AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ

ಈ ರಿಯಾಲಿಟಿ ಶೋನ ಫಿನಾಲೆಯಲ್ಲಿ ಆಸ್ಟ್ರೆಲಿಯಾದ ಪೆಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್​ ಚೌಧರಿ ಕಡೆಯಿಂದ ಭಾರೀ ಕಾಂಪಿಟೇಷನ್​ ಇತ್ತು. ಅಂತಿಮವಾಗಿ ಜಸ್ಟಿನ್​ ವಿಜೇತರಾಗಿದ್ದಾರೆ.

ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ
ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 14, 2021 | 9:40 PM

ರಿಯಾಲಿಟಿ ಶೋಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ರಿಯಾಲಿಟಿ ಶೋಗಳಿಗೆ ದೊಡ್ಡಮಟ್ಟದ ಬೇಡಿಕೆ ಇದೆ. ಈಗ ಭಾರತ ಮೂಲದ ಜಸ್ಟಿನ್​ ನಾರಾಯಣ್​ ಎನ್ನುವ 27 ವರ್ಷದ ಯುವಕ ‘ಮಾಸ್ಟರ್​ಚೆಫ್​ ಆಸ್ಟ್ರೇಲಿಯಾ ಸೀಸನ್​ 13’ರ ವಿಜೇತರಾಗಿದ್ದಾರೆ. ಈ ಮೂಲಕ 1.86 ಕೋಟಿ ರೂಪಾಯಿ (2.5 ಲಕ್ಷ ಡಾಲರ್​) ಪ್ರಶಸ್ತಿ ಹಣ ಗೆದ್ದಿದ್ದಾರೆ.

ಈ ರಿಯಾಲಿಟಿ ಶೋನ ಫಿನಾಲೆಯಲ್ಲಿ ಆಸ್ಟ್ರೆಲಿಯಾದ ಪೆಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್​ ಚೌಧರಿ ಕಡೆಯಿಂದ ಭಾರೀ ಕಾಂಪಿಟೇಷನ್​ ಇತ್ತು. ಅಂತಿಮವಾಗಿ ಜಸ್ಟಿನ್​ ವಿಜೇತರಾಗಿದ್ದಾರೆ. ಮೊದಲ ರನ್ನರ್​ ಅಪ್​ ಆಗಿ ಪೆಟೆ ಆಯ್ಕೆಯಾದರೆ, ಎರಡನೇ ರನ್ನರ್​ ಅಪ್​ ಸ್ಥಾನಕ್ಕೆ ಕಿಶ್ವರ್​ ಖುಷಿಪಟ್ಟಿದ್ದಾರೆ.

ಮಾಸ್ಟರ್​ಚೆಫ್​ ಆಸ್ಟ್ರೇಲಿಯಾ ರಿಯಾಲಿಟಿಶೋನಲ್ಲಿ ಸಾಕಷ್ಟು ಏರಳಿತಗಳನ್ನು ಜಸ್ಟಿನ್​ ಕಂಡಿದ್ದರು. ಆದರೆ, ಇತ್ತೀಚೆಗೆ ಅವರ ಪರ್ಫಾರ್ಮೆನ್ಸ್​ ಉತ್ತಮವಾಗಿತ್ತು. ಅವರು ತಮ್ಮ ಅದ್ಭುತ ಅಡುಗೆ ಮೂಲಕ ಜಡ್ಜ್​ಗಳನ್ನು ಸೆಳೆದುಕೊಂಡಿದ್ದರು. ಅವರು ಮಾಡುತ್ತಿದ್ದ ಅಡುಗೆ ಜಡ್ಜ್​ಗಳಿಗೆ ಇಷ್ಟವಾಗಿತ್ತು. ಹೀಗಾಗಿ, ಅಂತಿಮವಾಗಿ ಅವರೇ ವಿಜೇತರಾದರು.

ಜಸ್ಟಿಸ್​ ನಾರಾಯಣ್​ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಜಸ್ಟಿನ್​ ತಮ್ಮ 13ನೇ ವಯಸ್ಸಿಗೆ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತೀಯ ಶೈಲಿಯ ಅಡುಗೆ ಹಾಗೂ ಪಾಶ್ಚಿಮಾತ್ಯ ಅಡುಗೆ ಎರಡರಲ್ಲೂ ಜಸ್ಟಿನ್​ ಪಳಗಿದ್ದಾರೆ. ಇಂಡಿಯನ್​ ಚಿಕನ್​ ಟ್ಯಾಕೋಸ್​, ಇಂಡಿಯನ್​ ಚಿಕನ್​ ಕರ್ರಿ ಸೇರಿ ಸಾಕಷ್ಟು ವಿಧದ ಅಡುಗೆಯನ್ನು ಜಸ್ಟಿನ್​ ರಿಯಾಲಿಟಿ ಶೋನಲ್ಲಿ ಮಾಡಿದ್ದರು.

2017ರಲ್ಲಿ ಜಸ್ಟಿನ್​ ಭಾರತಕ್ಕೆ ಬಂದಿದ್ದರು. ಇಲ್ಲಿಯ ಸಂಸ್ಕೃತಿ, ಇತಿಹಾಸ, ಜನರು ಹಾಗೂ ಆಹಾರ ಸಂಸ್ಕೃತಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆಸ್ಟ್ರೇಲಿಯಾದಲ್ಲಿ ಫುಡ್​ ಟ್ರಕ್​ ಆರಂಭಿಸುವ ಆಲೋಚನೆಯನ್ನು ಜಸ್ಟಿನ್​ ಹೊಂದಿದ್ದಾರೆ. ಇದರಲ್ಲಿ ಭಾರತೀಯ ಶೈಲಿಯ ಅಡುಗೆಯೂ ಇರಲಿದೆ ಅನ್ನೋದು ವಿಶೇಷ.

ಇದನ್ನೂ ಓದಿ: ಹಿರಿಯ ನಟಿ ವಿರುದ್ಧ ಗಂಭೀರ ಆರೋಪ ಮಾಡಿದ ಬಿಗ್​ ಬಾಸ್​ ಸ್ಪರ್ಧಿ; ರಿಯಾಲಿಟಿ ಶೋದಿಂದ ಹೊರ ಬರುವ ನಿರ್ಧಾರ

ಕರಾವಳಿ ಸ್ಪೆಷಲ್ ಪತ್ರೊಡೆ; ಹೊಸ ತರಹದ ಅಡುಗೆಯನ್ನೊಮ್ಮೆ ಮಾಡಿ ಸವಿಯಿರಿ

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ರಕ್ತ ಸುರಿಯುತ್ತಿದ್ದರೂ ನೊಯ್ಡಾದ ರಸ್ತೆಯಲ್ಲಿ ಯುವಕನ ಥಳಿಸಿದ ವಿಡಿಯೋ ವೈರಲ್
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ
ಶೂಟೌಟ್​​ನಲ್ಲಿ ಬಚಾವ್​ ಆಗಿದ್ದೇಗೆ? ರಿಕ್ಕಿ ರೈ ಬಿಚ್ಚಿಟ್ಟ ಸ್ಫೋಟಕ ಸತ್ಯ