AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

YRF ಸ್ಪೈ ಯೂನಿವರ್ಸ್​ಗೆ ಹೊಸ ಸಿನಿಮಾ ಸೇರ್ಪಡೆ; ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ ಆಲಿಯಾ ಭಟ್

ಇಷ್ಟು ವರ್ಷ ರಿಲೀಸ್ ಆದ ಯಶ್ ರಾಜ್ ಫಿಲ್ಮ್ಸ್​ ಸ್ಪೈ ಯೂನಿವರ್ಸ್​​ನಲ್ಲಿ ಹೀರೋಗಳೇ ಹೆಚ್ಚು ಹೈಲೈಟ್​ ಆಗಿದ್ದರು. ಈ ಕಾರಣಕ್ಕೆ ಆಲಿಯಾ ಅವರೇ ಮುಖ್ಯಭೂಮಿಕೆಯಲ್ಲಿರುವ ಹೊಸ ಸಿನಿಮಾನ ಸಿದ್ಧಪಡಿಸಲು ಯಶ್​ ರಾಜ್ ಫಿಲ್ಮ್ಸ್ ರೆಡಿ ಆಗಿದೆ.

YRF ಸ್ಪೈ ಯೂನಿವರ್ಸ್​ಗೆ ಹೊಸ ಸಿನಿಮಾ ಸೇರ್ಪಡೆ; ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ ಆಲಿಯಾ ಭಟ್
ಆಲಿಯಾ ಭಟ್
ರಾಜೇಶ್ ದುಗ್ಗುಮನೆ
|

Updated on: Jul 14, 2023 | 11:32 AM

Share

ಯಶ್ ರಾಜ್ ಫಿಲ್ಮ್ಸ್ (Yash Raj Films) ಹಲವು ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಇದರ ಜೊತೆಗೆ ಭಾರತದ ಅತಿ ದೊಡ್ಡ ಸ್ಪೈ ಯೂನಿವರ್ಸ್​ನ ಸೃಷ್ಟಿ ಮಾಡಿದೆ. ಈ ಯೂನಿವರ್ಸ್​ ಅಡಿಯಲ್ಲಿ 2012ರಲ್ಲಿ ಮೊದಲ ಸಿನಿಮಾ ರಿಲೀಸ್ ಆಯಿತು. ಈಗ 11 ವರ್ಷಗಳು ಕಳೆದಿವೆ. ಈ ವೇಳೆ ಒಂದು ಭರ್ಜರಿ ಸುದ್ದಿ ಸಿಕ್ಕಿದೆ. ಯಶ್ ರಾಜ್ ಫಿಲ್ಮ್ಸ್​​ ನಿರ್ಮಾಣದ ಸ್ಪೈ ಯೂನಿವರ್ಸ್​​ನಲ್ಲಿ 8ನೇ ಸಿನಿಮಾ ಘೋಷಣೆಗೆ ರೆಡಿ ಆಗಿದೆ. ಈ ಚಿತ್ರದಲ್ಲಿ ಆಲಿಯಾ ಭಟ್ ಅವರು ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಅವರು ಭರ್ಜರಿ ಆ್ಯಕ್ಷನ್ ಮೆರೆಯಲಿದ್ದಾರೆ ಅನ್ನೋದು ವಿಶೇಷ.

ಯಶ್ ರಾಜ್ ಫಿಲ್ಮ್ಸ್​ನ ಆದಿತ್ಯ ಚೋಪ್ರಾ ಅವರು ಮುನ್ನಡೆಸುತ್ತಿದ್ದಾರೆ. ‘ಏಕ್​ ಥಾ ಟೈಗರ್’, ‘ಟೈಗರ್​ ಜಿಂದಾ ಹೈ’, ‘ವಾರ್’, ‘ಪಠಾಣ್’ ಸಿನಿಮಾಗಳು ಈ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗಿದೆ. ‘ಟೈಗರ್ 3’, ‘ವಾರ್ 2’ ಹಾಗೂ ಟೈಗರ್​ vs ಪಠಾಣ್​ ಸಿನಿಮಾ ಕೂಡ ಇದೇ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿದ್ದು, ಇದು ಕೂಡ ಸ್ಪೈ ಯೂನಿವರ್ಸ್​​ ಅಡಿಯಲ್ಲೇ ಬರಲಿದೆ. ಈಗ ಆದಿತ್ಯ ಚೋಪ್ರಾ ಅವರು ದೊಡ್ಡ ಪ್ಲ್ಯಾನ್ ರೂಪಿಸಿದ್ದಾರೆ.

ಇಷ್ಟು ವರ್ಷ ರಿಲೀಸ್ ಆದ ಯಶ್ ರಾಜ್ ಫಿಲ್ಮ್ಸ್​ ಸ್ಪೈ ಯೂನಿವರ್ಸ್​​ನಲ್ಲಿ ಹೀರೋಗಳೇ ಹೆಚ್ಚು ಹೈಲೈಟ್​ ಆಗಿದ್ದರು. ‘ಪಠಾಣ್’ ಸಿನಿಮಾದಲ್ಲಿ ದೀಪಿಕಾ ಪಾತ್ರ ಹೈಲೈಟ್ ಆಗಿತ್ತಾದರೂ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ಅವರ ಪಾತ್ರಕ್ಕೆ ಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾದವು. ಈ ಕಾರಣಕ್ಕೆ ಆಲಿಯಾ ಅವರೇ ಮುಖ್ಯಭೂಮಿಕೆಯಲ್ಲಿರುವ ಹೊಸ ಸಿನಿಮಾನ ಸಿದ್ಧಪಡಿಸಲು ಯಶ್​ ರಾಜ್ ಫಿಲ್ಮ್ಸ್ ರೆಡಿ ಆಗಿದೆ.

ಇದನ್ನೂ ಓದಿ: ‘ರಣಬೀರ್​ ಕಪೂರ್​ ಬೇಡ, ನೀವು ಮಾತ್ರ ಪೋಸ್​ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?

ಆಲಿಯಾ ಕೇವಲ ಗ್ಲಾಮರ್​ಗೆ ಸೀಮಿತರಾದವರಲ್ಲ. ಅವರು ವಿಭಿನ್ನ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಈ ಪಾತ್ರಕ್ಕೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅಂದಹಾಗೆ, 2024ರ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ