AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​

A R Rahman Wife: ಸೈರಾ ಬಾನು ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

A R Rahman: ‘ಹಿಂದಿಯಲ್ಲಿ ಬೇಡ, ತಮಿಳಿನಲ್ಲಿ ಮಾತಾಡು’: ವೇದಿಕೆಯಲ್ಲಿ ಪತ್ನಿಗೆ ಸೂಚನೆ ನೀಡಿದ ಎ.ಆರ್​. ರೆಹಮಾನ್​
ಎ.ಆರ್. ರೆಹಮಾನ್. ಸೈರಾ ಬಾನು
ಮದನ್​ ಕುಮಾರ್​
| Edited By: |

Updated on: Apr 27, 2023 | 7:00 AM

Share

ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ (A R Rahman) ಅವರು ಮೂಲತಃ ತಮಿಳುನಾಡಿನವರು. ಆದರೆ ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಬಾಲಿವುಡ್​ನಲ್ಲೂ ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದಾರೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಹಲವು ಹರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಎ.ಆರ್​. ರೆಹಮಾನ್​ ಅವರು ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅವರ ಜೊತೆ ಪತ್ನಿ ಸೈರಾ ಬಾನು (Saira Banu) ಕೂಡ ಇದ್ದರು. ವೇದಿಕೆ ಮೇಲೆ ಜೊತೆಯಾಗಿ ಕಾಣಿಸಿಕೊಂಡ ಅವರಿಬ್ಬರ ವಿಡಿಯೋ ವೈರಲ್​ ಆಗಿದೆ. ಆ ಕಾರ್ಯಕ್ರಮದಲ್ಲಿ ತಮಿಳಿನಲ್ಲೇ (Tamil) ಮಾತನಾಡು ಎಂದು ಪತ್ನಿಗೆ ಎ.ಆರ್​. ರೆಹಮಾನ್​ ಅವರು ಸೂಚನೆ ನೀಡಿರುವುದು ಹೈಲೈಟ್​ ಆಗಿದೆ.

ಅದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮ. ಹಾಗಾಗಿ ಅಲ್ಲಿನ ಭಾಷೆಗೆ ಗೌರವ ನೀಡಬೇಕು ಎಂಬುದು ಎ.ಆರ್​. ರೆಹಮಾನ್​ ಅವರ ಉದ್ದೇಶ ಆಗಿರಬಹುದು. ಆದರೆ ಅವರ ಪತ್ನಿಗೆ ಅಷ್ಟು ಚೆನ್ನಾಗಿ ತಮಿಳು ಮಾತನಾಡಲು ಬರುವುದಿಲ್ಲ. ಹಾಗಿದ್ದರೂ ಕೂಡ ತಮಿಳಿನಲ್ಲೇ ಮಾತನಾಡುವಂತೆ ಎ.ಆರ್​. ರೆಹಮಾನ್​ ಸೂಚನೆ ನೀಡಿದರು.

ಇದನ್ನೂ ಓದಿ: ಎ.ಆರ್​. ರೆಹಮಾನ್​ ಮಗಳು ಖತಿಜಾ ಮದುವೆ ಫೋಟೋಸ್​ ವೈರಲ್​; ಶುಭ ಹಾರೈಸಿದ ಸೆಲೆಬ್ರಿಟಿಗಳು

‘ಈಕೆ ನನ್ನ ಸಂದರ್ಶನವನ್ನು ಪದೇ ಪದೇ ವೀಕ್ಷಿಸುತ್ತಾ ಇರುತ್ತಾಳೆ. ಯಾಕೆಂದರೆ ಇವಳಿಗೆ ನನ್ನ ಧ್ವನಿ ಎಂದರೆ ಇಷ್ಟ’ ಎಂದು ಪತ್ನಿ ಸೈರಾ ಬಾನು ಬಗ್ಗೆ ಎ.ಆರ್​. ರೆಹಮಾನ್​ ಹೇಳಿದರು. ನಂತರ ಸೈರಾ ಬಾನು ಅವರ ಪ್ರತಿಕ್ರಿಯೆ ಪಡೆಯಲು ಅವರಿಗೆ ಮೈಕ್​ ನೀಡಲಾಯಿತು. ಸೈರಾ ಇನ್ನೇನು ಮಾತನಾಡಬೇಕು ಎಂಬಷ್ಟರಲ್ಲಿ ಎ.ಆರ್​. ರೆಹಮಾನ್​ ಕಡೆಯಿಂದ ಸೂಚನೆ ಬಂತು. ‘ಹಿಂದಿಯಲ್ಲಿ ಬೇಡ. ತಮಿಳಿನಲ್ಲಿ ಮಾತನಾಡು’ ಎಂದು ಅವರು ಹೇಳಿದರು.

ರೆಹಮಾನ್​ ಸೂಚನೆ ನೀಡಿದರೂ ಕೂಡ ಸೈರಾ ಬಾನು ಅವರು ತಮಿಳಿನಲ್ಲಿ ಮಾತನಾಡಿಲ್ಲ. ‘ಎಲ್ಲರಿಗೂ ಶುಭ ಸಂಜೆ. ತಮಿಳಿನಲ್ಲಿ ನನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಕ್ಷಮೆ ಇರಲಿ. ನನಗೆ ತುಂಬ ಖುಷಿಯಾಗಿದೆ. ಇವರ ಧ್ವನಿ ಎಂದರೆ ನನಗೆ ಬಹಳ ಇಷ್ಟ’ ಎಂದು ಇಂಗ್ಲಿಷ್​ನಲ್ಲಿ ಮಾತಾಡಿದ್ದಾರೆ ಸೈರಾ ಬಾನು.

ಇದನ್ನೂ ಓದಿ: ಮನೆಯಲ್ಲಿದ್ದ ಆಸ್ಕರ್​ ಟ್ರೋಫಿ ಕಳೆದುಹಾಕಿದ್ದ ಎ.ಆರ್​. ರೆಹಮಾನ್​; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ

ಈ ವೈರಲ್​ ವಿಡಿಯೋದ ಬಗ್ಗೆ ನೆಟ್ಟಿಗರಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ‘ಹಿಂದಿಯಲ್ಲಿ ಮಾತನಾಡಬೇಡ’ ಎಂದು ಎ.ಆರ್​. ರೆಹಮಾನ್​ ಹೇಳಿದ್ದಕ್ಕೆ ಉತ್ತರ ಭಾರತದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಬಾಲಿವುಡ್​ನಲ್ಲಿ ಇಷ್ಟೆಲ್ಲ ಯಶಸ್ಸು ಪಡೆದಿರುವ ಇವರಿಗೆ ಹಿಂದಿಯ ಬಗ್ಗೆ ಈ ರೀತಿ ಭಾವನೆ ಯಾಕಿದೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದಕ್ಕೆ ಎ.ಆರ್​. ರೆಹಮಾನ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ