ್ಯೂಲ್​ ಮಧ್ಯೆಯೂ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತಿದ್ದರು. ಹಾಗೇ 2021ರ ಫೆಬ್ರವರಿ 24ರಂದು ಜೀವನದ ಬಗ್ಗೆ ಒಂದು ಅದ್ಭುತ ಸಂದೇಶವನ್ನು ಟ್ವೀಟ್​ ಮಾಡಿದ್ದರು. ಜೀವನ ತುಂಬ ಚಿಕ್ಕದು ಎಂದು ಹೇಳಿಕೊಂಡಿದ್ದರು. ಆ ಟ್ವೀಟ್​ ಕಾಕತಾಳೀಯವೆಂಬಂತೆ ಸ್ವತಃ ಸಿದ್ಧಾರ್ಥ್​ಗೇ ಅನ್ವಯ ಆಗಿದ್ದು ದುರಂತ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.

ಅಂದು ಶುಕ್ಲಾ ಮಾಡಿದ್ದ ಟ್ವೀಟ್ ಹೀಗಿದೆ: ‘ಬೇರೆಯವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ..ಯೋಚಿಸುತ್ತಾರೆ ಎಂದು ತಲೆಕೆಡಿಸಿಕೊಳ್ಳುವಷ್ಟೆಲ್ಲ ಜೀವನದಲ್ಲಿ ಸಮಯವಿಲ್ಲ. ಈ ಜೀವನ ತುಂಬ ಚಿಕ್ಕದು. ನಾವು ನಮ್ಮ ಬದುಕನ್ನು ಎಂಜಾಯ್​ ಮಾಡಬೇಕು ಮತ್ತು ಈ ಮೂಲಕ ಮಾತನಾಡುವವರಿಗೆ ನಿಮ್ಮ ಬಗ್ಗೆ ಮಾತನಾಡಲು ಏನಾದರೂ ವಿಷಯ ನೀವೇ ಕೊಡಬೇಕು..’

ಬರೀ ಇಷ್ಟೇ ಅಲ್ಲ, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕೂಡ ಸಿದ್ಧಾರ್ಥ್​ ಶುಕ್ಲಾ ಜೀವನದಕ್ಕೆ ಸಂಬಂಧಪಟ್ಟಂತೆ ತಮ್ಮ ವಿಚಾರಧಾರೆಯನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದರು. ‘ನೀವು ಇವತ್ತು ಏನು ಮಾಡುತ್ತಿರೋ? ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಕುರಿಗಳಂತೆ ಇದ್ದು ಸುದೀರ್ಘ ಜೀವನವನ್ನು ನಡೆಸುವ ಬದಲು, ಒಂದೇ ದಿನವಾದರೂ ಸರಿ ಸಿಂಹದಂತೆ ಬದುಕಬೇಕು’ ಎಂದು ಹೇಳಿದ್ದರು.

40ವರ್ಷಕ್ಕೇ ಜೀವನ ಅಂತ್ಯ ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ಇದೀಗ 40 ವರ್ಷದಲ್ಲೇ ತಮ್ಮ ಪಯಣ ಮುಗಿಸಿ ಹೊರಟಿದ್ದಾರೆ. ಇಡೀ ಬಾಲಿವುಡ್​ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಸಿದ್ಧಾರ್ಥ್​ ನಿಧನ; ಗೆಳತಿ ಶೆಹನಾಜ್​ ಪರಿಸ್ಥಿತಿ ಹೇಗಿದೆ? ಪ್ರತಿಕ್ರಿಯೆ ನೀಡಿದ ತಂದೆ

Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ

Follow Us
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
ಐಪಿಎಲ್ ಟಿಕೆಟ್​ಗಾಗಿ ಕ್ಯೂನಿಂತ ಶಾಸಕರ ಪಿಎಗಳು
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
RCBಯ 5ನೇ ವಿದೇಶಿ ಆಟಗಾರ... ವಿರಾಟ್ ಕೊಹ್ಲಿಯ ಕಾಲೆಳೆದ ಮಿಸ್ಟರ್ ನಾಗ್ಸ್​!
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ರೋಗಿಗಳ ಮೇಲೂ ಯುದ್ಧದ ಎಫೆಕ್ಟ್: ಔಷಧಿಗಳ ದರ ಶೇ 15 ರಷ್ಟು ಏರಿಕೆ ಸಾಧ್ಯತೆ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ಇಲೆಕ್ಷನ್ ಗೆಲ್ಲೋದು ಹೇಗೆ ಅಂತ AIನ ಕೇಳಿದ ಡಿಕೆಶಿ! AI ಹೇಳಿದ್ದೇನು ಗೊತ್ತಾ
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ತಿರುಮಲ ತಿಮ್ಮಪ್ಪನ ದರ್ಶನ ಪಡೆದ RCB ಆಟಗಾರರು
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಮುಸ್ಲಿಮರನ್ನ ದೇಶ ಬಿಟ್ಟು ಓಡಿಸೋಕಾಗುತ್ತಾ? ಸಿಎಂ ಹೀಗೆಂದಿದ್ಯಾಕೆ ನೋಡಿ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹ‌ನ ಅಪಘಾತ!
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಆಲೂಗಡ್ಡೆ ದರ ಪಾತಾಳಕ್ಕೆ ಕುಸಿತ, ಬೇಡಿಕೆಯೂ ಇಲ್ಲ! ರೈತರ ಗೋಳು ಕೇಳೋರಿಲ್ಲ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಪ್ರತಿ ಓವರ್​ಗೆ 14.23 ರನ್: ಪಿಎಸ್​ಎಲ್​ನಲ್ಲಿ ಹೊಸ ಇತಿಹಾಸ
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!
ಶಾಸಕನ ಮನೆಯಲ್ಲೇ ಕಾಫಿ ಕದಿಯುತ್ತಿದ್ದಿವನು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿದ!