AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​

A R Rahman Wife: ಸೈರಾ ಬಾನು ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​
ಎ.ಆರ್. ರೆಹಮಾನ್. ಸೈರಾ ಬಾನು
ಮದನ್​ ಕುಮಾರ್​
| Edited By: |

Updated on: Apr 27, 2023 | 7:00 AM

Share

ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ (A R Rahman) ಅವರು ಮೂಲತಃ ತಮಿಳುನಾಡಿನವರು. ಆದರೆ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಬಾಲಿವುಡ್​ನಲ್ಲೂ ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಹಲವು ಹರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಎ.ಆರ್​. ರೆಹಮಾನ್​ ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ಪತ್ನಿ ಸೈರಾ ಬಾನು (Saira Banu) ಕೂಡ ಇದ್ದರು. ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಅವರಿಬ್ಬರ ವಿಡಿಯೋ ವೈರಲ್​ ಆಗಿದೆ. ಆ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ (Tamil) ಮಾತನಾಡು ಎಂದು ಪತ್ನಿಗೆ ಎ.ಆರ್​. ರೆಹಮಾನ್​ ಅವರು ಸೂಚನೆ ನೀಡಿರುವುದು ಹೈಲೈಟ್​ ಆಗಿದೆ.

ಅದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮ. ಹಾಗಾಗಿ ಅಲ್ಲಿನ ಭಾಷೆಗೆ ಗೌರವ ನೀಡಬೇಕು ಎಂಬುದು ಎ.ಆರ್​. ರೆಹಮಾನ್​ ಅವರ ಉದ್ದೇಶ ಆಗಿರಬಹುದು. ಆದರೆ ಅವರ ಪತ್ನಿಗೆ ಅಷ್ಟು ಚೆನ್ನಾಗಿ ತಮಿಳು ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ತಮಿಳಿನಲ್ಲೇ ಮಾತನಾಡುವಂತೆ ಎ.ಆರ್​. ರೆಹಮಾನ್​ ಸೂಚನೆ ನೀಡಿದರು.

ಇದನ್ನೂ ಓದಿ: ಎ.ಆರ್​. ರೆಹಮಾನ್​ ಮಗಳು ಖತಿಜಾ ಮದುವೆ ಫೋಟೋಸ್​ ವೈರಲ್​; ಶುಭ ಹಾರೈಸಿದ ಸೆಲೆಬ್ರಿಟಿಗಳು

‘ಈಕೆ ನನ್ನ ಸಂದರ್ಶನವನ್ನು ಪದೇ ಪದೇ ವೀಕ್ಷಿಸುತ್ತಾ ಇರುತ್ತಾಳೆ. ಯಾಕೆಂದರೆ ಇವಳಿಗೆ ನನ್ನ ಧ್ವನಿ ಎಂದರೆ ಇಷ್ಟ’ ಎಂದು ಪತ್ನಿ ಸೈರಾ ಬಾನು ಬಗ್ಗೆ ಎ.ಆರ್​. ರೆಹಮಾನ್​ ಹೇಳಿದರು. ನಂತರ ಸೈರಾ ಬಾನು ಅವರ ಪ್ರತಿಕ್ರಿಯೆ ಪಡೆಯಲು ಅವರಿಗೆ ಮೈಕ್​ ನೀಡಲಾಯಿತು. ಸೈರಾ ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ. ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

ರೆಹಮಾನ್​ ಸೂಚನೆ ನೀಡಿದರೂ ಕೂಡ ಸೈರಾ ಬಾನು ಅವರು ತಮಿಳಿನಲ್ಲಿ ಮಾತನಾಡಿಲ್ಲ. ‘ಎಲ್ಲರಿಗೂ ಶುಭ ಸಂಜೆ. ತಮಿಳಿನಲ್ಲಿ ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ನನಗೆ ತುಂಬ ಖುಷಿಯಾಗಿದೆ. ಇವರ ಧ್ವನಿ ಎಂದರೆ ನನಗೆ ಬಹಳ ಇಷ್ಟ’ ಎಂದು ಇಂಗ್ಲಿಷ್​ನಲ್ಲಿ ಮಾತಾಡಿದ್ದಾರೆ ಸೈರಾ ಬಾನು.

ಇದನ್ನೂ ಓದಿ: ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

ಈ ವೈರಲ್​ ವಿಡಿಯೋದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಹಿಂದಿಯಲ್ಲಿ ಮಾತನಾಡಬೇಡ’ ಎಂದು ಎ.ಆರ್​. ರೆಹಮಾನ್​ ಹೇಳಿದ್ದಕ್ಕೆ ಉತ್ತರ ಭಾರತದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಾಲಿವುಡ್​ನಲ್ಲಿ ಇಷ್ಟೆಲ್ಲ ಯಶಸ್ಸು ಪಡೆದಿರುವ ಇವರಿಗೆ ಹಿಂದಿಯ ಬಗ್ಗೆ ಈ ರೀತಿ ಭಾವನೆ ಯಾಕಿದೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಎ.ಆರ್​. ರೆಹಮಾನ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್