AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​

A R Rahman Wife: ಸೈರಾ ಬಾನು ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​
ಎ.ಆರ್. ರೆಹಮಾನ್. ಸೈರಾ ಬಾನು
ಮದನ್​ ಕುಮಾರ್​
| Edited By: |

Updated on: Apr 27, 2023 | 7:00 AM

Share

ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ (A R Rahman) ಅವರು ಮೂಲತಃ ತಮಿಳುನಾಡಿನವರು. ಆದರೆ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಬಾಲಿವುಡ್​ನಲ್ಲೂ ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಹಲವು ಹರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಎ.ಆರ್​. ರೆಹಮಾನ್​ ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ಪತ್ನಿ ಸೈರಾ ಬಾನು (Saira Banu) ಕೂಡ ಇದ್ದರು. ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಅವರಿಬ್ಬರ ವಿಡಿಯೋ ವೈರಲ್​ ಆಗಿದೆ. ಆ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ (Tamil) ಮಾತನಾಡು ಎಂದು ಪತ್ನಿಗೆ ಎ.ಆರ್​. ರೆಹಮಾನ್​ ಅವರು ಸೂಚನೆ ನೀಡಿರುವುದು ಹೈಲೈಟ್​ ಆಗಿದೆ.

ಅದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮ. ಹಾಗಾಗಿ ಅಲ್ಲಿನ ಭಾಷೆಗೆ ಗೌರವ ನೀಡಬೇಕು ಎಂಬುದು ಎ.ಆರ್​. ರೆಹಮಾನ್​ ಅವರ ಉದ್ದೇಶ ಆಗಿರಬಹುದು. ಆದರೆ ಅವರ ಪತ್ನಿಗೆ ಅಷ್ಟು ಚೆನ್ನಾಗಿ ತಮಿಳು ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ತಮಿಳಿನಲ್ಲೇ ಮಾತನಾಡುವಂತೆ ಎ.ಆರ್​. ರೆಹಮಾನ್​ ಸೂಚನೆ ನೀಡಿದರು.

ಇದನ್ನೂ ಓದಿ: ಎ.ಆರ್​. ರೆಹಮಾನ್​ ಮಗಳು ಖತಿಜಾ ಮದುವೆ ಫೋಟೋಸ್​ ವೈರಲ್​; ಶುಭ ಹಾರೈಸಿದ ಸೆಲೆಬ್ರಿಟಿಗಳು

‘ಈಕೆ ನನ್ನ ಸಂದರ್ಶನವನ್ನು ಪದೇ ಪದೇ ವೀಕ್ಷಿಸುತ್ತಾ ಇರುತ್ತಾಳೆ. ಯಾಕೆಂದರೆ ಇವಳಿಗೆ ನನ್ನ ಧ್ವನಿ ಎಂದರೆ ಇಷ್ಟ’ ಎಂದು ಪತ್ನಿ ಸೈರಾ ಬಾನು ಬಗ್ಗೆ ಎ.ಆರ್​. ರೆಹಮಾನ್​ ಹೇಳಿದರು. ನಂತರ ಸೈರಾ ಬಾನು ಅವರ ಪ್ರತಿಕ್ರಿಯೆ ಪಡೆಯಲು ಅವರಿಗೆ ಮೈಕ್​ ನೀಡಲಾಯಿತು. ಸೈರಾ ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ. ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

ರೆಹಮಾನ್​ ಸೂಚನೆ ನೀಡಿದರೂ ಕೂಡ ಸೈರಾ ಬಾನು ಅವರು ತಮಿಳಿನಲ್ಲಿ ಮಾತನಾಡಿಲ್ಲ. ‘ಎಲ್ಲರಿಗೂ ಶುಭ ಸಂಜೆ. ತಮಿಳಿನಲ್ಲಿ ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ನನಗೆ ತುಂಬ ಖುಷಿಯಾಗಿದೆ. ಇವರ ಧ್ವನಿ ಎಂದರೆ ನನಗೆ ಬಹಳ ಇಷ್ಟ’ ಎಂದು ಇಂಗ್ಲಿಷ್​ನಲ್ಲಿ ಮಾತಾಡಿದ್ದಾರೆ ಸೈರಾ ಬಾನು.

ಇದನ್ನೂ ಓದಿ: ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

ಈ ವೈರಲ್​ ವಿಡಿಯೋದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಹಿಂದಿಯಲ್ಲಿ ಮಾತನಾಡಬೇಡ’ ಎಂದು ಎ.ಆರ್​. ರೆಹಮಾನ್​ ಹೇಳಿದ್ದಕ್ಕೆ ಉತ್ತರ ಭಾರತದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಾಲಿವುಡ್​ನಲ್ಲಿ ಇಷ್ಟೆಲ್ಲ ಯಶಸ್ಸು ಪಡೆದಿರುವ ಇವರಿಗೆ ಹಿಂದಿಯ ಬಗ್ಗೆ ಈ ರೀತಿ ಭಾವನೆ ಯಾಕಿದೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಎ.ಆರ್​. ರೆಹಮಾನ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್