Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !

Sidharth Shukla:ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಅವರೀಗ ಚಿಕ್ಕ ವಯಸ್ಸಿನಲ್ಲೇ ಬಾರದ ಲೋಕಕ್ಕೆ ತೆರಳಿದ್ದಾರೆ.

‘ಜೀವನ ತುಂಬ ಚಿಕ್ಕದು’-ಫೆಬ್ರವರಿಯಲ್ಲೇ ಈ ಮಾತು ಹೇಳಿದ್ದರು ಸಿದ್ಧಾರ್ಥ್​ ಶುಕ್ಲಾ !
ಸಿದ್ಧಾರ್ಥ್​ ಶುಕ್ಲಾ
Follow us
TV9 Web
| Updated By: Lakshmi Hegde

Updated on: Sep 02, 2021 | 5:07 PM

ಹಿಂದಿ ಉದಯೋನ್ಮುಖ ನಟ, ಬಿಗ್​ಬಾಸ್​ 13 ಸೀಸನ್​ ವಿಜೇತ ಸಿದ್ಧಾರ್ಥ್​ ಶುಕ್ಲಾ ಇಂದು ತಮ್ಮ 40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಿದ್ಧಾರ್ಥ್​ ಸಾವು ಅವರ ಕುಟುಂಬ, ಅಭಿಮಾನಿಗಳು, ಮಿತ್ರರು, ಸಹಕಲಾವಿದರಿಗೆಲ್ಲ ಬಹುದೊಡ್ಡ ಶಾಕ್​ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ ಸೋಷಿಯಲ್​ ಮೀಡಿಯಾದಲ್ಲಿ ಸಿದ್ಧಾರ್ಥ್​ ಶುಕ್ಲಾ ಅವರ ಹಳೇ ಟ್ವೀಟ್​ವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ.

ಸಿದ್ಧಾರ್ಥ್​ ಶುಕ್ಲಾ ತಮ್ಮ ಬ್ಯೂಸಿ ಶೆಡ್ಯೂಲ್​ ಮಧ್ಯೆಯೂ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಟ್ವಿಟರ್​, ಇನ್​ಸ್ಟಾಗ್ರಾಂಗಳಲ್ಲಿ ಸದಾ ಒಂದಿಲ್ಲೊಂದು ಪೋಸ್ಟ್​ ಹಾಕುತ್ತಿದ್ದರು. ಹಾಗೇ 2021ರ ಫೆಬ್ರವರಿ 24ರಂದು ಜೀವನದ ಬಗ್ಗೆ ಒಂದು ಅದ್ಭುತ ಸಂದೇಶವನ್ನು ಟ್ವೀಟ್​ ಮಾಡಿದ್ದರು. ಜೀವನ ತುಂಬ ಚಿಕ್ಕದು ಎಂದು ಹೇಳಿಕೊಂಡಿದ್ದರು. ಆ ಟ್ವೀಟ್​ ಕಾಕತಾಳೀಯವೆಂಬಂತೆ ಸ್ವತಃ ಸಿದ್ಧಾರ್ಥ್​ಗೇ ಅನ್ವಯ ಆಗಿದ್ದು ದುರಂತ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು.

ಅಂದು ಶುಕ್ಲಾ ಮಾಡಿದ್ದ ಟ್ವೀಟ್ ಹೀಗಿದೆ: ‘ಬೇರೆಯವರು ನಮ್ಮ ಬಗ್ಗೆ ಏನು ಮಾತನಾಡುತ್ತಾರೆ..ಯೋಚಿಸುತ್ತಾರೆ ಎಂದು ತಲೆಕೆಡಿಸಿಕೊಳ್ಳುವಷ್ಟೆಲ್ಲ ಜೀವನದಲ್ಲಿ ಸಮಯವಿಲ್ಲ. ಈ ಜೀವನ ತುಂಬ ಚಿಕ್ಕದು. ನಾವು ನಮ್ಮ ಬದುಕನ್ನು ಎಂಜಾಯ್​ ಮಾಡಬೇಕು ಮತ್ತು ಈ ಮೂಲಕ ಮಾತನಾಡುವವರಿಗೆ ನಿಮ್ಮ ಬಗ್ಗೆ ಮಾತನಾಡಲು ಏನಾದರೂ ವಿಷಯ ನೀವೇ ಕೊಡಬೇಕು..’

ಬರೀ ಇಷ್ಟೇ ಅಲ್ಲ, ಕಳೆದ ವರ್ಷ ಸೆಪ್ಟೆಂಬರ್​​ನಲ್ಲಿ ಕೂಡ ಸಿದ್ಧಾರ್ಥ್​ ಶುಕ್ಲಾ ಜೀವನದಕ್ಕೆ ಸಂಬಂಧಪಟ್ಟಂತೆ ತಮ್ಮ ವಿಚಾರಧಾರೆಯನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದರು. ‘ನೀವು ಇವತ್ತು ಏನು ಮಾಡುತ್ತಿರೋ? ಅದು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಕುರಿಗಳಂತೆ ಇದ್ದು ಸುದೀರ್ಘ ಜೀವನವನ್ನು ನಡೆಸುವ ಬದಲು, ಒಂದೇ ದಿನವಾದರೂ ಸರಿ ಸಿಂಹದಂತೆ ಬದುಕಬೇಕು’ ಎಂದು ಹೇಳಿದ್ದರು.

40ವರ್ಷಕ್ಕೇ ಜೀವನ ಅಂತ್ಯ ಅದೇನೋ ಗೊತ್ತಿಲ್ಲ..ಜೀವನ ಅಂತ ಬಂದಾಗಲೆಲ್ಲ ಸಿದ್ಧಾರ್ಥ್​ ಶುಕ್ಲಾ..ಶಾರ್ಟ್​ ಲೈಫ್​ ಬಗ್ಗೆಯೇ ಮಾತನಾಡಿದ್ದಾರೆ. ಆದರೆ ಇದೀಗ 40 ವರ್ಷದಲ್ಲೇ ತಮ್ಮ ಪಯಣ ಮುಗಿಸಿ ಹೊರಟಿದ್ದಾರೆ. ಇಡೀ ಬಾಲಿವುಡ್​ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಸಿದ್ಧಾರ್ಥ್​ ನಿಧನ; ಗೆಳತಿ ಶೆಹನಾಜ್​ ಪರಿಸ್ಥಿತಿ ಹೇಗಿದೆ? ಪ್ರತಿಕ್ರಿಯೆ ನೀಡಿದ ತಂದೆ

Sidharth Shukla: ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್ ತಾರೆಯರ ಸಂತಾಪ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಸೌದಿ ಅರೇಬಿಯಾಗೆ ಬಂದಿಳಿದ ಪ್ರಧಾನಿ ಮೋದಿಗೆ 21 ಗನ್ ಸಲ್ಯೂಟ್ ಸ್ವಾಗತ
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ