ಅಕ್ಕಿನೇನಿ ನಾಗಾರ್ಜುನಗೆ ವಿಶೇಷ ಅಡುಗೆ ಮಾಡಿದ್ದ ಚಿರಂಜೀವಿ; ಕಾರಣವೇನು?

| Updated By: ರಾಜೇಶ್ ದುಗ್ಗುಮನೆ

Updated on: Oct 28, 2024 | 8:25 AM

ಚಿರಂಜೀವಿ ಮತ್ತು ನಾಗಾರ್ಜುನರ ನಡುವಿನ ಆಪ್ತ ಸ್ನೇಹವನ್ನು ಈ ಲೇಖನ ವಿವರಿಸುತ್ತದೆ. 2021ರ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ, ಚಿರಂಜೀವಿ ನಾಗಾರ್ಜುನರಿಗೆ ವಿಶೇಷ ಅಡುಗೆ ಮಾಡಿ ತಿನ್ನಿಸಿದ್ದರು. ಈ ಘಟನೆಯ ಫೋಟೋಗಳನ್ನು ನಾಗಾರ್ಜುನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಅಕ್ಕಿನೇನಿ ನಾಗಾರ್ಜುನಗೆ ವಿಶೇಷ ಅಡುಗೆ ಮಾಡಿದ್ದ ಚಿರಂಜೀವಿ; ಕಾರಣವೇನು?
chiranjeevi
Follow us on

ಚಿರಂಜೀವಿ ಹಾಗೂ ನಾಗಾರ್ಜುನ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದು ಪದೇ ಪದೇ ಸಾಬೀತು ಆಗುತ್ತಲೇ ಇರುತ್ತದೆ. ಇಬ್ಬರ ಮಧ್ಯೆ ತುಂಬಾ ಆಪ್ತವಾಗಿದ್ದಾರೆ. ಈ ಮೊದಲು ಚಿರಂಜೀವಿ ಅವರು ನಾಗಾರ್ಜುನ ಅವರಿಗೆ ವಿಶೇಷ ರೀತಿಯಲ್ಲಿ ಅಡುಗೆಯನ್ನು ಮಾಡಿಕೊಟ್ಟಿದ್ದರು. ಈ ಫೋಟೋಗಳನ್ನು ನಾಗಾರ್ಜುನ ಅವರು ಶೇರ್ ಮಾಡಿಕೊಂಡಿದ್ದರು.

ಅದು 2021ರ ಸಮಯ. ಕೊವಿಡ್ ಎರಡನೇ ಅಲೆ ಎದ್ದ ಕಾಲ. ಆಗ ಒಬ್ಬರನ್ನೊಬ್ಬರು ಭೇಟಿ ಮಾಡಲೂ ಹೆದರುತ್ತಿದ್ದ ಕಾಲ ಅದಾಗಿತ್ತು. ಆಗ, ಚಿರಂಜೀವಿ ಹಾಗೂ ಅಕ್ಕಿನೇನಿ ನಾಗಾರ್ಜುನ ಅವರು ಪರಸ್ಪರ ಭೇಟಿ ಆಗಿದ್ದರು. ಈ ಭೇಟಿ ಸಂದರ್ಭದಲ್ಲಿ ಚಿರಂಜೀವಿ ಅವರು ನಾಗಾರ್ಜುನ ಅವರಿಗೆ ವಿಶೇಷ ಅಡುಗೆ ಮಾಡಿ ತಿನ್ನಿಸಿದ್ದರು. ಇದನ್ನು ಸವಿದಿದ್ದರು ನಾಗಾರ್ಜುನ.

ಆ ಸಂದರ್ಭದಲ್ಲಿ ಚಿರಂಜೀವಿ ನಟನೆಯ ‘ವೈಲ್ಡ್​ ಡಾಗ್’ ರಿಲೀಸ್ ಆಗುವುದರಲ್ಲಿ ಇತ್ತು. ಕೊವಿಡ್ ಸಂದರ್ಭ ಆಗಿದ್ದರಿಂದ ಜನರು ನಾನಾ ರೀತಿಯಲ್ಲಿ ಸಿನಿಮಾ ಪ್ರಚಾರ ಮಾಡುವ ಭರದಲ್ಲಿ ಇದ್ದರು. ಆಗ ಈ ರೀತಿಯಲ್ಲಿ ಚಿರಂಜೀವಿ ಅವರು ತಮ್ಮ ಸಿನಿಮಾನ ಪ್ರಚಾರ ಮಾಡಿದ್ದರು ಅನ್ನೋದು ವಿಶೇಷ.

ಚಿರಂಜೀವಿ ಪ್ಲೇಟ್​ನಲ್ಲಿ ನಾನ್​ ವೆಜ್ ಇತ್ತು. ಈ ಅಡುಗೆ ಮಾಡಿ ಚಿರಂಜೀವಿ ಪೋಸ್​ ಕೊಟ್ಟಿದ್ದರು. ಅಲ್ಲಿಯೇ ನಾಗಾರ್ಜುನ ಕೂಡ ಇದ್ದರು.  ಈ ಮೂಲಕ ಚಿರಂಜೀವಿ ಅವರು ತಾವು ಒಳ್ಳೆಯ ಕುಕ್ ಎಂಬುದನ್ನು ಅವರು ಸಾಬೀತು ಮಾಡಿದ್ದರು.

ಟಾಲಿವುಡ್​ನಲ್ಲಿ ಹೀರೋಗಳ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಆದರೆ, ಕನ್ನಡದಲ್ಲಿ ಅಷ್ಟಾಗಿ ಇಲ್ಲ ಎಂಬುದು ಬೇಸರದ ವಿಚಾರ ಎಂದು ಹೇಳಿದರೂ ತಪ್ಪಾಗಲಾರದು.

ಇದನ್ನೂ ಓದಿ: ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಾಗಾರ್ಜುನ

ಅಕ್ಕಿನೇನಿ ನಾಗಾರ್ಜುನ ಅವರು ಸದ್ಯ ಬಿಗ್ ಬಾಸ್​ನಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಅವರು ಅಭಿನಯಿಸುತ್ತಿದ್ದಾರೆ. ‘ಕುಬೇರ’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಇನ್ನು, ಚಿರಂಜೀವಿ ಅವರು ‘ವಿಶ್ವಂಭರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ. ಅವರ ಕೊನೆಯ ಸಿನಿಮಾ ‘ಭೋಲಾ ಶಂಕರ್’ 2023ರಲ್ಲಿ ರಿಲೀಸ್ ಆಗಿ ಸೋತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.