Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

| Updated By: Digi Tech Desk

Updated on: Jun 23, 2021 | 10:00 PM

Bigg Boss 8 Second Innings: ಲಾಕ್​ಡೌನ್​ ನಿಯಮಗಳಿಂದ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿರಲಿಲ್ಲ. ಈಗ ಅನೇಕ ತಿಂಗಳ ನಂತರದಲ್ಲಿ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿದ್ದಾರೆ. ಅವರ ಕೌಂಟರ್​ ಮಾತು ಕೇಳಿ ಎಲ್ಲರೂ ಖುಷಿಯಾಗಿದ್ದಾರೆ.  

Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ
ದಿವ್ಯಾ ಉರುಡುಗ
Follow us on

ಬಿಗ್​ ಬಾಸ್​ನಿಂದ ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಕೊವಿಡ್​ ತಂದಿಟ್ಟ ಸಮಸ್ಯೆಗಳು ಒಂದೆರಡಲ್ಲ. ಬಿಗ್​ ಬಾಸ್​ ಅರ್ಧದಲ್ಲಿ ನಿಲ್ಲೋಕೆ ಕೊವಿಡ್​ ಕಾರಣವಾಗಿತ್ತು. ಈಗ ಕುಟುಂಬದವರನ್ನು ಕಳೆದುಕೊಂಡ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್​ ಸಂಬರಗಿ ಹಾಗೂ ದಿವ್ಯಾ ಉರುಡುಗ ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಬುಧವಾರ (ಜೂನ್​ 23) ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿ ಪಡೆದಿದ್ದಾರೆ.

ಹೊರಗೆ ಕಳೆದ 43 ದಿನಗಳ ಕಾಲ ಏನೆಲ್ಲ ಆಗಿತ್ತು ಎಂಬುದನ್ನು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ದಿವ್ಯಾ ಉರುಡುಗ, ‘ನಾನು ಚಿಕ್ಕಪ್ಪ ಮತ್ತು ಅಜ್ಜನನ್ನು ಕಳೆದುಕೊಂಡೆ. ಅಮ್ಮನ ತಂಗಿ ಗಂಡ, ಅಮ್ಮನ ಅಪ್ಪ ಕೊವಿಡ್​ಗೆ ನಿಧನರಾದರು’ ಎಂದು ಭಾವುಕರಾದರು.

ಸೀಸನ್​ 8 ಅರ್ಧಕ್ಕೆ ನಿಲ್ಲುವುದಕ್ಕೂ ಕೆಲ ವಾರ ಮೊದಲು ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅವರು ಬಿಗ್​ ಬಾಸ್​ ನಡೆಸಿಕೊಡೋಕೆ ಸಾಧ್ಯವಾಗಿರಲಿಲ್ಲ. ಇದಾದ ನಂತರದಲ್ಲಿ ಲಾಕ್​ಡೌನ್​ ನಿಯಮಗಳಿಂದ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿರಲಿಲ್ಲ. ಈಗ ಅನೇಕ ತಿಂಗಳ ನಂತರದಲ್ಲಿ ಸುದೀಪ್​ ಬಿಗ್​ ಬಾಸ್​ ವೇದಿಕೆ ಏರಿದ್ದಾರೆ. ಅವರ ಕೌಂಟರ್​ ಮಾತು ಕೇಳಿ ಎಲ್ಲರೂ ಖುಷಿಯಾಗಿದ್ದಾರೆ.

ಇದನ್ನೂ ಓದಿ: Vaishnavi Gowda: ವೈಷ್ಣವಿಗೆ ಬಂದ ಮದುವೆ ಪ್ರಪೋಸಲ್ಸ್​ ಸಂಖ್ಯೆ​ ಕೇಳಿ ಅಚ್ಚರಿಪಟ್ಟ ಕಿಚ್ಚ ಸುದೀಪ್​

‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ

Published On - 8:18 pm, Wed, 23 June 21