AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ

ಮಾಡರ್ನ್​ ಹಾಗೂ ಟ್ರೆಡಿಷನಲ್​ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್​ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ.

ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ
ಅಮಿತಾಭ್​ ಬಚ್ಚನ್​ -ಜಯಾ ಬಚ್ಚನ್​
ರಾಜೇಶ್ ದುಗ್ಗುಮನೆ
| Edited By: |

Updated on: Jun 03, 2021 | 7:22 AM

Share

ಅಮಿತಾಭ್​ ಬಚ್ಚನ್​ ಹಾಗೂ ಪತ್ನಿ ಜಯಾ ಬಚ್ಚನ್​ ಜೋಡಿಗೆ ಇಂದು 48ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅನೇಕರಿಗೆ ಇವರ ದಾಂಪತ್ಯ ಮಾದರಿಯಾಗಿದೆ. ಇವರ ಹೊಂದಾಣಿಕೆ ನೋಡಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಿದೆ. ವಿಶೇಷ ಎಂದರೆ ಅಮಿತಾಭ್​ ಹಾಗೂ ಜಯಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್​ 3ರಂದು ಮದುವೆ ಆಗಿದ್ದರು.

ಮಾಡರ್ನ್​ ಹಾಗೂ ಟ್ರೆಡಿಷನಲ್​ ಅವತಾರ ತಾಳುವ ಹುಡುಗಿ ಎಂದರೆ ಅಮಿತಾಭ್​ಗೆ ಇಷ್ಟವಾಗಿತ್ತಂತೆ. ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಜಯಾ ಅವರನ್ನು ನೋಡಿದಾಗ ‘ಇವಳು ನಾನು ಅಂದುಕೊಂಡ ರೀತಿಯಲ್ಲೇ ಇದ್ದಾಳೆ’ ಎಂದುಕೊಂಡಿದ್ದರಂತೆ. ಜಯಾ ಅವರ ಕಣ್ಣುಗಳು ಅಮಿತಾಭ್​ಗೆ ತುಂಬಾನೇ ಇಷ್ಟವಾಗಿದ್ದವಂತೆ. ಅವರ ಜತೆಯೇ ನಟಿಸೋಕೆ ಅವಕಾಶ ಸಿಕ್ಕಾಗ ಅಮಿತಾಭ್​ ಸಾಕಷ್ಟು ಖುಷಿಪಟ್ಟಿದ್ದರು.

ಆರಂಭದಲ್ಲಿ, ಅಮಿತಾಭ್​ ಓರ್ವ ಫ್ಲಾಪ್​ ಹೀರೋ ಎನ್ನುವ ಕಾರಣಕ್ಕೆ ಅವರ ಜತೆ ನಟಿಸೋಕೆ ನಾಯಕಿಯರು ಹಿಂದೇಟು ಹಾಕುತ್ತಿದ್ದರು. ಆ ಸಮಯದಲ್ಲೂ ಅಮಿತಾಭ್​ ಜತೆ ನಟಿಸೋಕೆ ಜಯಾ ಒಪ್ಪಿದ್ದರು. ಈ ಮೂಲಕ ಜಯಾ ಹಾಗೂ ಅಮಿತಾಭ್ ಪ್ರಯಾಣ ಆರಂಭವಾಯಿತು. ಅಮಿತಾಭ್​ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ಬನ್ಸಿ ಬಿರ್ಜು (1972) ಚಿತ್ರದ ಸೆಟ್​ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’​ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು.

ಜಂಜೀರ್​ ಸಿನಿಮಾದಲ್ಲಿ ಅಮಿತಾಭ್​ ಹಾಗೂ ಜಯಾ ಹತ್ತಿರವಾದರು. ಈ ಚಿತ್ರ ಹಿಟ್​ ಆದರೆ ಜಯಾ ಅವರನ್ನು ಲಂಡನ್​ಗೆ ಕರೆದುಕೊಂಡು ಹೋಗಿ ಸೆಲೆಬ್ರೇಟ್​ ಮಾಡಬೇಕು ಎನ್ನುವ ಕನಸನ್ನು ಅಮಿತಾಭ್​ ಕಂಡಿದ್ದರು. ಈ ವಿಚಾರ ಅಮಿತಾಭ್​ ತಂದೆ ಹರಿವಂಶ್​ ರೈ ಬಚನ್​ಗೆ ತಿಳಿಯಿತು. ಆಗ ಅವರು ಹೇಳಿದ್ದು ಒಂದೇ ಮಾತು. ‘ನೀವು ವಿದೇಶಕ್ಕೆ ಹೋಗುವುದಾದರೆ ಮೊದಲು ಮದುವೆ ಆಗಿ. ಆ ನಂತರ ವಿದೇಶಕ್ಕೆ ಹೋಗೋಕೆ ನನ್ನ ಅಭ್ಯಂತರವಿಲ್ಲ’ ಎಂದಿದ್ದರು.

ಅಂತೆಯೇ 1973ರಲ್ಲಿ ಅಮಿತಾಭ್​-ಜಯಾ ಮದುವೆ ಆದರು. ನಂತರ ಜಯಾ ಹಾಗೂ ಅಮಿತಾಭ್​ ಅಭಿಮಾನ್​, ಚುಪ್​ಚುಪ್​ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು.

ಇದನ್ನೂ ಓದಿ: 2 ಕೋಟಿ ರೂ. ದೇಣಿಗೆ ನೀಡಿ, ಮಕ್ಕಳ ದತ್ತು ಪಡೆದು, ನೂರಾರು ರೈತರ ಸಾಲ ತೀರಿಸಿದ ಅಮಿತಾಭ್​ಗೆ ಯಾಕಿಷ್ಟು ಕೆಟ್ಟ ಕಮೆಂಟ್​?

‘ನಾನು ದೇಣಿಗೆ ಕೇಳಲ್ಲ, ಕೊಡ್ತೀನಿ’; ಬೇರೆ ಸ್ಟಾರ್​ಗಳಿಗಿಂತ ಭಿನ್ನ ಹೆಜ್ಜೆ ಇಟ್ಟ ಅಮಿತಾಭ್​

Follow Us
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಕಾವೇರಿ ನೀರು ಹಂಚಿಕೆ ವಿವಾದ: ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ