AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ರೆಡ್ ಕಾರ್ಪೇಟ್​ ಮೇಲೆ ನಡೆದಿದ್ದೇನು?

Urvashi Rautela: ನಟಿ ಊರ್ವಶಿ ರೌಟೆಲಾ ಕಾನ್ ಸಿನಿಮೋತ್ಸವದಲ್ಲಿ ಭಾಗವಹಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಊರ್ವಶಿ ಧರಿಸಿದ್ದ ಉಡುಪು, ಅವರು ಕೈಯಲ್ಲಿ ಹಿಡಿದಿದ್ದ ಗಿಣಿ ಸಖತ್ ಗಮನ ಸೆಳೆಯಿತು. ಆದರೆ ಅದೇ ಕಾನ್ ಉತ್ಸವದಲ್ಲಿ ಊರ್ವಶಿ ರೌಟೆಲಾಗೆ ಆಯೋಜಕರಿಂದ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿಜಕ್ಕೂ ನಡೆದಿದ್ದೇನು?

ಊರ್ವಶಿ ರೌಟೆಲಾಗೆ ಕಾನ್ ಫೆಸ್ಟಿವಲ್​ನಲ್ಲಿ ಅವಮಾನ, ರೆಡ್ ಕಾರ್ಪೇಟ್​ ಮೇಲೆ ನಡೆದಿದ್ದೇನು?
Urvashi Rautela
ಮಂಜುನಾಥ ಸಿ.
|

Updated on: May 15, 2025 | 12:24 PM

Share

ನಟಿ ಊರ್ವಶಿ ರೌಟೆಲಾ (Urvashi Rautela) ತಮ್ಮ ಸಿನಿಮಾ, ಐಟಂ ಹಾಡುಗಳ ಜೊತೆಗೆ ತಮ್ಮ ಫ್ಯಾಷನ್​ನಿಂದಲೂ ಗಮನ ಸೆಳೆಯುತ್ತಾರೆ. ಭಾರತದ ಬಲು ಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್ ಆಗಿರುವ ಊರ್ವಶಿ ರೌಟೆಲಾ ಮಾಡೆಲಿಂಗ್ ಸಹ ಮಾಡುತ್ತಾರೆ. ಸಿನಿಮೋತ್ಸವಗಳಲ್ಲಿ ರೆಡ್ ಕಾರ್ಪೇಟ್ ಮೇಲೆ ಕ್ಯಾಟ್ ವಾಕ್ ಮಾಡುವುದೆಂದರೆ ಊರ್ವಶಿಗೆ ಎಲ್ಲಿಲ್ಲದ ಪ್ರೀತಿ. ಇದೀಗ ಕಾನ್​ನಲ್ಲಿ ನಡೆಯುತ್ತಿರುವ ಸಿನಿಮೋತ್ಸವದಲ್ಲಿ ಊರ್ವಶಿ ಭಾಗಿ ಆಗಿದ್ದು, ಅಲ್ಲಿ ರೆಡ್ ಕಾರ್ಪೇಟ್ ಮೇಲೆ ಅದ್ಭುತವಾಗಿ ಕಾಣುತ್ತಿರುವ ಉಡುಗೆ ತೊಟ್ಟು ನಡೆದಿದ್ದಾರೆ. ಸಹಜವಾಗಿಯೇ ತಮ್ಮ ಉಡುಪು, ಸೌಂದರ್ಯದಿಂದ ಊರ್ವಶಿ ಗಮನ ಸೆಳೆದಿದ್ದಾರೆ. ಆದರೆ ಆ ಕಾರ್ಯಕ್ರಮದಲ್ಲಿ ಊರ್ವಶಿಗೆ ಆಯೋಜಕರು ಅವಮಾನ ಮಾಡಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಊರ್ವಶಿ ರೌಟೆಲಾ, ಕಾನ್ ಫೆಸ್ಟ್​ನ ರೆಡ್ ಕಾರ್ಪೇಟ್​ನ ಮೇಲೆ ಇತರೆ ಕೆಲವು ಸೆಲೆಬ್ರಿಟಿಗಳೊಟ್ಟಿಗೆ ಹೆಜ್ಜೆ ಹಾಕಿದರು. ನೂರಾರು ಕ್ಯಾಮರಾಮನ್​ಗಳಿಗೆ ಫೋಸು ಸಹ ನೀಡುತ್ತಿದ್ದರು. ಆದರೆ ಅಲ್ಲಿದ್ದ ಭದ್ರತೆಯವರು ಊರ್ವಶಿ ರೌಟೆಲಾ ಅವರನ್ನು ಬಲವಂತದಿಂದ ಹೊರಗೆ ಕಳಿಸಿದರು. ಊರ್ವಶಿಯನ್ನು ಭದ್ರತೆಯವರು ರೆಡ್ ಕಾರ್ಪೆಟ್​ನಿಂದ ಹೊರಗೆ ಬರಲು ಸೂಚಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಅಸಲಿಗೆ ಅಲ್ಲಿ ಆಗಿದ್ದೇ ಬೇರೆ. ಈ ಬಾರಿ ಕಾನ್ ರೆಡ್ ಕಾರ್ಪೆಟ್ ವಾಕ್​ಗೆ ಕೆಲವು ನಿಯಮಗಳನ್ನು ಮಾಡಲಾಗಿದೆ. ಉಡುಪುಗಳ ಬಗ್ಗೆ ಹಾಗೂ ರೆಡ್ ಕಾರ್ಪೆಟ್ ಮೇಲೆ ಎಷ್ಟು ಹೊತ್ತು ಇರಬಹುದು ಎಂಬ ಬಗ್ಗೆ ನಿಯಮಗಳನ್ನು ಮಾಡಲಾಗಿದೆ. ಪ್ರತಿ ವರ್ಷ ರೆಡ್ ಕಾರ್ಪೆಟ್ ವಾಕ್​ ನಿಂದಾಗಿ ಸಿನಿಮಾ ಪ್ರದರ್ಶನ ಹಾಗೂ ಇತರೆ ಕಾರ್ಯಕ್ರಮ ತಡವಾಗುತ್ತಿರುವ ಕಾರಣ ಈ ನಿಯಮ ಮಾಡಲಾಗಿದೆ. ಆದರೆ ರೆಡ್ ಕಾರ್ಪೆಟ್​ ಮೇಲೆ ನಡೆದ ಊರ್ವಶಿ ನಿಗದಿತ ಸಮಯಕ್ಕಿಂತಲೂ ಹೆಚ್ಚು ಹೊತ್ತು ರೆಡ್ ಕಾರ್ಪೆಟ್​ ಮೇಲೆ ನಿಂತು ಕ್ಯಾಮೆರಾಕ್ಕೆ ಫೋಸು ನೀಡುತ್ತಿದ್ದರು. ಇದೇ ಕಾರಣಕ್ಕೆ ಭದ್ರತೆಯವರು ನಟಿಯನ್ನು ಹೊರಗೆ ಕರೆದರು ಎನ್ನಲಾಗುತ್ತಿದೆ.

ಇದನ್ನೂ ಓದಿ:ನಾಲಗೆ ಹರಿಬಿಟ್ಟ ಊರ್ವಶಿ ರೌಟೆಲಾ, ಎಚ್ಚರಿಕೆ ನೀಡಿದ ದೇವಿ ಆರಾಧಕರು

ಏನೇ ಆಗಲಿ, ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಊರ್ವಶಿ ರೌಟೆಲಾ ಕಾನ್ ಸಿನಿಮೋತ್ಸವದಲ್ಲಿ ಗಮನ ಸೆಳೆದಿದ್ದಾರೆ. ಬಲು ಅದ್ಧೂರಿಯಾಗಿ ಕಾಣುತ್ತಿದ್ದ ಉಡುಗೆಯನ್ನು ಊರ್ವಶಿ ಧರಿಸಿದ್ದರು. ಊರ್ವಶಿ ಧರಿಸಿದ್ದ ಉಡುಗೆಯ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿಗಳಂತೆ. ಅದರ ಜೊತೆಗೆ ಒಂದು ಗಿಣಿಯನ್ನು ಸಹ ಊರ್ವಶಿ ಹಿಡಿದುಕೊಂಡಿದ್ದರು. ಅದೂ ಸಹ ಸಖತ್ ಗಮನ ಸೆಳೆಯಿತು. ಊರ್ವಶಿ ಪ್ರಸ್ತುತ ‘ವೆಲ್ ಕಮ್ ಟು ಜಂಗಲ್’, ‘ಕಸೂರ್ 2’ ಮತ್ತು ತೆಲುಗಿನ ‘ಬ್ಲಾಕ್ ರೋಸ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು